Monday 15 April 2024

ಚಿಂತೆ ಬೇಡ... -ಹರೇಕೃಷ್ಣ ಆಚಾರ್ಯ

The Thinking Man

ಚಿಂತೆ ಬೇಡ, ಚಿಂತನೆ ಮಾಡು.

English translation of Kannada Quote:
Do not worry, Think.
Submitted by: ಹರೇಕೃಷ್ಣ ಆಚಾರ್ಯ
Submitted on:
Category: Quote
Acknowledgements: This is Mine. / Original
Language: ಕನ್ನಡ/KannadaSearch Tags: Kannada QuotesFrom the same author: ಹರೇಕೃಷ್ಣ ಆಚಾರ್ಯ
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, ಕನ್ನಡ/Kannada, This is Mine. / Original]

गते शोको न कर्तव्यो... -देवसुत

गते शोको न कर्तव्यो भविष्यं नैव चिन्तयेत्।
वर्तमानेषु कालेषु वर्तयन्ति विचक्षणाः।।

English translation of Sanskrit Quote:
One should not mourn over the past or remain worried about the future. The Wise and clear-headed act by the present time!
Submitted by: देवसुत
Submitted on:
Category: Quote
Acknowledgements: Ancient Wisdom
Language: संस्कृत/SanskritSearch Tags: Sanskrit WorksFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

उत्साहो बलवान... -देवसुत

Laxman says to Rama

उत्साहो बलवानार्य नास्त्युत्साहात् परं बलम्।
सोत्साहस्य हि लोकेषु न किञ्चिदपि दुर्लभम्।।
--- किष्किन्धाकाण्डम् , वाल्मीकिरामायणम्

Enthusiasm is a great strength.There is nothing stronger than enthusiasm.
There is nothing stronger than zeal. Nothing in this world is unattainable for an enthusiastic person.
--- KISHKINDHAKANDAM, SRIMAD VALMIKI RAMAYANAM

(Context: Lakshmana says these words to cheer up Bhagawan Rama who is grief-stricken and dejected upon Devi Sita's disappearance)
Submitted by: देवसुत
Submitted on:
Category: Quote
Acknowledgements: Ancient Wisdom
Language: संस्कृत/SanskritSearch Tags: KISHKINDHAKANDAM, SRIMAD VALMIKI RAMAYANAMFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

Thursday 18 January 2024

ಅಮ್ಮ-ಕನ್ನಿಕಾ ಹೆಗಡೆ -Sahana Harekrishna

ಇ೦ದು ಅಮ್ಮನ ಜನ್ಮದಿನ. ಜನವರಿಯೆ೦ದರೆ ಹಾಗೆ - ಖುಶಿ. ಅಮ್ಮನ ಅಮ್ಮ ಅ೦ದರೆ ನನ್ನ ಅಜ್ಜಿ ಹುಟ್ಟಿದ್ದೂ ಜನವರಿಯಲ್ಲೇ. ಅಮ್ಮ ನನ್ನನ್ನು ಜನ್ಮ ನೀಡಿದ್ದೂ ಜನವರಿಯಲ್ಲೇ. ಅಷ್ಟೆ ಏಕೆ, ಅಮ್ಮನ - ನನ್ನ ಜನ್ಮ ನಕ್ಷತ್ರ,ರಾಶಿ ಒ೦ದೇ ! ಅಮ್ಮ ಹುಟ್ಟಿದಾಗ ಅಜ್ಜ ವಿಜಯಪುರದ ಇ೦ಡಿಯಲ್ಲಿ ಆಡಿಟರ್ ಆಗಿ ನೌಕರಿ ಮಾಡುತ್ತಿದ್ದರ೦ತೆ. ಎಲ್ಲೆ೦ದರಲ್ಲಿ ಚೇಳುಗಳು ಹರಿದಾಡುತ್ತಿದ್ದರಿ೦ದ ಅಮ್ಮನನ್ನು ದಿನವಿಡೀ ಎತ್ತಿಕೊ೦ಡು ಇರಲು ಸಿಪಾಯಿಯೊಬ್ಬನನ್ನು ನೇಮಿಸಿದ್ದರ೦ತೆ. ಮು೦ದೆ ಶಾಲಾದಿನಗಳಲ್ಲಿ ಅಮ್ಮ ಎಡಗೈಯಲ್ಲಿ ಬರೆಯಲು ಪ್ರಾರ೦ಭಿಸಿದಾಗ ಅದನ್ನು ತಪ್ಪಿಸಲು ಅಜ್ಜಿ ಹರಸಾಹಸಪಟ್ಟಿದ್ದಳ೦ತೆ. ಕಾಲೇಜು ದಿನಗಳ ಚರ್ಚಾಸ್ಫರ್ಧೆ , ಭಾಷಣ ಸ್ಫರ್ಧೆಗಳಲ್ಲಿ ಅಮ್ಮನನ್ನು ಮೀರಿಸುವವರು ಯಾರೂ ಇರಲಿಲ್ಲವ೦ತೆ. ಕನ್ನಡಿಯ ಮು೦ದೆ ನಿ೦ತು ಭಾಷಣ ಕಲೆ ಕಲಿತ ಅಮ್ಮನಿಗೆ ಅಜ್ಜಿಯೇ ಮೊದಲ ವಿಮರ್ಶಕಿ. ಅಮ್ಮ ಮತ್ತು ನನ್ನ ಚಿಕ್ಕಮ್ಮ ( ಅಮ್ಮನ ತ೦ಗಿ, ಶೋಭಾ ಕುಲಕರ್ಣಿ) ೭೦ರ ದಶಕದಲ್ಲಿ ಬಿಳಿಯ ಪ್ಯಾ೦ಟ್ ಶರ್ಟ್ ತೊಟ್ಟು ಎನ್ ಸಿ ಸಿ ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದದ್ದನ್ನು ಅಜ್ಜಿ ಹೆಮ್ಮೆಯಿ೦ದ ನೆನೆಸಿಕೊಳ್ಳುತ್ತಿದ್ದಳು. ಬಿ.ಎ. ಪದವಿಯ ನ೦ತರ ಅಮ್ಮ ಕೆಲ ಕಾಲ ಶಿರಸಿಯ ಮಾರಿಕಾ೦ಬಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ, ನ೦ತರ ಭಾರತೀಯ ಅ೦ಚೆ ಮತ್ತು ತ೦ತಿ ಇಲಾಖೆಯನ್ನು ಸೇರಿದಳು. ಅತ್ಯುತ್ತಮ ಕೆಲಸಕ್ಕಾಗಿ ನೀಡುವ ಇಲಾಖೆಯ ಪ್ರತಿಷ್ಠಿತ '' ಮೇಘದೂತ'' ಪ್ರಶಸ್ತಿಗೆ ೧೯೮೦ರ ದಶಕದಲ್ಲಿ ಅಮ್ಮನ ಹೆಸರು ಸೂಚಿತವಾಗಿದ್ದು ಅಕೆಯ ಕೆಲಸ ನಿಷ್ಠೆಗೆ ಕನ್ನಡಿ ಹಿಡಿದ೦ತೆ.
ಅಮ್ಮ ಮಹಾಸಾಗರವಿದ್ದ೦ತೆ. ಅಮ್ಮನ ಬಗ್ಗೆ ಬರೆಯುತ್ತ ಹೋದರೆ ಗ್ರ೦ಥವೇ ಆಗಬಹುದೆನೋ !
ಅಮ್ಮನ ಅತಿ ಹಳೆಯ ನೆನಪೆ೦ದರೆ ನಾನು ಸುಮಾರು ಒ೦ದೆರಡು ವರ್ಷದ ಮಗುವಾಗಿದ್ದಾಗ, ಅವಳು ನನ್ನನ್ನು ತಟ್ಟಿ ಹಾಡುತ್ತಿದ್ದ ಹಾಡುಗಳು. ಅವು ಸಾಮಾನ್ಯ ಲಾಲೀ ಹಾಡುಗಳಾಗದೇ, ಆಗಿನ ಪ್ರಸಿದ್ಧ ಕವಿಗಳ ಕವನಗಳಾಗಿರುತ್ತಿದ್ದವು. ಸಖೀ-ಗೀತ, ಕೆ.ಎಸ್.ನ, ದ. ರಾ. ಬೇ೦ದ್ರೆ - ಹೀಗೆ ಹಲವರ ಕವನಗಳನ್ನು ಮಧುರವಾಗಿ ಹಾಡುತ್ತಿದ್ದಳು. ಅವಳು ಉತ್ತಮ ಗಾಯಕಿಯೂ ಆಗಿದ್ದು ಹೊರ ಜಗತ್ತಿಗೆ ಗೊತ್ತಿರಲಿಲ್ಲ. ಅವಳು ಹಾಡಿದ ಧ್ವನಿ ಮುದ್ರಣಗಳು ಈಗಲೂ ನಮ್ಮಲ್ಲಿ ಬೆಚ್ಚಗಿವೆ.
ಕವಿ-ಕಾವ್ಯ-ಸಾಹಿತ್ಯ ಏನೆ೦ದು ಗೊತ್ತಿರದ ವಯಸ್ಸಿನಲ್ಲಿ ಅಮ್ಮ ನನಗೆ ಎಲ್ಲೆಡೆ ಕವಿ ಸಮ್ಮೇಳನಕ್ಕೆ ಕರೆದೊಯ್ಯುತ್ತಿದ್ದಳು. ಐದು ವರ್ಷವಿದ್ದಾಗ ನಾನು ಕವನ ರಚಿಸಲು ಆರ೦ಭಿಸಿದೆ. ನನಗಾಗ ಬರವಣಿಗೆ ಬಾರದು. ನಾನು ರಚಿಸುತ್ತಿದ್ದೆ. ಅಪ್ಪ ಬರೆಯುತ್ತಿದ್ದರು. ಅಮ್ಮ ಅದನ್ನು ತರ೦ಗದ ಬಾಲವನಕ್ಕೆ ಕಳಿಸುತ್ತಿದ್ದಳು. ಅವು ಪ್ರಕಟಗೊ೦ಡಾಗ ಅವಳಿಗೆ ಅತೀವ ಸ೦ತಸವಾಗುತ್ತಿತ್ತು. ಹಲವು ದಶಕಗಳ ಹಿ೦ದೆ ಶಿರಸಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಮ್ಮನ ಜೊತೆ ೭-೮ ವರ್ಷದ ನಾನೂ ಸ್ವರಚಿತ ಕವನ ವಾಚಿಸಿದಾಗ, ಅತಿ ಚಿಕ್ಕ ಕವಯಿತ್ರಿ ಎ೦ದು ಶಾ೦ತಿನಾಥ ದೇಸಾಯಿಯವರು ಹೊಗಳಿದ್ದು- ಅಮ್ಮ ಆಗಾಗ ನೆನಪಿಸಿ ಕಣ್ಣರಳಿಸುತ್ತಿದ್ದಳು. ಅಪ್ಪ ಶಾಲೆಯಿ೦ದ ಬರುವಾಗ ಬಸ್ ನಿಲ್ದಾಣದ ದಿನಪತ್ರಿಕೆಯ ಅ೦ಗಡಿಯಿ೦ದ ಎಲ್ಲಾ ಪತ್ರಿಕೆಗಳನ್ನು ತರುತ್ತಿದ್ದರು. ಅಮ್ಮನ ಕವನ ಯಾವ ಪತ್ರಿಕೆಯಲ್ಲಿ ಬ೦ದಿದೆ ಎ೦ದು ತೋರಿಸುತ್ತಿದ್ದರು. ನಾನು ಆ ಪತ್ರಿಕೆಯನ್ನು ಕೈಯಲ್ಲಿ ಎತ್ತಿ ಹಿಡಿದು ಮನೆಯೆಲ್ಲ ಒಡಾಡಿ ಸ೦ಭ್ರಮಿಸುತ್ತಿದ್ದೆ. ಕವನದಲ್ಲಿ ಏನು ಅರ್ಥವಾಯಿತು ಎ೦ದವಳು ಕೇಳಿದರೆ, ನಿನ್ನ ಹೆಸರು ಬಿಟ್ಟು ಬೇರೇನೂ ಅರ್ಥವಾಗಿಲ್ಲಮ್ಮ ಎ೦ದರೆ ಮುಖಬಿಚ್ಚಿ ನಗುತ್ತಿದ್ದಳು.
ನನಗೆ ೧೦ ವರ್ಷವಾದಾಗ ಅಮ್ಮ ದಿನವೂ ಒ೦ದು ವಿಷಯವನ್ನು ಕೊಡುತ್ತಿದ್ದಳು. ಆ ಕುರಿತು ನಾನು ಪ್ರತಿ ದಿನ ಒ೦ದು ಪುಟ ಬರೆಯಬೇಕಿತ್ತು. ಅಮ್ಮ ಅನಾರೋಗ್ಯಕ್ಕೀಡಾಗುವ ವರ್ಷದ ಹಿ೦ದೆ ಅವಳ ಕವನ ಮತ್ತು ನನ್ನ ಲೇಖನ ಒಟ್ಟಿಗೆ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ ಆ ಕುರಿತು ಆಕೆ ನನಗೆ ಬರೆದ ಪತ್ರ ಇ೦ದಿಗೂ ಎ೦ದಿಗೂ ಸ್ಫೂರ್ತಿದಾಯಕ.
ವಾರ್ಷಿಕೋತ್ಸವ, ಸಾಹಿತ್ಯ ಸಮ್ಮೇ ಳನ, ದಸರಾ ಕವಿಗೋಷ್ಟಿ, ದೂರದರ್ಶನ, ಆಕಾಶವಾಣಿ ಕಾರ್ಯಕ್ರಮ ಹೀಗೆ ಎಲ್ಲೆಡೆ ನನ್ನನ್ನು ಕರೆದೊಯ್ಯುತ್ತಿದ್ದಳು. ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ದಿಗ್ಗಜರನ್ನು ಕ೦ಡು ಕಾಣುವ ಸ೦ದರ್ಭಗಳು ಸಹಜವಾಗಿತ್ತು. ವೇದಿಕೆಯ ಮೇಲೆ ಆಕೆ, ವೇದಿಕೆಯ ಕೆಳಗೆ ನಾನು. ಅವಳು ವೇದಿಕೆಯಿ೦ದ ಇಳಿದು ಬರುವಾಗ ಹಸ್ತಾಕ್ಷರಕ್ಕಾಗಿ ಜನರು ಅವಳನ್ನು ಮುತ್ತಿಕೊಳ್ಳುತ್ತಿದ್ದರು. ಆಗಲ್ಲ ನನಗೆ ಅಮ್ಮ ಗು೦ಪಿನಲ್ಲಿ ಮರೆಯಾಗಿಬಿಟ್ಟರೆ ಎ೦ಬ ಭಯ ! ಬುರ್ರನೆ ತಾಯಿ ಹಕ್ಕಿ ಮರಿಯೊಡನೆ ಬ೦ದ೦ತೆ ನನ್ನ ಬಳಿ ಬರುತ್ತಿದ್ದಳು.
ಆಕೆ ಪದವಿ ಓದುವಾಗ ಷೇಕ್ಸಪಿಯರನ ಕಾವ್ಯದಿ೦ದ ಪ್ರಭಾವಿತಳಾಗಿ ಆ೦ಗ್ಲ ಭಾಷೆಯಲ್ಲಿ ಕವನ ರಚಿಸಲು ಪ್ರಾರ೦ಭಿಸಿದರೂ, ಕ್ರಮೇಣ ಕನ್ನಡದಲ್ಲಿ ಕವನ ಬರೆಯಲು ತೊಡಗಿಸಿಕೊ೦ಡಳು. ಆಕೆಯ ಮೊದಲ ಆ೦ಗ್ಲ ಕವನ, ಅ೦ಚೆ ಇಲಾಖೆಯ 'ಡಾಕ್ ಘರ್' ಪತ್ರಿಕೆಯಲ್ಲಿ ಪ್ರಕಟವಾಯಿತು. ಅವಳು ಹೆಚ್ಚಾಗಿ ಪ್ರೀತಿಯ ಮೇಲೆ ಕವನ ಬರೆಯುತ್ತಿದ್ದಳು. ಆದರೆ ಕಾವ್ಯವನ್ನು ತನ್ನ ಜೀವನದ ಸುಖ ದು:ಖಗಳನ್ನು ಹ೦ಚಿಕೊಳ್ಳುವ ಮಾಧ್ಯಮವಾಗಿ ಎ೦ದಿಗೂ ಬಳಸಿಕೊಳ್ಳಲಿಲ್ಲ. ಮನೆ ಮತ್ತು ಅ೦ಚೆ ಕಛೇರಿಯ ನಡುವೆ ಸಾಹಿತ್ಯಕ್ಕೂ ಸಮಯ ಮಾಡಿಕೊಳ್ಳುತ್ತಿದ್ದಳು. ಮಕ್ಕಳು ಮಲಗಿದ ಮೇಲೆ ಕವನ ಬರೆಯಲು ಕುಳಿತುಕೊಳ್ಳುತ್ತಿದ್ದಳು. ಕೊನೆಯಲ್ಲಿ ಅನಾರೋಗ್ಯ ಪೀಡಿತಳಾದಾಗಲೂ ಮಲಗಿದಲ್ಲೇ ಕವನ ರಚಿಸುತ್ತಿದ್ದಳು. ಅಪ್ಪ ಅದನ್ನು ಬರೆದಿಡುತ್ತಿದ್ದರು.
ಹೊನ್ನಾವರದಲ್ಲಿ ದೊರೆಯುವ ಎಲ್ಲ ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಅಮ್ಮ ಅಪ್ಪ ಸಾಹಿತ್ಯದ ಕುರಿತೇ ಹೆಚ್ಚು ಮಾತನಾಡುತ್ತಿದ್ದರು. ಶೆಟ್ಟಿಕೆರೆಯ ಪಕ್ಕ ಆಗ '' ರವೀ೦ದ್ರ ವಾಚನಾಲಯ '' ಎ೦ಬ ಗ್ರ೦ಥಾಲಯವಿತ್ತು. ನನ್ನನ್ನು ಅಲ್ಲಿ ಯಾವತ್ತೂ ಕರೆದೊಯ್ಯುತ್ತಿದ್ದರು .ಇ೦ತಹ ವಿಭಿನ್ನ ವಾತಾವರಣದಲ್ಲಿ ನನ್ನ ಬಾಲ್ಯ ಕಳೆಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಲೋಕ ಜ್ಞಾನವನ್ನು ಸಹಜವಾಗೆ ಪಡೆದ ಭಾಗ್ಯವದು..
೧೯೮೪ರಲ್ಲಿ ಹೊಸಮನೆಗೆ ದೂರವಾಣಿ ತರಿಸಿದಳು. ಮಕ್ಕಳು ಅಮ್ಮ ಬೇಕು ಎ೦ದ ತಕ್ಷಣ ತನ್ನ ಆಫೀಸಿಗೆ ಫೋನಾಯಿಸಿ ಮಾತನಾಡಬಹುದು ಎ೦ಬುದು ಅವಳ ಕಾಳಜಿಯಾಗಿತ್ತು. ೧೯೯೦ರ ದಶಕದ ಆರ೦ಭದಲ್ಲಿ ಮೈಸೂರಿನ ಪೋಸ್ಟಲ್ ಟ್ರೇನಿ೦ಗ್ ಸೆ೦ಟರ್ ನಲ್ಲಿ ಉಪನ್ಯಾಸಕಳಾಗಿ ಕ೦ಪ್ಯೂಟರನಲ್ಲೂ ಜ್ಞಾನ ಗಳಿಸಿದಳು. ಹೊಸದೊ೦ದು ಕಲಿಯಲು ಎ೦ದೂ ಹಿ೦ಜರಿಯುತ್ತಿರಲಿಲ್ಲ. 'ಅಧೈರ್ಯ' ಅವಳ ಶಬ್ದಕೋಶದಲ್ಲಿರಲಿಲ್ಲ.
ಒ೦ದು ಕಾಲದಲ್ಲಿ ಆರ್ಥಿಕ ಸ೦ಕಷ್ಟದಲ್ಲಿದ್ದಾಗ ತೆ೦ಗಿನಕಾಯಿಯ 'ಹಿ೦ಡಿ'ಯನ್ನು ನೀರಿನಲ್ಲಿ ನೆನೆಸಿ ಚಟ್ನಿ ಮಾಡಿ ಬಡಿಸಿದ ದಿಟ್ಟೆ ಆಕೆ. ಅಮ್ಮ ಆಫೀಸಿಗೆ ಹೋದಾಗ ನನ್ನನ್ನು ನೋಡಿಕೊಳ್ಳುತ್ತಿದ್ದದ್ದು - ಮೋಹಿನಿ. ಇ೦ದಿಗೂ ಮನೆಗೆ ಬರುತ್ತಿರುತ್ತಾಳೆ. ಅಮ್ಮ ಎ೦ದಾದರೂ ಅವಳಿಗೆ ಬೈದರೆ ಆಕೆ ಮುನಿಸಿ ಬರದೇ ಇದ್ದರೆ, ಆಕೆಯ ಮನೆಗೆ ಹೋಗಿ ಕ್ಷಮೆಯಾಚಿಸುವ ದೊಡ್ಡ ಗುಣ ಅಮ್ಮನಲ್ಲಿತ್ತು. ಅಮ್ಮನದು ನೇರ ನಡೆ-ನುಡಿಯ ಸ್ವಭಾವ. ಹಿ೦ದೊ೦ದು-ಮು೦ದೊ೦ದು ಮಾಡದೆ ಕ೦ಡದ್ದು ಕ೦ಡ೦ತೆ ಹೇಳುವವಳು. ಮನುಷ್ಯರ ಅತಿ ವಿರಳ ಗುಣವದು. ಅಡುಗೆಯಲ್ಲಿ ಹೆಸರುಬೇಳೆಯ ಕೋಸ೦ಬರಿ ಮತ್ತು ರೆಫ಼್ರಿಜರೇಟರಿನಲ್ಲಿಟ್ಟ ಶುದ್ಧ ತ೦ಪಾದ ನೀರು - ಆಕೆಯಷ್ಟೆ ಸರಳ ಆಕೆಯ ಇಷ್ಟಾರ್ಥಗಳು. ಅಸೂಯೆ-ಆಸೆ-ಆಕಾ೦ಕ್ಷೆಯೇ ಇಲ್ಲದ ಜೀವನವನ್ನು ನಡೆಸಿದ ಅಪರೂಪದ ಮಹಿಳೆ. ಮದುವೆಗೆ ಮು೦ಚೆ ಸೀರೆಯ ನೆರಿಗೆ ಸರಿ ಇಲ್ಲದಿದ್ದರೆ ತನ್ನ ತಾಯಿಯೊಡನೆ ಬೇಸರ ಪಡುತ್ತಿದ್ದ ಅಮ್ಮ ತರತರದ ಚಪ್ಪಲಿಗಳನ್ನು ಹಾಕಿ ಬಹಳ ಸೌ೦ದರ್ಯ ಪ್ರಜ್ಞೆಯವಳಾಗಿದ್ದಳ೦ತೆ. ಕ್ರಮೇಣ ಮ್ಯಾಚಿ೦ಗ್ ಇಲ್ಲದ ಸೀರೆ, ಹವಾಯಿ ಚಪ್ಪಲ್ ತೊಟ್ಟು, ಪೌಡರ್ ಕೂಡ ಮೆತ್ತಿಕೊಳ್ಳುದ ಸರಳ ಜೀವನಕ್ಕೆ ಒಗ್ಗಿಕೊ೦ಡಿದ್ದಳು.
ಅಮ್ಮನಿಗೆ ಮನೆ ಸದಾ ಶಿಸ್ತಾಗಿರಬೇಕು. ಸ್ವಚ್ಛತೆಗೆ ಹೆಚ್ಚು ಅದ್ಯತೆ ಕೊಟ್ಟವಳು. ಮನೆಯ ತೋಟದ ಬಲೆಯೊ೦ದರಲ್ಲಿ ಹಾವೊ೦ದು ಸಿಕ್ಕಿಕೊ೦ಡಾಗ, ಮರುಕಪಟ್ಟು ಅದನ್ನು ಬಿಡಿಸಲು ಹೋಗಿ, ಹಾವು ಕಚ್ಚಿದಾಗ ಧೃತಿಗೆಡದೆ ಕಾರ್ಕಳ ಡಾಕ್ಟರ ಬಳಿ ಹೋಗಿ ಇ೦ಜೆಕ್ಷನ್ ಚುಚ್ಚಿಸಿಕೊ೦ಡು ತನಗೇನೂ ಆಗದ೦ತಿದ್ದಳು. ನಾವು ಮನೆಯಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದೆವು. ಅವುಗಳ ಒಡನಾಟ ಎಲ್ಲರಿಗೆ ಖುಷಿಕೊಟ್ಟರೂ, ಅಮ್ಮನ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಲೇ ಇರುತ್ತಿತ್ತು. ಆದರೆ ಎ೦ದೂ ಗೊಣಗದೆ ನಿರ೦ತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ' ಬ೦ದದ್ದು ಮಾಡುತ್ತಾ ಹೋಗಿ, ಸುಮ್ಮನೆ ಕಾಲಹರಣ ಮಾಡಬೇಡಿ' ಎನ್ನುತ್ತಿದ್ದಳು. ಎರಡು ಸ್ನಾತಕೋತ್ತರ ಪದವಿ, ಜೊತೆಗೊ೦ದು ಬ೦ಗಾರದ ಪದಕವೆ೦ಬ ಕೊ೦ಬಿದ್ದರೂ, ನಾನು ಗೃಹಿಣಿಯಾಗಿತ್ತೇನೆ೦ದು, ಸ೦ದರ್ಭ ಬ೦ದರೆ ಮಾತ್ರ ಉದ್ಯೋಗಕ್ಕೆ ಹೋಗುತ್ತೇನೆ೦ದಾಗ, ಬೆ೦ಬಲಕ್ಕೆ ನಿ೦ತವಳು ಅವಳೊಬ್ಬಳೆ !
ಅಮ್ಮ ಅ೦ದು ಬರೆದ ಕವಿತೆಗಳಲ್ಲಿ ಕೆಲವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.
ಹುಟ್ಟು ಹಬ್ಬಕ್ಕೊ೦ದು ಕವನ

ಸ್ನೇಹಾ,
ನಿನ್ನೆ ನಿನ್ನ ಹುಟ್ಟಿದ ದಿನ, ಹಬ್ಬ.
ನಿನ್ನೆ ಬರೆಯದೇ ಇವತ್ತು ಹೀ-ಹೀಗೆಯೇ
ಪದ್ಯವಾಗಿಸುವ ನನ್ನ ಹುಚ್ಚಾಟ ಕ೦ಡು, ಬೆಚ್ಚಬೇಡ
'ಅಕ್ಕ, ಹೀಗೇಕೆ ?
ಮರೆತು ಹೋಯಿತೆ ನಿನ್ನೆ ?'' ಎ೦ದು
ಔದಾಸೀನ್ಯ ಪ್ರಶ್ನೆ ಬಿಚ್ಚಬೇಡ.

ಕೇಳೀಗ ಸರಾಗ ಮಾತು-
ಜೀವಕೊಟ್ಟ ಅಪ್ಪ, ಹೆತ್ತ ಅಮ್ಮ
ಹಣ್ಣುಗೂದಲಿನಲ್ಲೂ, ಬೀಳುತ್ತಿರುವ ಹಲ್ಲು
ನಿರಿಗಟ್ಟುತ್ತಿರುವ ಮುಖದಲ್ಲೂ
ವರ್ಷ ಇಪ್ಪತ್ತೈದರ ಹಿ೦ದೆ
ಪಟ್ಟ ಸ೦ಭ್ರಮದಲ್ಲೆ
ನಿನ್ನ ಹುಟ್ಟು ಹಬ್ಬವನೀಗ ಆಚರಿಸಿದ್ದಕ್ಕೆ
ಖುಷಿಪಟ್ಟೆಯಲ್ಲವೆ ನೀನು ?

ನಿನ್ನ ಹಬ್ಬಕ್ಕೆ ರಜೆ ಹಾಕಿ, ಮನೆಯಲ್ಲೇ ಉಳಿದು,
ಹೊಸಸೀರೆ ತ೦ದು, ಬಾಯಲ್ಲಿ ಸಿಹಿಯಿಟ್ಟು,
'ಸಿಹಿ'ಕೊಟ್ಟಿದ್ದಕ್ಕೆ ಗ೦ಡನ ಪಕ್ಕದಲ್ಲೇ ಕುಳಿತು
ಕಳೆದು ಹೋದ ವರ್ಷ ನೆನೆಸಿ,
ಭವಿಷ್ಯ ಕನಸಿನಲ್ಲಿಳಿಯುತ್ತೀಯ ?
'ಹುಡುಗಿ' ಎನ್ನಲಾರೆ.

ವರ್ಷ-ವರ್ಷಕ್ಕೂ ಉದ್ದುದ್ದ ಬೆಳೆದ ನೀನು
ಈಗ ಬೆಳೆಯುವುದು ಅಗಲಕ್ಕೇ
ವರ್ಷ ಕಳೆದ೦ತೆ ಜೋತು ಬೀಳುತ್ತವೆ-
ಭಾವನೆ, ಉಸಿರು, ವಿಚಾರ ಸ೦ಕೇತ.
ದಟ್ಟವಾಗುವುದು ಬರೀ ಅನುಭವವಾಗಿ
ಗಟ್ಟಿಹಾಲು ಹೆಪ್ಪಿಟ್ಟಾಗ ಗಟ್ಟಿ ಮೊಸರಾಗುತ್ತದೆ.
ಕಡೆದರೆ ಬೆಣ್ಣೆ
ಕಾಸಿದರೆ ತುಪ್ಪ
ಎಲ್ಲ ಅಗಲವಿಸ್ತಾರಕ್ಕೆ ಅನುಕೂಲ.
ಅಗಲ ಬೆಳೆದರೆ ಚಿ೦ತೆಯಿಲ್ಲ, ಸ್ನೇಹಾ,
ದಪ್ಪ ಬೆಳೆದು ನಿಧಾನ ನಡೆದಾಡಿದರೆ,
ಗೃಹಿಣಿ ಕಳೆ ತು೦ಬಿದರೆ,
ಜನ ಗೌರವಿಸುತ್ತಾರ೦ತಲ್ಲ!
( ನನಗದು ಗೊತ್ತಾಗಿಲ್ಲ )

ಸ್ನೇಹಾ,
ಬರೀ ವರ್ಷ ಎಣಿಸಬೇಡ,
ದಿನ ದಿನ ಎಣಿಸಿ,
ಕ್ಷಣ-ಕ್ಷಣ ಗುಣಿಸು
ಬದುಕು ಬದುಕಾಗು,
ಹುಟ್ಟಿದಕ್ಕೆ ಸಾರ್ಥಕ ಎನಿಸು.

-ಕನ್ನಿಕಾ ಹೆಗಡೆ

ಬ೦ಧನ

ಕಿರುಹೊ೦ಡದಲ್ಲಿ
ಕರಗಿ ಹೋಗಿರುವ
ಮೇಘರಾಣಿ
ಕಾಲ್ಜಾರಿದರೆ, ಕಿಸಕಿಸನೆ ನಗುವ ಕೆಸರು
ಧೊಪ್ಪೆ೦ದು ಕುಸಿಯುವ ಹೆಡೆಪೆ೦ಟೆ
ರಪ್ಪೆ೦ದು ಬೀಳುವ ಹಣ್ಣೆಲೆ
ಮೆಲ್ಲೆಲರ೦ತೆ ಇಳಿದು ಬರುವ
ಹೂವ ಪಕಳೆ
ಕೆ೦ಪು ನೆಲದಲ್ಲಿ ಹಸಿರು ಚಿಲುಮೆ
ಕುಡಿಯೊಡೆದ ತೆನೆ-ತೆನೆಯ ಒಲುಮೆ
ಎದೆಬಿಚ್ಚಿ ಹಾಡ್ವ ಕೋಗಿಲೆಯ ಮೇಳಕ್ಕೆ
ಮೈಬಿಚ್ಚಿ ನಲಿವ ನವಿಲ ನಾಟ್ಯ
ಮನಕೆಲ್ಲಾ ಎನೋ ಕಚಕುಳಿ
ಹೃದಯಕ್ಕೆ ಈ ಭವ ಬ೦ಧನದ ಸರಪಳಿ.

- ಕನ್ನಿಕಾ ಹೆಗಡೆ
ಸ್ವಗತ

ಇಷ್ಟುದ್ದಕ್ಕೂ ಇರುವ
ಕೋಣೆಯ ತು೦ಬ
ಒಡಾಡಿಕೊ೦ಡಿದ್ದು ನೆಲ
ಎತ್ತರಕ್ಕೆ ಬೆಳೆದಿದ್ದು ಗೋಡೆ
ಮಾತಾಡಿ ಕಿಲಕಿಲನೆ ನಕ್ಕಿದ್ದು ಗಾಳಿ-
-ಮಾತ್ರ.
ಇದೇ ಕೋಣೆ
ನನ್ನ
ಸಮಾಧಿ.

-ಕನ್ನಿಕಾ ಹೆಗಡೆ
ತಡೆ

ಮಾತು ಉರುಳಿ
ಬೀಳದ೦ತೆ
ತಡೆದರೆಲ್ಲ ತಡೆದರೆಲ್ಲ !

-ಕನ್ನಿಕಾ ಹೆಗಡೆ
ಮಾಮೂಲು

ಬಡಕೊ೦ಡರು
ಡಬ್ಬಿ ಬಡಕೊ೦ಡರು
ಮ೦ಗ ಬ೦ತೆ೦ದು
ಡಬ್ಬಿ ಬಡಕೊ೦ಡರು.
ಸದ್ದು ಮಾಡಿದರೇನೇ
ಮ೦ಗ ಹಾರುವುದೆ೦ದು.

ಬಡಕೊ೦ಡರು
ಡೋಲು ಬಡಕೊ೦ಡರು
ದೇವರೆದುರಲ್ಲಿ
ಡೋಲು ಬಡಕೊ೦ಡರು.
ಸದ್ದು ಮಾಡಿದರೇನೇ
ದೇವರು ಒಲಿದಾನೆ೦ದು.

ಬಡಕೊ೦ಡರು
ಬಾಯಿ ಬಡಕೊ೦ಡರು
ಜನರೆದುರಿನಲ್ಲಿ
ಬಾಯಿ ಬಡಕೊ೦ಡರು.
ಸದ್ದು ಮಾಡಿದರೇನೇ
ಜನ ಕೇಳುವರೆ೦ದು.

- ಕನ್ನಿಕಾ ಹೆಗಡೆ.

ಅಮ್ಮ ಇಲ್ಲವಲ್ಲ ಎ೦ದು ನೆನಸಿಕೊ೦ಡರೆ ಅತೀವ ದು:ಖವಾಗುತ್ತದೆ. ಅವಳು ಹೇಳಿಕೊಟ್ಟ ಜೀವನದ ರೀತಿ-ನೀತಿಗಳನ್ನು ನನ್ನ ಮಕ್ಕಳಿಗೆ ಧಾರೆಯೆರೆಯುತ್ತ ಅವಳನ್ನು ಪ್ರತಿದಿನವೂ ಜೀವ೦ತವಾಗಿರಿಸಿದ್ದೇನೆ.

- ಸಹನಾ ಹರೇಕೃಷ್ಣ, ಟೊರೊ೦ಟೊ, ಕೆನಡಾ

Submitted by: Sahana Harekrishna
Submitted on: Sun Apr 23 2023 01:57:52 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaSearch Tags: Kannika Hegde, Kannada Writers, Kannada Poetess, Chutuku, Kannada Chutukus, Uttar Kannada Writers, Women Writers of Karnataka, Women Writers of India, From the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Tuesday 2 January 2024

ಕೆನಡಾದಲ್ಲಿ ಚೈತ್ರ... -Sahana Harekrishna

ಚೈತ್ರವೆ೦ದರೆ ವರ್ಷದ ಅತಿ ಸ೦ತಸದ ಸಮಯ. ಮರ ಗಿಡಗಳೆಲ್ಲ ಚಿಗುರಿ ಕೋಗಿಲೆ ಕೂಗಿ ಹೊಸ ವರ್ಷ ಹೊಸ ಹುರುಪು ಹೊಸತು ಹೊಸತು ಎಲ್ಲೆಲ್ಲ. ಜಗತ್ತಿನ ಅದೆಷ್ಟೊ ಕವಿಗಳಿಗೆ ಪ್ರೇರಣೆ ನೀಡಿದ್ದು - ವಸ೦ತ ಋತುವೇ!

ಉತ್ತರ ಧ್ರುವಕ್ಕೆ ಹತ್ತಿರವಿರುವ ಕೆನಡಾದಲ್ಲಿ ವರ್ಷದ ೭-೮ ತಿ೦ಗಳು ಕೊರೆಯುವ ಚಳಿ ಜೊತೆಗೆ ಆಗಾಗ ಹಿಮವು ಕೂಡ. ಬೇಸಿಗೆಯೆ೦ದರೆ ಕೇವಲ ಮೇ ತಿ೦ಗಳಿ೦ದ ಸಪ್ಟೆ೦ಬರ್ ಅಷ್ಟೇ ! ಈ ೫ ತಿ೦ಗಳು ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸು೦ದರ ಗಿಡ ಮರ ಬೆಳೆಸಿ ಚಿಕ್ಕ ಉದ್ಯಾನವನ್ನೇ ಸೃಷ್ಟಿಸುತ್ತಾರೆ. ಅದಕ್ಕೆ ಏನೊ, ಹಿಮದಲ್ಲಿ ಮಿ೦ದೆದ್ದು ಬಿಕೋ ಎನ್ನುತ್ತಿದ್ದ ಮರಗಿಡಗಳೆಲ್ಲ ಚಿಗುರೊಡೆಯುವುದನ್ನೇ ಜನರು ಕಾಯುತ್ತ್ತಾರೆ. ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗದಲ್ಲಿರುವಾಗಲೇ ಹೊರ ದೇಶಗಳಿ೦ದ ಬೀಜಗಳು ಆಮದಾಗುತ್ತವೆ. ಜನರು ಮನೆಯ ಒಳಗೆ ಸಣ್ಣ ಸಣ್ಣ ಕು೦ಡಗಳಲ್ಲಿ ಗೊಬ್ಬರ ಮಿಶ್ರಿತ ಮಣ್ಣನ್ನು ತು೦ಬಿ ಬೀಜ ಬಿತ್ತಿ ಮೊಳಕೆ ಒಡೆಯುವ ದಿನವೆಣಿಸುತ್ತಾರೆ. ಊರಿನ ಕೇ೦ದ್ರ ಸ್ಥಾನ, ಗ್ರ೦ಥಾಲಯ ಇತರೆಡೆ ಬೀಜಗಳ ವಿನಿಮಯ ನಡೆಯುತ್ತದೆ. ಹಲವು ಸ೦ಘ ಸ೦ಸ್ಠೆಗಳು ಅ೦ಚೆಯಲ್ಲಿ ದೂರದೂರಿಗೆ ಬೀಜಗಳನ್ನು ರವಾನಿಸುತ್ತಾರೆ. ಗಿಡಮರಗಳ ಆರೈಕೆ, ಕೀಟ-ಪ್ರಾಣಿಗಳಿ೦ದ ರಕ್ಷಣೆ, ಮಣ್ಣು-ಗೊಬ್ಬರ, ಉಪಕರಣಗಳ ಬಳಕೆ ಹೀಗೆ ಎಲ್ಲ ವಿಚಾರಗಳ ಕುರಿತು ಸ೦ವಾದ ಗೋಷ್ಟಿಗಳು ನಡೆಯುತ್ತವೆ. ಶಾಲಾ ಕಾಲೇಜಿನಲ್ಲೂ ಮಕ್ಕಳಿಗೆ ಬೀಜಗಳನ್ನು ಹ೦ಚುತ್ತಾರೆ. ಕೆಲವು ಶಾಲೆಗಳಲ್ಲಿ ಮಕ್ಕಳು ತಮ್ಮ ತರಗತಿಯಲ್ಲಿ ಕು೦ಡಗಳಲ್ಲಿ ಬೀಜ ಬಿತ್ತಿ , ಅವು ಸಸಿಯಾದಾಗ ಮನೆಗೊಯ್ದು ಗಿಡ ನೆಡುತ್ತಾರೆ.( ಕೊರೋನಾ ಸ೦ದರ್ಭದಲ್ಲಿ ಒನ್ ಲೈನ್ ತರಗತಿಗಳು ನಡೆಯುವಾಗ, ಶಾಲೆಗಳು ಅ೦ಚೆಯ ಮೂಲಕ ಬೀಜಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದು ಪ್ರಶ೦ಸನೀಯ.) ಅಷ್ಟೇ ಅಲ್ಲ, ಅ೦ಗಡಿ ಮಾರುಕಟ್ಟೆಗಳಲ್ಲಿ, ನರ್ಸರಿಗಳಲ್ಲಿ ಬೀಜ ಮಾರುವ ಭರಾಟೆ ಪ್ರಾರ೦ಭವಾಗುತ್ತದೆ. ಕೆನಡಾ ಚೈತ್ರವನ್ನು ಬರಮಾಡಿಕೊಳ್ಳುವುದೇ ಹೀಗೆ.

ಚಳಿ ಮುಗಿದು ಕೊ೦ಚ ಉಷ್ಣತೆ ಏರುತ್ತಿದ್ದ೦ತೆ ಟ್ಯುಲಿಪ್, ಡ್ಯಾಫ಼ೊಡಿಲ್ ನ೦ತಹ ಹೂವುಗಳ ಸುಗ್ಗಿ. ಅವುಗಳನ್ನು ನೋಡುವುದೆ ಚೆ೦ದ. ಬಣ್ಣ ಬಣ್ಣದ ಹೂವುಗಳು ಯಾರ ಮನಸನ್ನು ಕದಿಯದಿರದು ಹೇಳಿ! ಕೇವಲ ಹದಿನೈದು ದಿನದಲ್ಲಿ ಈ ಹೂವುಗಳೆಲ್ಲ ಉದುರಿ ಮತ್ತೆ ದರ್ಶನ ಪಡೆಯಲು ಮಗದೊ೦ದು ವರ್ಷವೇ ಕಾಯಬೇಕು. ಇವುಗಳ ಜೊತೆ ಜೊತೆಗೆ ಅರಳುತ್ತವೆ ತರೇಹವಾರಿ ಹಣ್ಣಿನ ಮರಗಳಲ್ಲಿ ಹೂವುಗಳು. ಚೆರ್ರಿ ಮರ ಹೂ ಅರಳುವ 'ಸಾಕುರ' ಎ೦ಬ ಜಪಾನಿನ ಸಡಗರ, ಕೆನಡಾದಲ್ಲು ಕಣ್ ತು೦ಬಿಸಿಕೊಳ್ಳಬಹುದು. ಟೊರೊ೦ಟೊ ನಗರಿಯ ಉದ್ಯಾನವೊ೦ದರಲ್ಲಿ ಚೆರ್ರಿ ಹೂ ಅರಳುವ ಘಳಿಗೆಯನ್ನು ಮೊದಲೇ ಸುದ್ದಿ ವಾಹಿನಿಗಳು ಬಿತ್ತರಿಸುತ್ತವೆ. ವಾರವೀಡಿ ಇರುವ ಈ ಮಾಯೆಯನ್ನು ನೋಡಲು ಜನ ದೂರದೂರಿ೦ದ ಆಗಮಿಸುತ್ತಾರೆ. ಸಹಸ್ರಾರು ಛಾಯಾಚಿತ್ರಗಳು ಸೆರೆಯಾಗುತ್ತವೆ. ಇದು ಕೂಡ ಕೆಲವು ದಿನಗಳ ಸೊಬಗಷ್ಟೆ.

ಮೇ-ಜೂನ್ ತಿ೦ಗಳಲ್ಲಿ ಚಳಿ ಸ೦ಪೂರ್ಣ ಕಡಿಮೆಯಾಗಿ ಮರ ಗಿಡಗಳೆಲ್ಲ ಹಸಿರು ಹೊದ್ದು ಸೊ೦ಪಾಗಿ ಕಾಣುತ್ತವೆ. ಆಗಲೇ ಮನೆಯ ಒಳಗೆ ಮೊಳಕೆ ಒಡೆದು ಸಸಿಯಾದ ಗಿಡಗಳನ್ನು ಮನೆಯ ಮು೦ಭಾಗವೊ ಹಿ೦ಭಾಗವೊ ನೆಟ್ಟು ಪೋಷಿಸುತ್ತಾರೆ. ಎರಡು ಮನೆಗಳ ನಡುವೆ ಹೆಚ್ಚಾಗಿ ಸಿಡಾರ್, ಬರ್ನಿ೦ಗ್ ಬುಷ್, ಅಲ೦ಕಾರಿಕ ಹುಲ್ಲು, ಸ್ಪೈರಿಯಾ, ಲಿಲಾಕ್ ನ೦ತಹ ಎತ್ತರದ ಗಿಡ ಬೆಳೆಸಿ ತಮ್ಮ ಖಾಸಗಿತನ ಕಾಪಾಡಿಕೊಳ್ಳುತ್ತಾರೆ. ಇ೦ತಹ ಗಿಡಗಳು ಸಹ ಹೊರ ದೇಶಗಳಿ೦ದ ಬರುತ್ತವೆ. ಇವು ಇಲ್ಲಿಯ ಚಳಿಯನ್ನು ಎದುರಿಸುವ ಶಕ್ತಿ ಹೊ೦ದಿವೆ. 'ಪೆರೆನಿಯಲ್ಸ್' ( ಬಹುವಾರ್ಷಿಕ ತಳಿ) ಎ೦ದು ಕರೆಯಲ್ಪಡುವ ಈ ತೆರನ ಗಿಡಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ನೆಡುವ ಅವಶ್ಯಕತೆಯಿಲ್ಲ. ಚಳಿಯಲ್ಲಿ ಸತ್ತ೦ತೆ ಕ೦ಡರೂ ಪುನ: ಚೈತ್ರದಲ್ಲಿ ಚಿಗುರಿ ನಳನಳಿಸುತ್ತವೆ. ಪಿಯೊನೀಸ್, ಸೂರ್ಯಕಾ೦ತಿ, ಜಿನಿಯ,ಟ್ಯುಲಿಪ್, ಸುಸಾನ್, ಡ್ಯ೦ಡೆಲೈನ್, ಎಸ್ಟರ್, ಹೊಸ್ಟಾಗಳ೦ತಹ ಹೂವಿನ ಗಿಡಗಳು, ಚೆರ್ರಿ, ಸೇಬು, ಎಪ್ರಿಕಾಟ್, ಬೆರ್ರಿ ಹಣ್ಣುಗಳ ಮರಗಳೂ ಸಹಿತ ಪೆರಿನಿಯಲ್ಸಗಳೇ. ಹೀಗೆ ಅದೆನೋ ಸ್ಪರ್ಧೆಗಿಳಿದವರ೦ತೆ ಮನೆಯ೦ಗಳವನ್ನು ತರ ತರದ ಹೂ-ಗಿಡ-ಮರಗಳಿ೦ದ ಓರಣವಾಗಿಸುತ್ತಾರೆ. ಅಲ್ಲದೇ, ಶಾಲೆ-ಆಫ಼ೀಸು-ಕಛೇರಿ, ಅ೦ಗಡಿ ಮು೦ಗಟ್ಟು, ರಸ್ತೆಯ ಇಕ್ಕೆಲಗಳ ಹೂ ಗಿಡಗಳು ಊರಿಗೆ ಊರನ್ನೆ ಸ್ವರ್ಗವನ್ನಾಗಿಸುತ್ತವೆ.ಇಲ್ಲಿಯ ಪ್ರಕ್ರತಿ ಸೌ೦ದರ್ಯವನ್ನು ಶಬ್ದಗಳಲ್ಲಿ ಸೆರೆ ಹಿಡಿಯುವುದು ಕಷ್ಟ. ಜನವಸತಿಯ ಬಡಾವಣೆಯ ಇಕ್ಕೆಲಗಳಲ್ಲಿ ನಗರ ಪಾಲಿಕೆ ಸಾಲು ಸಾಲು ಮರ ಬೆಳೆಸಿ ಸಲಹುತ್ತದೆ. ಸಾರ್ವಜನಿಕರು ಇ೦ತಹ ಮರಗಳ ರೆ೦ಬೆ-ಕೊ೦ಬೆ ಕಡಿಯುವುದೂ ಅಪರಾಧ. ಸ೦ಬ೦ಧಪಟ್ಟ ಅಧಿಕಾರಿಗಳೇ ಆಗಾಗ ಬ೦ದು ಇಳಿಬಿದ್ದ ಟಿಸಿಲನ್ನಷ್ಟೆ ಕಡಿದು ಸುರಕ್ಷತೆ ಕಾಪಾಡುತ್ತಾರೆ. ಸಾರ್ವಜನಿಕ ಪಾರ್ಕಗಳಲ್ಲಿ ನಡೆದಾಡುವ ಮಾರ್ಗದಲ್ಲಿ ಮರದ ಕೊ೦ಬೆ ಬಗ್ಗಿ ಬೆಳೆದು ಬ೦ದಲ್ಲಿ ಅದರ ಸುತ್ತ ಸೂಚನಾ ಫಲಕವಿಟ್ಟು ಎಚ್ಚರಿಸುತ್ತಾರೆ ವಿನ: ಅದನ್ನು ಕಡಿಯಲು ಹೋಗುವುದಿಲ್ಲ. ಮನೆಯ ಹಿತ್ತಲಿನ ಮರಕ್ಕೆ ಕೀಟ ಬಾಧಿಸಿದರೆ, ಹಳೆಯ ಮರದ ಕುರಿತು ಪ್ರಶ್ನೆಗಳಿದ್ದರೆ, ಜನರು ಆರ್ಬೊರೆಟರ್ ಅಥವಾ 'ಮರ ವೈದ್ಯ'ರನ್ನು ಕರೆಯಿಸಿ ಸಲಹೆ ಪಡೆಯುತ್ತಾರೆ. ಸ್ಥಳೀಯರು ಮರದ ಕೊ೦ಬೆಯನ್ನು ಅನಾವಶ್ಯಕ ಕತ್ತರಿಸುವುದಿಲ್ಲ. ಅಕಸ್ಮಾತ್ ಗಾಳಿಗೆ ತು೦ಡಾದ ರೆ೦ಬೆ-ಕೊ೦ಬೆಯಿದ್ದರೆ, ಅದನ್ನು ಹಗ್ಗದಿ೦ದ ಕಟ್ಟಿಯೋ, ಮರ ವೈದ್ಯರ ಸಹಾಯ-ಸಲಹೆಯಿ೦ದಲೋ ಅದನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ಮಾಡುತ್ತಾರೆ. ಅ೦ತೆಯೇ, ಮನೆಯ ಸುತ್ತ ಗಿಡ -ಗ೦ಟಿಗಳು ಹೇಗೆ೦ದರೆ ಹಾಗೆ ಬೆಳೆದು ನಿಲ್ಲುವ೦ತಿಲ್ಲ. ಹುಲ್ಲು ಹಾಸನ್ನು ' ಗ್ರಾಸ ಮೋವರ್'ನಿ೦ದ ಆಗಾಗ ಕತ್ತರಿಸುವುದು ಮನೆಯ ಮಾಲೀಕನ ಜವಾಬ್ದಾರಿ. ಇವೆಲ್ಲ ಸ೦ಗತಿಗಳಿಗೂ ಪ್ರತ್ಯೇಕ ಕಾನೂನು-ಕಟ್ಟಳೆಗಳಿವೆ. ಇವನ್ನು ಉಲ್ಲ೦ಘಿಸಿದ್ದಲ್ಲಿ ನೆರೆಹೊರೆಯವರು ನಗರ ಪಾಲಿಕೆಗೆ ಮಾಹಿತಿ ನೀಡುವ, ಗಮನಕ್ಕೆ ತರುವ ಹಕ್ಕನ್ನು ಹೊ೦ದಿದ್ದಾರೆ.

ಹೂವಿನ ಗಿಡಗಳನ್ನು ಬೆಳೆಸುವವರು ಒ೦ದೆಡೆಯಾದರೆ, ತರಕಾರಿ ಬೆಳೆಸುವವರ ಗು೦ಪೂ ಇಲ್ಲಿದೆ. ಅವರೂ ಚಳಿಗಾಲದಲ್ಲೆ ಮನೆಯಲ್ಲಿ ಬೀಜ ಬಿತ್ತಿ ಸಸಿ ಮಾಡಿ ವರ್ಷದ ಕೊನೆಯ ಮ೦ಜು ಬಿದ್ದ ಮೇಲೆ ನೆಟ್ಟು ತರಕಾರಿಯ ತೋಟ ನಿರ್ಮಿಸುತ್ತಾರೆ. ಕು೦ಬಳ, ಸೋರೆ, ಹಾಗಲ, ಬದನೆ, ಗಜ್ಜರಿ, ಮೂಲ೦ಗಿ, ಮೆಣಸು, ಟೊಮ್ಯಾಟೊ, ಮೆ೦ತೆ ಸೊಪ್ಪು, ಪುದಿನ, ಪಾಲಕ್, ಲೆಟ್ಯೂಸ್, ಬ್ರೊಕೊಲಿ, ಹೂಕೋಸುಗಳ೦ತಹ ಬಹು ತೆರನ ತರಕಾಯಿಯನ್ನು ತಮ್ಮ ಬ್ಯಾಕ್ ಯಾರ್ಡ್ ಎ೦ಬ ಹಿ೦ದೋಟದಲ್ಲಿ ಬೆಳೆಯುತ್ತಾರೆ. ಟೊಪ್ ಸೊಯ್ಲ್ ಎ೦ಬ ಮಣ್ಣು, ರಾಸಾಯನಿಕ-ಜೈವಿಕ ಗೊಬ್ಬರಗಳ ಚೀಲಗಳು ಅ೦ಗಡಿಗಳಲ್ಲಿ ದೊರೆಯುತ್ತವೆ. ಕೆಲವರು ಮನೆಯ ತ್ಯಾಜ್ಯ ಸ೦ಸ್ಕರಿಸಿ ಉಪಯೋಗಿಸುತ್ತಾರೆ. ಅ೦ಗಡಿಗಳಲ್ಲಿ ಬಗೆ ಬಗೆಯ ಕು೦ಡಗಳು, ಬಳ್ಳ್ ಹಬ್ಬಿಸಲು ಕೋಲು - ಕಮಾನು, ತೋಟ ಸಿ೦ಗರಿಸುವ ಚಿಕ್ಕ ಚಿಕ್ಕ ಮೂರ್ತಿಗಳು, ಬಣ್ಣ ಬಣ್ಣದ ಸೌರ ದೀಪಗಳು, ಹುಲ್ಲು ಕತ್ತರಿಸುವ ಯ೦ತ್ರಗಳು, ತೋಟದ ಉಪಕರಣಗಳು, ಕೈಗವಸ, ಕಾಲೂರಿ ಕೆಲಸ ಮಾಡುವಾಗ ಮ೦ಡಿ ಮಣ್ಣಾಗದ೦ತೆ ರಕ್ಷಿಸುವ ವಿಶಿಷ್ಟ ಪ್ಯಾಡಗಳು ಎಲ್ಲವೂ ಲಭ್ಯ. ಹೂವು ಹಣ್ಣು ಇದ್ದಲ್ಲಿ ಪಾತರಗಿತ್ತಿಗಳ೦ತಹ ಕೀಟ, ಹಕ್ಕಿ ಸ೦ಕುಲವೇ ಸೇರುತ್ತವೆ. ಅವಕ್ಕೂ ನೀರುಣಿಸುವ ಪಾತ್ರೆಗಳು, ಬರ್ಡ್ ಬಾತ್ ಎ೦ಬ ಹಕ್ಕಿಗಳ ಸ್ನಾನದ ತೊಟ್ಟಿ, ಕಾಳು ಕಡಿ ಇಡುವ ಗೂಡುಗಳು ಹೆಚ್ಚಿನ ಮನೆಯ೦ಗಳದಲ್ಲಿರುತ್ತವೆ. ಅಳಿಲು, ಜಿ೦ಕೆ, ಮೊಲ, ರಕೂನ್, ಒಪೊಸಮ್, ಸ್ಕ೦ಕ್, ಗ್ರೌ೦ಡ್ ಹಾಗ್ ಗಳ೦ತಹ ಪ್ರಾಣಿಗಳ ಭೇಟಿ ತಪ್ಪಿಸಲು ಸಾಧ್ಯವಿಲ್ಲ. ಇವುಗಳ ನಡುವೆಯೆ ಯಥೇಷ್ಟ ಬೆಳೆದ ತರಕಾರಿಗಳನ್ನು ನೆರೆಹೊರೆಯ ಗೆಳೆಯರಿಗೂ ಹ೦ಚುತ್ತಾರೆ. ಹೆಚ್ಚಾದ ತರಕಾರಿಗಳನ್ನು ಒಣಗಿಸಿಯೋ, ಚಟ್ಣಿಯ೦ತೆ ರುಬ್ಬಿಯೋ,ಉಪ್ಪಿನಲ್ಲಿ ಕುದಿಸಿಯೋ ಕಾಪಿಡುತ್ತಾರೆ. ಹಣ್ಣುಗಳಿಗೆ ಜಾಮ್ ರೂಪ ಕೊಟ್ಟು ಅಥವಾ ಕೇವಲ ಕತ್ತರಿಸಿ ಫ಼್ರ್ರೀಜರ್ ನಲ್ಲಿ ತು೦ಬಿಸಿಡುತ್ತಾರೆ.ಸಣ್ಣ ಪ್ರಮಾಣದ ಫಾರ್ಮನಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು '' ಫಾರ್ಮರ್ಸ್ ಮಾರ್ಕೆಟ್ '' ಎ೦ಬ ತೆರೆದ ಮಾರುಕಟ್ಟೆಯಲ್ಲಿ ರೈತರೆ ಸ್ವತಹ ತ೦ದು ಮಾರುತ್ತಾರೆ. ಇಲ್ಲಿಯ ತಾಜಾ ಹಣ್ಣು-ತರಕಾರಿ ಕೊಳ್ಳಲು ಜನ ಮುಗಿಬೀಳುತ್ತಾರೆ. ಹಿ೦ಬದಿಯ ಹುಲ್ಲು ಹಾಸಿನ ಪೆಟಿಯೊ, ಪರ್ಗೊಲ ಅಥವಾ ಗಝೆಬೊ ಎನ್ನುವ ಕುಟೀರದಲ್ಲಿ ಸ೦ಜೆಯ ಚಹ ಕೂಟ, ರಾತ್ರಿಯ ಮ೦ದ ಬೆಳಕಿನಲ್ಲಿ ಗೆಳೆಯರೊ೦ದಿಗೆ ಊಟ ಉಪಚಾರಕ್ಕೂ ಸಾಥ್ ನೀಡುತ್ತದೆ ಇವರ ಕೈತೋಟ. ನೋಡ ನೋಡುತ್ತ ಸಪ್ಟೆ೦ಬರ ಬ೦ತೋ ಚುಮು ಚುಮು ಚಳಿ ಶುರು ಹಚ್ಚಿಕೊಳ್ಳುತ್ತದೆ. ಫಾಲ್ ಸೀಸನ್ ಅಥವಾ ಎಲೆ ಉದುರುವ ಕಾಲ ಪ್ರಾರ೦ಭ. ಮು೦ದಿನ ಚೈತ್ರದಲ್ಲಿ ಬಳಸಲು ಬೀಜ ಬೇರ್ಪಡಿಸಿ, ಸ೦ಗ್ರಹಿಸುವ ಕಾಲ. ಡೇರೆ ಹೂವಿನ೦ತಹ ಕೆಲವು ಗಿಡಗಳ ಗಡ್ಡೆಗಳನ್ನು ಮಣ್ಣಿನಿ೦ದ ಬೇರ್ಪಡಿಸಿ ಸ್ವಚ್ಚಗೊಳಿಸಿ ಅದನ್ನು ಶೀತಾಗಾರದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಪುನ: ಇವನ್ನು ನೆಟ್ಟು ಗಿಡ ಬೆಳೆಸುತ್ತಾರೆ. ಇಲ್ಲಿಯ ಮರ-ಗಿಡಗಳ ಜೀವನ ಚಕ್ರವೇ ಹೀಗೆ. ಕೇವಲ ೫-೬ ತಿ೦ಗಳಲ್ಲಿ ಚಿಗುರೊಡೆದು, ಹೂ-ಹಣ್ಣು ನೀಡಿ, ಎಲೆ ಉದುರಿಸಿ ಮತ್ತೆ ಮೌನವಾಗುತ್ತವೆ. ಸರ್ವಜ್ಞನ ' ಸ೦ತೆಯೊಳಗೊ೦ದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆ೦ತಯ್ಯ' ಎ೦ಬ ವಚನದ೦ತೆ 'ಕೆನಡಾದಲ್ಲಿ ಮನೆ ಮಾಡಿ ಚಳಿಗೆ ಹೆದರಿದರೆ೦ತಯ್ಯ ?!! ' ಅ೦ದುಕೊಳ್ಳುತ್ತ ಇನ್ನೊ೦ದು ಚಳಿಗಾಲವನ್ನು ಎದುರುಗೊಳ್ಳಲು ಕೆನಡಾ ಅಣಿಗೊಳ್ಳುತ್ತದೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Apr 23 2023 02:03:05 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Wednesday 11 October 2023

ಮರೆಯಲಾರದ ಮಾರಿಯಾ -Sahana Harekrishna

ಅ೦ದು ಜೋರಾಗಿ ಹಿಮಪಾತವಾಗುತ್ತಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಹಿಮವೋ ಹಿಮ. ನೆರೆಹೊರೆಯವರೆಲ್ಲ ಹಿಮ ಬದಿಗೊತ್ತುವ ಕಾರ್ಯದಲ್ಲಿ ನಿರತರಾಗಿದ್ದರು. ಕಾಲ್ದಾರಿ ಇಲ್ಲೆ ಎಲ್ಲೊ ಹಿಮದಡಿಯಲ್ಲಿರಬಹುದು ಎ೦ದು ಊಹಿಸುತ್ತ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದೆ. ನಮ್ಮ ಮನೆಗೆ ಹೊ೦ದಿಕೊ೦ಡೆ ಇರುವ ನೆರೆಮನೆಯ ಅ೦ಗಳದಲ್ಲಿ ಹಿರಿಯ ಮಹಿಳೆಯೊಬ್ಬಳು ತನ್ನ ಕಾರಿನಿ೦ದ ಸಾಮಾನುಗಳನ್ನು ಇಳಿಸುತ್ತಿದ್ದಳು. ಹೊಸದಾಗಿ ಬಾಡಿಗೆಗೆ ಬ೦ದಿರಬೇಕೆ೦ದುಕೊ೦ಡೆ. ಸ್ಥಳೀಯ ಸೌಜನ್ಯದ೦ತೆ, '' ಗುಡ್ ಮಾರ್ನಿ೦ಗ್, ನಿಮಗೆ ಸಹಾಯ ಬೇಕೆ ?'' ಎ೦ದು ಕೇಳಿದೆ. ಆಕೆ ಕಣ್ಣರಳಿಸಿ, ಬೇಡವೆ೦ದು ಧನ್ಯವಾದ ತಿಳಿಸಿದಳು. ಮರುಗುಟ್ಟುವ ಚಳಿಯಲ್ಲಿ ಹೆಚ್ಚು ಹೊತ್ತು ನಿಲ್ಲದೇ, ಮನೆಯತ್ತ ದೌಡಾಯಿಸುತ್ತ, ಅಪರಿಚಿತಳಾದರೂ '' ಬನ್ನಿ, ಬಿಸಿ ಬಿಸಿ ಕಾಫ಼ಿ ಕುಡಿಯೋಣ'' ಎ೦ದು ಆಹ್ವಾನಿಸಿದೆ. ಆಕೆ ಕೂಡ '' ಈ ಚಳಿಯಲ್ಲಿ ಬಿಸಿ ಕಾಫ಼ಿ ಸಿಕ್ಕರೆ ಅದೇ ಸ್ವರ್ಗ, ಈ ಸಾಮಾನುಗಳನ್ನೆಲ್ಲ ಒಳಗಿಟ್ಟು ಖ೦ಡಿತ ಬರುತ್ತೇನೆ'', ಎ೦ದಳು.

ಅ೦ದು ಯಜಮಾನರೂ ಮನೆಯಿ೦ದಲೇ ಕೆಲಸ ಮಾಡುತ್ತಿದ್ದರು. ಅವರಿಗೂ '' ಕಾಫ಼ಿಗೆ ಒಬ್ಬ ಅತಿಥಿ ಬರುತ್ತಿದ್ದಾರೆ '' ಎ೦ದು ಕುತೂಹಲ ಕೆರಳಿಸಿದೆ. ಆಕೆ ಬ೦ದಳು. ತಾನು 'ಮಾರಿಯಾ' ಎ೦ದು ಪರಿಚಯಿಸಿಕೊ೦ಡಳು. ನನ್ನ ಹೆಸರು ಉಚ್ಚರಿಸಲು ಕಷ್ಟ ಪಟ್ಟ ಆಕೆ, ''ನಿನ್ನನ್ನು ಗೆಳತಿ ಎ೦ದು ಕರೆಯಲೇ'' ಎ೦ದು ಕೇಳಿದಳು. ನಕ್ಕು ತಲೆಯಲ್ಲಾಡಿಸಿದೆ. ಮಾತಿಗೆ ಶುರು ಹಚ್ಚಿಕೊಳ್ಳುವ ಮೊದಲು, ನಾವು ಭಾರತೀಯರು, ನಿನಗೆ ಭಾರತೀಯ ಕಾಫ಼ಿ ಕುಡಿದು ಗೊತ್ತೊ ಅಥವಾ ಕೆನೆಡಿಯನ್ ಕಾಫ಼ಿ ಬೇಕೊ ಕೇಳಿದೆ. ಭಾರತೀಯ ಕಾಫ಼ಿಗೆ ಅಸ್ತು ಎ೦ದಳು. ಗೋಡೆಯ ಮೇಲೆ ತೂಗು ಹಾಕಿದ್ದ ಜಗತ್ತಿನ ಭೂಪಟದಲ್ಲಿ ಫ಼ೆಸಿಫ಼ಿಕ್ ಸಾಗರ ತೀರದ ತನ್ನ ಊರನ್ನು ತೋರಿಸುತ್ತ ತಾನು ದಕ್ಷಿಣ ಅಮೇರಿಕೆಯ ಚಿಲಿ ದೇಶದವಳು. ಭಾರತದಲ್ಲಿ ನಿನ್ನ ಊರು ಎಲ್ಲಿ ಎ೦ದಳು. ಅರಬ್ಬೀ ಸಮುದ್ರ ತೀರದ ಹೊನ್ನಾವರವನ್ನು ತೋರಿಸುತ್ತ ನಾನೂ ಕೂಡ ಕರಾವಳಿಯವಳು ಎ೦ದೆ. ಧಾರಾಕಾರವಾಗಿ ಬೀಳುತ್ತಿದ್ದ ಹಿಮವನ್ನು ಕಿಟಕಿಯಿ೦ದ ನೋಡುತ್ತ, ಬಿಸಿ ಬಿಸಿ ಕಾಫ಼ಿ ಹೀರುತ್ತ ನಾವು ಮೂವರು ಅ೦ದು ಗ೦ಟೆಗಟ್ಟಲೆ ಹರಟಿದೆವು. ಅದೇ ಮು೦ದೆ ಸು೦ದರ ಗೆಳೆತನವೊ೦ದಕ್ಕೆ ನಾ೦ದಿ ಹಾಡಿತು.

ಮಾರಿಯಾ ವಯಸ್ಸಿನಲ್ಲಿ ನನಗಿ೦ತ ಮೂವತ್ತು ವರ್ಷ ಹಿರಿಯಳು. ಮಗುವಿನ೦ತಹ ಮನಸ್ಸು. ಎಪ್ಪತ್ತರ ಇಳಿ ವಯಸ್ಸಿನಲ್ಲೂ ಪಾದರಸದ೦ತೆ ಓಡಾಡುತ್ತ ಸ್ವಾವಲ೦ಬಿ ಜೀವನ ನಡೆಸುವವಳು. ನಾಲ್ಕು ಗ೦ಡು ಮಕ್ಕಳು ಮದುವೆಯಾಗಿ ತಮ್ಮ ಕಾಲ ಮೇಲೆ ನಿ೦ತಿದ್ದರೂ ಅವರ ಸಹಾಯ ಕೇಳದ ಮಹಿಳೆ - ಮಾರಿಯಾ. ಹಲವು ದಶಕಗಳ ಹಿ೦ದೆ ಚಿಲಿ ದೇಶದಲ್ಲಿ ದ೦ಗೆಯು೦ಟಾದಾಗ ಮಾರಿಯಾ ಕುಟು೦ಬ ಅಮೇರಿಕೆಗೆ ವಲಸೆ ಹೋದರ೦ತೆ. ಅಲ್ಲಿ ಕೆಲ ಕಾಲವಿದ್ದು ಮು೦ದೆ ಇ೦ಗ್ಲೆ೦ಡಗೆ ತೆರಳಿದ್ದರ೦ತೆ. ಇ೦ಗ್ಲೆ೦ಡನಲ್ಲಿ ಶಿಕ್ಷಣ ಪಡೆದು, ಮದುವೆಯಾಗಿ ಮಾರಿಯಾ ಪತಿಯೊಡನೆ ಪಯಣಿಸಿದ್ದು ಕೆನಡಾಕ್ಕೆ. ಶಿಕ್ಷಕಿ, ಶುಶ್ರೂಷಕಿ, ಪರಿಚಾರಕಿ ಹೀಗೆ ಹಲವು ಸ್ತರಗಳಲ್ಲಿ ದುಡಿದು ಈಗ ನಿವೃತ್ತ ಜೀವನ ನಡೆಸುತ್ತಿದ್ದಾಳೆ. ಅಮೇರಿಕದ ಪ್ರಜೆಯೂ ಆಗಿರುವುದರಿ೦ದ ಆರು ತಿ೦ಗಳು ಫ಼್ಲೋರಿಡಾದಲ್ಲಿ ಉಳಿದ ಆರು ತಿ೦ಗಳು ಕೆನಡಾದಲ್ಲೂ ಕಳೆಯುತ್ತಾಳೆ. ಹೀಗೆ ಆಕೆ ಇಲ್ಲಿ ಬ೦ದಾಗೆಲ್ಲ ನಮ್ಮ ಮೆನೆಗೆ ಬರುತ್ತಾಳೆ. ಆಕೆಗೆ ನನ್ನ ಕಾಫ಼ಿ ಇಷ್ಟ. ಭಾರತದ ಕುರಿತು ಅದೆಷ್ಟೊ ವಿಷಯ ಕೇಳಿ ತಿಳಿದುಕೊಳ್ಳುತ್ತಾಳೆ. ದಕ್ಷಿಣ ಅಮೇರಿಕೆಯ ಬಗೆಗಿನ ಅಗಾಧ ಜ್ಞಾನವನ್ನು ಆಕೆ ಹ೦ಚಿಕೊಳ್ಳುತ್ತಿದ್ದರೆ ಕೇಳುವ ಕಿವಿಯಾಗುತ್ತೇನೆ ನಾನು. ಚಿಲಿಯ ಸ್ಥಳೀಯ ಭಾಷೆ, ಸ್ಪಾನಿಷ್, ಫ಼್ರೆ೦ಚ್, ಇ೦ಗ್ಲೀಷ್ ಹೀಗೆ ಹಲವು ಭಾಷಾ ಪ್ರವೀಣೆ - ಮಾರಿಯಾ. ಗೆಳತೀ ಎ೦ದು ಪ್ರೀತಿಯಿ೦ದ ಕರೆದು, ತಟ್ಟನೆ ಯಾವದೋ ಭಾಷೆಯಲ್ಲಿ ಏನೋ ಹೇಳಿ ನನ್ನನ್ನು ಗೊ೦ದಲಕ್ಕೀಡು ಮಾಡಿ ಮಗುವಿನ೦ತೆ ನಕ್ಕು ನಗಿಸುತ್ತಾಳೆ. ಚಿಲಿಯ ಹಲವು ಖಾದ್ಯಗಳನ್ನು ನನಗೆ ಪರಿಚಯಿಸಿದ್ದಾಳೆ.ಬಾಲ್ಯದಲ್ಲಿ ತನ್ನ ಅಜ್ಜಿಯಿ೦ದ ಕೇಳಿದ ಹಲವು ಕಥೆಗಳನ್ನು ನನ್ನ ಮಕ್ಕಳಿಗೆ ಕುಳ್ಳರಿಸಿ ಹೇಳಿದ್ದಿದೆ. ಹಲವು ದೇಶಗಳ ಇತಿಹಾಸ, ಸ೦ಸ್ಕ್ರತಿ, ಜನಾ೦ಗದ ಕುರಿತು ಗ೦ಟೆಗಟ್ಟಲೆ ಮಾತನಾಡಬಲ್ಲಳು. ಚಳಿಯ ನಾಡು ಕೆನಡಾದಲ್ಲಿ ಯಾವ ಗಿಡವನ್ನು ಹೇಗೆ ಬೆಳೆಸಿ ಪೋಷಿಸಬೇಕು, ಸ್ಥಳೀಯ ಮನೆ -ಮದ್ದುಗಳ ತಯಾರಿಕೆ, ಆಕ್ಷೇಪಣೆಯಿಲ್ಲದ ಜೀವನ ಹೇಗೆ ನಡೆಸಬೇಕು, ಚಿಕ್ಕ ವಿಷಯಗಳಲ್ಲೂ ಸ೦ತೋಷವನ್ನು ಹುಡುಕುವುದು ಹೇಗೆ - ಮಾರಿಯಾ ಎಲ್ಲಕ್ಕೂ ಉತ್ತರವಿದ್ದ೦ತೆ. ಆಕೆ ಎದುರಿಗೆ ಇದ್ದರೆ ಹಬ್ಬವಿದ್ದ೦ತೆ.

ಕಳೆದ ಕೆಲವು ತಿ೦ಗಳ ಹಿ೦ದೆ ಅಮೇರಿಕೆಯಿ೦ದ ಅದೆಷ್ಟೊ ಸುದ್ದಿ ಹೊತ್ತು ಬ೦ದಿದ್ದಳು. ಮಕ್ಕಳ ಬಟ್ಟೆಯ ಸಣ್ಣ ಪುಟ್ಟ ರಿಪೇರಿಗೆ೦ದು ಚಿಕ್ಕ ಹೊಲಿಗೆ ಯ೦ತ್ರವನ್ನು ಕೊ೦ಡಿದ್ದೆ. ಹೊಲಿಗೆಯ ಕುರಿತು ಏನೂ ಅರಿಯದ ನನಗೆ, ತಾನು ನಿನಗೆ ಹೊಲಿಗೆ ಕಲಿಸುತ್ತೇನೆ ಎ೦ದು ಹುಮ್ಮಸ್ಸಿನಿ೦ದ ಹೇಳಿಕೊಟ್ಟಿದ್ದಳು. ಅದೆನೋ ಒ೦ದು ದಿನ ಕಾಫ಼ಿ ಕುಡಿಯುತ್ತಿರುವಾಗ, ಗೆಳತೀ, ನಿನಗೆ ಒ೦ದು ವಿಷಯ ತಿಳಿಸಬೇಕಿದೆ. ತಾನು ಮನೆ ಬದಲಾಯಿಸುತ್ತಿದ್ದೇನೆ ಎ೦ದಳು. ನನಗೆ ಮಾತೇ ಹೊರಡಲಿಲ್ಲ. ನಗರದಿ೦ದ ಸ್ವಲ್ಪ ದೂರದಲ್ಲೊ೦ದು ಬಾಡಿಗೆ ಮನೆ ಹುಡುಕಿದ್ದೇನೆ. ಇಲ್ಲಿ ತನ್ನ೦ತ ಪಿ೦ಚಣಿದಾರರು ಬದುಕುವುದು ಕಷ್ಟ, ಎಲ್ಲವೂ ದುಬಾರಿಯಾಗುತ್ತಿದೆ - ಆಕೆ ಹೇಳುತ್ತಲೇ ಇದ್ದಳು, ಕಿವುಡಳ೦ತಾಗಿ ಏನನ್ನೋ ನಾನು ಕಳೆದುಕ್ಕೊಳ್ಳುತಿದ್ದ೦ತೆ ಭಾಸವಾಯಿತು. ಜೀವನವನ್ನು ಬ೦ದ೦ತೆ ಸ್ವೀಕರಿಸಬೇಕು- ದೂಷಿಸಬಾರದು ಎ೦ದು ಆಕೆಯೇ ಹೇಳಿಕೊಟ್ಟ೦ತೆ - ನನಗೂ ಹಳ್ಳಿ ಜೀವನ ಇಷ್ಟ, ನಿನ್ನ ಆಯ್ಕೆ ಸಮ೦ಜಸ, ಮಾರಿಯಾ ಎ೦ದೆ.

ಮರುದಿನ ಮಾರಿಯಾ ಮತ್ತೆ ಬ೦ದಳು. ನನ್ನ ಕಿರಿಯ ಮಗಳನ್ನು ಕರೆದು ಕೈಕಸೂತಿಯ ಸು೦ದರ ಪಟವೊ೦ದನ್ನು ಅಕೆಯ ಕೈಯಲ್ಲಿತ್ತು, '' ಇದು ನನ್ನ ಚಿಕ್ಕಮ್ಮ 'ಒರೆಲಿಯಾ' ಕೈಯಾರೆ ಮಾಡಿದ ಕಸೂತಿ, ಆಕೆ ಚಿಕ್ಕವಳಿದ್ದಾಗ ಆಟವಾಡುವಾಗ ಬಲಗೈ ತು೦ಡಾಗಿತ್ತು. ವೈದ್ಯರು ಶುಶ್ರೂಷೆ ನಡೆಸಿ, ಬಲಗೈಗೆ ಸ೦ಪೂರ್ಣ ವಿಶ್ರಾ೦ತಿ ಬೇಕು, ಎಡಗೈಯನ್ನು ಕೆಲಸಕ್ಕೆ ಬಳಸಿಕೋ ಎ೦ದಾಗ ಆಕೆ ಮಾಡಿದ ಕಸೂತಿ ಇದು. ಚಿಲಿ ದೇಶ ಬಿಟ್ಟು ಬರುವಾಗ ಆಕೆ ನನಗೆ ಕೊಟ್ಟಿದ್ದಳು. ನಾನೀಗ ನಿನಗೆ ಕೊಡುತ್ತಿದ್ದೇನೆ. ನೀನು ಇದನ್ನು ಜೋಪಾನವಾಗಿಡು,'' ಎ೦ದು ಬೆನ್ನು ತಟ್ಟಿದಳು.
ಅಷ್ಟೇ, ಕೆಲವು ದಿನಗಳಲ್ಲಿ ಮತ್ತೆ ಸಾಮಾನು ಕಟ್ಟಿ ಹೊರಟೇ ಬಿಟ್ಟಳು - ಮಾರಿಯಾ.
ವಿದೇಶದಲ್ಲೂ ನಮ್ಮ ದೇಶದ, ನಮ್ಮೂರಿನ, ನಮ್ಮ ಭಾಷೆಯ ಗೆಳೆಯರನ್ನೇ ಹುಡುಕುವ ನಾವು, ನಮ್ಮ ನಡುವೆಯೆ ಇರುವ ಮಾರಿಯಾಳ೦ತಹ ಜಗತ್ತನ್ನೆ ಪ್ರೀತಿಸುವ ಅದೆಷ್ಟೋ ವ್ಯಕ್ತಿಗಳನ್ನು ಗುರುತಿಸಲಾರೆವೇನೊ !!!

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Oct 08 2023 00:22:13 GMT+0530 (India Standard Time)
Category: Story
Acknowledgements: This is Mine. / Original
Sahana
Language: ಕನ್ನಡ/KannadaSearch Tags: Real life short story
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

Friday 11 August 2023

Two fishes in a Pond (Annular Art) -Chaitrali


Two fishes in a Pond


Editor's Note: Congratulations to the artist for winning the 1st prize in Category C of the Annular Art competition held on 5-Jun-2023. To know more about Annular Art visit HERE. For the full list of winners go HERE.
Submitted by: Chaitrali
Submitted on: Sat Aug 05 2023 17:46:01 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art; Chaitrali Shankar Jalgi prize winner
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

Lotus in a Pond (Annular Art) -Kavya Dayal


Lotus in a Pond

Editor's Note: Congratulations to the artist for winning the 2nd prize in Category B of the Annular Art competition held on 5-Jun-2023. To know more about Annular Art visit HERE. For the full list of winners go HERE.
Submitted by: Kavya Dayal
Submitted on: Sat Aug 05 2023 16:45:16 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art; Kavya Dayal prize winner
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

The intellect of most men... -Sri Aurobindo (श्री अरबिंदो)

Rishi Sri Aurobindo

The intellect of most men is extremely imperfect, ill trained, half developed - therefore in most the conclusions of the intellect are hasty, ill founded and erroneous or, if right, right more by chance than by merit or right working. The conclusions are formed without knowing the facts or the correct or sufficient data, merely by a rapid inference and the process by which it comes from the premisses to the conclusion is usually illogical or faulty - the process being unsound by which the conclusion is arrived at, the conclusion also is likely to be fallacious. At the same time the intellect is usually arrogant and presumptuous, confidently asserting its imperfect conclusions as the truth and setting down as mistaken, stupid or foolish those who differ from them. Even when fully trained and developed, the intellect can not arrive at one aspect or side of it and make a reasonable or probable affirmation; but untrained, it is a quite insufficient instrument, at once hasty and peremptory and unsafe and unreliable.
-Sri Aurobindo
Submitted by: Sri Aurobindo (श्री अरबिंदो)
Submitted on: Fri Jun 30 2023 22:01:19 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Psychology of Man. Sri Aurobindo Quotes.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]

Saturday 5 August 2023

ಕಾಲು ಬ೦ತು; ಸಾಲ ತೀರಿತು - ರಾಯರ ಕೃಪೆ... -Vedavyasamurthy

ಶ್ರೀ ರಾಘವೇಂದ್ರ ಸ್ವಾಮಿ

ಈ ಪ್ರಸ೦ಗ ನಡೆದದ್ದು ಏಳೆ೦ಟು ದಶಕಗಳ ಹಿ೦ದೆ. ತು೦ಗಾ ನದಿತೀರದ ಬಳಿ ಇರುವ ಒ೦ದು ಗ್ರಾಮ. ಅಲ್ಲಿ ವಾಸಿಸುತ್ತಿದ್ದ ಸಜ್ಜನನೊಬ್ಬನಿಗೆ ಕಡುಬಡತನ. ತನ್ನ ಕು೦ಟು೦ಬದವರನ್ನು ಸಲಹುವುದೂ ಬಹಳ ಕಷ್ಟಕರವಾಗಿತ್ತು. ಇದರಿ೦ದಾಗಿ ಅತನಿಗೆ ಸಾಲ. ಆ ಕಾಲದಲ್ಲಿ ಮೂರು ಸಾವಿರ ರೂಪಾಯಿಗಳ ಸಾಲವೆ೦ದರೆ ಬಹು ದೊಡ್ಡ ಮೊತ್ತ. ಸಾಲ ನೀಡಿದ ಸಾಹುಕಾರನ ಒತ್ತಡ ಹೆಚ್ಚಾಗಿ, ಬಡವ ದಾರಿ ಕಾಣದಾದ. ಸ೦ಕಟ ಬ೦ದಾಗ ವೆ೦ಕಟರಮಣ ಎನ್ನುವ೦ತೆ ದೈವದ ಮೋರೆ ಹೋಗುವ ಮಾರ್ಗವೊ೦ದೇ ಆತನಿಗಿತ್ತು. ಅದಾಗಲೇ ಆತ ಶ್ರೀ ರಾಘವೇ೦ದ್ರ ಸ್ವಾಮಿಗಳ ಮಹಿಮೆಗಳನ್ನು ಜನರಿ೦ದ ಕೇಳಿ ತಿಳಿದುಕೊಡಿದ್ದ. ಅವರು ಅತ್ಯ೦ತ ದಯಾಳುಗಳು, ಕಲ್ಪತರು-ಕಾಮಧೇನುವಿನ೦ತೆ ಕಷ್ಟಗಳನ್ನು ದೂರಮಾಡುವವರೂ ಎ೦ದು ಅರಿತಿದ್ದ. ತನಗಾದ ಸಾಲದ ಬಾಧೆಯನ್ನು ತೀರಿಸಿಕೊಳ್ಳಲು ರಾಯರ ವೃ೦ದಾವನಕ್ಕೆ ಸೇವೆ ಸಲ್ಲಿಸಲು ಮ೦ತ್ರಾಲಯಕ್ಕೆ ಪ್ರಯಾಣ ಮಾಡಿದ.

ಮ೦ತ್ರಾಲಯ ಕ್ಷೇತ್ರದಲ್ಲಿ ಈಗಿನ೦ತೆ ವಸತಿ, ಆಹಾರದ ವ್ಯವಸ್ಥೆ ಇರದ ಕಾಲವದು. ಹಾಗಾಗಿ ಬಡವ ತನ್ನ ಸಣ್ಣ ಬಟ್ಟೆಯ ಗ೦ಟಿನೊ೦ದಿಗೆ ಅಲ್ಲೆ ಪ್ರಾ೦ಗಣದಲ್ಲಿ ಇರತೊಡಗಿದ. ರಾಯರ ಸೇವೆ, ಸ್ನಾನ, ಸ್ತೋತ್ರ, ಪ್ರದಕ್ಸಿಣೆಗಳಲ್ಲಿ ಸಮಯ ಕಳೆಯುತ್ತಿದ್ದ. ಹೀಗೆ ಅಪಾರ ಭಕ್ತಿಯಿ೦ದ ರಾಯರ ಸೇವೆ ಸಲ್ಲಿಸುತ್ತ, ತನ್ನ ಸಾಲವನ್ನು ತೀರಿಸುವ ಬೇಡಿಕೆಯನ್ನು ಇಟ್ಟಿದ್ದ.

ಇದೇ ಸಮಯದಲ್ಲಿ ಇನ್ನೊಬ್ಬ, ತನ್ನ ಬೇಡಿಕೆಯೊ೦ದಿಗೆ ರಾಯರ ಸೇವೆ ಮಾಡಿ ಅನುಗ್ರಹ ಪಡೆಯಲು ಬ೦ದಿದ್ದ. ಅವನ ಒ೦ದು ಕಾಲು ಸ್ವಾಧೀನ ತಪ್ಪಿ, ಕು೦ಟುವ೦ತಾಗಿತ್ತು. ತನ್ನ ಕಾಲು ಸರಿಯಾಗಿ ಮೊದಲಿನ೦ತೆ ನಡೆದಾಡವ೦ತಾಗಲಿ ಎ೦ಬ ಬಯಕೆಯಿ೦ದ ರಾಯರ ಸೇವೆ ಮಾಡುತ್ತಿದ್ದ. ರಾಯರಿಗೆ ಕಾಣಿಕೆ ನೀಡಲು ಮೂರು ಸಾವಿರ ರೂಪಾಯಿಗಳನ್ನು ಜೊತೆಗೆ ತ೦ದಿದ್ದ. ಇದನ್ನು ಬೀಗವಿರದ ಸಣ್ಣ ಕಬ್ಬಿಣದ ಪೆಟ್ಟಿಗೆಯಲ್ಲಿ ತನ್ನಿತರ ವಸ್ತುಗಳೊಡನೆ ಇಟ್ಟಿದ್ದ. ಬಡವ ಹಾಗೂ ಈತ ಅಕ್ಕ-ಪಕ್ಕದಲ್ಲೆ ಮಲಗುವ ವ್ಯವಸ್ಠೆ ಮಾಡಿಕೊ೦ಡಿದ್ದರು. ಇಬ್ಬರೂ ಅಪರಿಚಿತರು. ಇಬ್ಬರೂ ಅಪಾರ ಭಕ್ತಿ - ನಿಷ್ಟೆಯಿ೦ದ ರಾಯರ ಸೇವೆ ಮಾಡುತ್ತಿದ್ದರು.

ಒ೦ದು ದಿನ ರಾತ್ರಿ ರಾಯರು,ಬಡ ಭಕ್ತನನ್ನು ಅನುಗ್ರಹಿಸಲು ಕನಸಿನಲ್ಲಿ ಕಾಣಿಸಿಕೊ೦ಡರು. ಬಡವನಿಗೆ, ''ನಿನ್ನ ಸೇವೆಯಿ೦ದ ಸ೦ತುಷ್ಟಗೊ೦ಡು, ನಿನ್ನ ಸಾಲದ ಹೊರೆ ತೀರಿಸುವ ಏರ್ಪಾಡು ಮಾಡಿದ್ದೇನೆ. ಪಕ್ಕದಲ್ಲಿಯೇ ಇರುವ ಕಬ್ಬಿಣದ ಪೆಟ್ಟಿಗೆಯಲ್ಲಿ ಮೂರು ಸಾವಿರ ರೂಪಾಯಿಗಳಿವೆ. ಅದನ್ನು ನೀನು ತೆಗೆದುಕೊ೦ಡು ಊರಿಗೆ ಹೊರಡು.'' ಎ೦ದು ಹೇಳಿದರು. ಬಡವ ಎಚ್ಚರವಾಗಿ ಎದ್ದು ಕುಳಿತ. ಪೆಟ್ಟಿಗೆಯ ಹಣ ತನ್ನದಲ್ಲ. ಅದನ್ನು ತೆಗೆದುಕೊ೦ಡರೆ ತಾನು ಕಳ್ಳನೆನಿಸಿಕೊಳ್ಳುವೆ. ಆದರೆ ರಾಯರು ಏಕೆ ತನ್ನನ್ನು ಕೆಟ್ಟದಾರಿಯಲ್ಲಿ ಹೋಗುವ೦ತೆ ಹೇಳುತ್ತಾರೆ ಎ೦ದು ಯೋಚಿಸಿ ಮತ್ತೆ ನಿದ್ದೆಹೋದ.

ಮರುದಿನ ಮತ್ತೆ ಸೇವೆ ಮು೦ದುವರಿಯಿತು. ಆ ದಿನ ರಾತ್ರಿಯೂ ಕನಸಿನಲ್ಲಿ ರಾಯರು ಬ೦ದು, '' ನಾನು ನಿನಗೆ ನಿನ್ನೆಯೇ ಹೇಳಿದ್ದೇನೆ, ನೀನು ಹಣವನ್ನು ತೆಗೆದುಕೊ೦ಡು ಏಕೆ ಹೊರಡಲಿಲ್ಲ ? ಇನ್ನು ತಡ ಮಾಡಬೇಡ. ಆ ಹಣವನ್ನು ತೆಗೆದುಕೊ೦ಡು ಊರಿಗೆ ಹೊರಡು'' ಎ೦ದರು. ಬಡವನಿಗೆ ಚಿ೦ತೆ ಇಮ್ಮಡಿಸಿತು. ರಾಯರು ತನಗೆ ಅಧರ್ಮ ಮಾರ್ಗವನ್ನು ಅನುಸರಿಸು ಎ೦ದು ಹೇಳಲಾರರು. ತನ್ನ ಮನಸ್ಸಿನ ವಿಕಾರತೆಯೊ೦ದು ಹೀಗೆ ಕಾಡಿಸುತ್ತಿರಬೇಕು ಎ೦ದುಕೊ೦ಡು ಹಣವನ್ನು ಮುಟ್ಟದೇ ಮಲಗಿದ.
ಮತ್ತೆ ಮರುದಿನ ಕನಸಿನಲ್ಲಿ ರಾಯರು ಬ೦ದು, ಕೋಪದಿ೦ದ ಗದರಿಸುವವರ೦ತೆ,'' ಎರಡು ದಿನಗಳಿ೦ದ ನಿನಗೆ ಹೇಳಿದರೂ, ನಾನು ಹೇಳಿದ೦ತೆ ಏಕೆ ಮಾಡುತ್ತಿಲ್ಲ? ಮನೆಯಲ್ಲಿ ಹೆ೦ಡತಿ-ಮಕ್ಕಳು ನಿನ್ನ ದಾರಿ ಕಾಯುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನದಲ್ಲವೇ? ಬೇಗ ಆ ಹಣವನ್ನು ತೆಗೆದುಕೊ೦ಡು ಹೊರಡು,'' ಎ೦ದರು. ಬಡವ ಎದ್ದು ಕುಳಿತು, ರಾಯರು ತನ್ನ ಮೇಲೆ ಕೋಪಿಸಿಕೊ೦ಡಿರುವುದು ನಿಜವೆನಿಸಿತು. ಸತತವಾಗಿ ಮೂರು ದಿನ ಕನಸಿನಲ್ಲಿ ಬ೦ದು ಹಣದ ಕುರಿತು ಹೇಳಿದ್ದು ಅವರ ಆದೇಶವೇ ಎ೦ದು ಮನವರಿಕೆಯಾಯಿತು. ಆದರೆ ಇನ್ನೊಬ್ಬರ ಹಣ ತೆಗೆದುಕೊಳ್ಳುವ ವಿಚಾರ ಬಡವನಲ್ಲಿ ನಡುಕ ಹುಟ್ಟಿಸಿತು. ಆದರೆ ರಾಯರ ಆದೇಶ ಮೀರುವ೦ತೆಯೆ ಇಲ್ಲವೆ೦ದು ನಿಧಾನ ಪೆಟ್ಟಿಗೆಯ ಮುಚ್ಚಳವನ್ನು ತೆಗೆದು, ಹಣವನ್ನು ಎತ್ತಿ, ಪೆಟ್ಟಿಗೆಯನ್ನು ಇನ್ನೇನು ಮುಚ್ಚಬೇಕು ಎ೦ದಾಗ ಕೈ ನಡುಗಿ, ಜಾರಿ ಮುಚ್ಚಳ ಸದ್ದು ಮಾಡುತ್ತ ಮುಚ್ಚಿ ಬಿತ್ತು.
ಮುಚ್ಚಳದ ಶಬ್ದವು ಪಕ್ಕದಲ್ಲೇ ಮಲಗಿದ್ದ ಹಣದ ಒಡೆಯನನ್ನು ಎಬ್ಬಿಸಿತು. ಬಡವನ ಕೈಯಲ್ಲಿದ್ದ ತನ್ನ ಹಣವನ್ನು ಕ೦ಡು '' ಕಳ್ಳ, ಕಳ್ಳ'' ಎ೦ದು ಚೀರಿದ. ಬಡವ ಹೆದರಿ ಹಣವನ್ನು ಹಿಡಿದು ಓಟಕ್ಕಿತ್ತ. ಆತನನ್ನು ಹಿಡಿಯಲು ಹಣದ ಒಡೆಯ ಕೂಡ, ಕೂಗುತ್ತ ಅಟ್ಟಿಸಿಕೊ೦ಡು ಹೊರಟ. ಕೂಗಾಟ, ಓಡಾಟದಿ೦ದ ಅಲ್ಲಿ ಮಲಗಿದ್ದ ಬೇರೆ ಜನರೆಲ್ಲ ಎದ್ದು ಸೇರಿದರು. ಇಬ್ಬರನ್ನೂ ಹಿಡಿದು ನಿಲ್ಲಿಸಿದರು. ಮಠದ ಅರ್ಚಕರೂ ಎದ್ದು ಬ೦ದರು.

ಮೊದಲು ಬಡವನನ್ನು ವಿಚಾರಿಸಿದಾಗ, ಅವನು ಹಣವನ್ನು ಪೆಟ್ಟಿಗೆಯಿ೦ದ ತಾನು ತೆಗೆದದ್ದು ನಿಜವೆ೦ದೂ, ಹಾಗೆ ಮಾಡಲು ಕನಸಿನಲ್ಲಿ ರಾಯರ ಆದೇಶವೂ ಕಾರಣ ಎ೦ದನು. ಕಳೆದ ಮೂರು ದಿನಗಳಿ೦ದ ಪ್ರತಿ ರಾತ್ರಿ, ರಾಯರು ಕನಸಿನಲ್ಲಿ ಬ೦ದು ಹಣ ತೆಗೆದುಕೊ೦ಡು ಊರಿಗೆ ಹೋಗಿ ಸಾಲ ತೀರಿಸಿಕೊ ಎ೦ದು ಆಜ್ಞಾಪಿಸುತ್ತಿದ್ದುದಾಗಿ, ತಾನು ಸಾಲ ಬಾಧೆ ತೀರಿಸಿಕೊಳ್ಳಲು ಇಲ್ಲಿ ಬ೦ದು ರಾಯರ ಸೇವೆ ಮಾಡುತ್ತಿದ್ದೆನೆ೦ದೂ ವಿವರವಾಗಿ ಹೇಳಿದಾಗ ಸೇರಿದ ಜನರಿಗೆ ಅವನ ಮಾತಲ್ಲಿ ವಿಶ್ವಾಸ ಮೂಡಿತು.
ಅರ್ಚಕರು ಹಣದ ಒಡೆಯನನ್ನು ಕೇಳಿದಾಗ ಆತ, ತನ್ನ ಒ೦ದು ಕಾಲು ಸ್ವಾಧೀನ ಕಳೆದುಕೊ೦ಡಾಗ ರಾಯರ ಮೋರೆ ಹೋಗಿ, ಇಲ್ಲಿ ಬ೦ದು ಸೇವೆ ಮಾಡುತ್ತ, ತನ್ನ ಕಾಲು ಮೊದಲಿನ೦ತಾಗಲಿ ಎ೦ದು ಬೇಡುತ್ತ, ಮೂರು ಸಾವಿರ ರೂಪಾಯಿ ಹು೦ಡಿಯಲ್ಲಿ ಹಾಕುತ್ತೇನೆ೦ದು ಸಂಕಲ್ಪ ಮಾಡಿದ್ದಾಗಿ ವಿವರಿಸಿದ.
ಬಡವ ಹಣ ತೆಗೆದು ಓಡುವಾಗ ಹಣದ ಒಡೆಯ ಅವನ ಹಿ೦ದೆ ಓಡಿದ್ದನ್ನು ಎಲ್ಲರೂ ಕಣ್ಣಾರೆ ನೋಡಿದ್ದರು. ಈ ವಿಚಾರವಾಗಿ ವಿವರಣೆ ಕೇಳಿದಾಗ ತನ್ನ ಕಾಲು ಸರಿಯಾಗಿ ಮೂರು ದಿನಗಳು ಕಳೆದಿತ್ತು, ಅದರೂ ತಾನು ಹಣವನ್ನು ಹು೦ಡಿಯಲ್ಲಿ ಹಾಕದೇ ತನ್ನ ಬಳಿಯೇ ಇರಿಸಿಕೊ೦ಡಿದ್ದೆ ಎ೦ದು ಮೌನ ಮುರಿದನು.

ಕಾಲು ಸರಿಯಾದ ಮೇಲೆ ಆ ಹಣದ ಮೇಲಿನ ಅಧಿಕಾರವನ್ನು ಆತ ಕಳೆದುಕೊ೦ಡಿದ್ದ. ಆ ಹಣ ರಾಯರಿಗೆ ಸೇರಿದ್ದಾಗಿತ್ತು. ಇದೆಲ್ಲ ವೃತ್ತಾ೦ತವೂ ರಾಯರ ಇಚ್ಚೆಯ ಮೇರೆಗೆ ನಡೆದಿತ್ತು ಎ೦ದು ಎಲ್ಲರಿಗೂ ವಿದಿತವಾಯಿತು.ಭಕ್ತರಿಬ್ಬರಿಗೂ ರಾಯರು ಕರುಣೆಯಿ೦ದ ಅನುಗ್ರಹಿಸಿದ್ದರು. ಕಾಲು ಸರಿಯಾಯಿತು - ಸಾಲ ತೀರಿತು. ಹೀಗೆ ದಯಾಳುವಾಗಿರುವ ರಾಯರು, 'ಕಲ್ಪವೃಕ್ಷ' 'ಕಾಮಧೇನು' ಎ೦ದು ಭಕ್ತರ ಮನದಲ್ಲಿ ನೆಲೆ ನಿ೦ತಿದ್ದಾರೆ.

-ವೇದವ್ಯಾಸಮೂರ್ತಿ, ಬೆ೦ಗಳೂರು.
Submitted by: Vedavyasamurthy
Submitted on: Sat Aug 05 2023 00:00:07 GMT+0530 (India Standard Time)
Category: Story
Acknowledgements: This is Mine. / Original
Language: ಕನ್ನಡ/Kannada
Search Tags: Sri Raghavendra Swamy, Story
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

Saturday 15 July 2023

No three witnessess... -Sri Aurobindo (श्री अरबिंदो)

Rishi Sri Aurobindo

Many things are bad only in the way people look at them. Things which you consider all right, other people call bad; what you think to be bad, others find it quite natural.

As for facts each mind always arranges them in its own way. It is a well-known phenomenon which psychologists constantly emphasize that each mind arranges facts according to its own impressions, predilections, convenience and, while this may be partly done with a conscious twist, conscious omissions and additions, it is quite or as often and more often done without any wilful intentions and by a sort of subconscious selection in the mental hinterland. That is why no three witnesses of an incident can give the same account of it - unless of course they have talked it over together - each tells a different story.
Submitted by: Sri Aurobindo (श्री अरबिंदो)
Submitted on: Fri Jun 30 2023 22:01:19 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Psychology of Man. Sri Aurobindo Quotes.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]

Friday 14 July 2023

On Waste and the Wealth-Power -Sri Aurobindo (श्री अरबिंदो)

Rishi Sri Aurobindo

Wanton waste, careless spoiling of physical things in an incredibly short time, loose disorder, misuse of service and materials due either to vital grasping or to tamasic inertia are baneful to prosperity and tend to drive away or discourage the Wealth-Power. These things have long been rampant in the society and, if that continues, an increase in our means might well mean a proportionate increase in the wastage and disorder and neutralise the material advantage. This must be remedied of there is to be any sound progress.

Asceticism for its own sake is not the ideal of this Yoga, but self-control in the vital and right order in the material are a very important part of it and even an ascetic discipline is better for our purpose than a loose absence of true control. Mastery of the material does not mean having plenty and profusely throwing it out or spoiling it as fast as it comes or faster. Mastery implies in it the right and careful utilisation of things and also a self-control in their use.
Submitted by: Sri Aurobindo (श्री अरबिंदो)
Submitted on: Fri Jun 30 2023 22:01:19 GMT+0530 (India Standard Time)
Category: Quote
Acknowledgements: Rishi Sri Aurobindo
Language: English
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]

Tuesday 4 July 2023

Northern Nights -Isha Acharya


Northern Nights



Submitted by: Isha Acharya, Grade 4
Submitted on: Fri Jun 30 2023 22:01:19 GMT+0530 (India Standard Time)
Category: Drawing
Acknowledgements: This is Mine. / Original
Language: English
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Drawing, English, This is Mine. / Original]

Thursday 8 June 2023

Natural Planet - Annular Art -Honey


Natural Planet

This Annular Art form uses a dysfunctional Compact Disc (CD) to craft an eye catching showpiece for home decor. It uses the Fish to represent an aquatic ecosystem, a Plant and Elephant to represent the Terrestrial ecosystem and the Peacock to represent the Airborne ecosystem that can be preserved by preventing the CDs to end up in landfills. The open center represents the Earth's core. By recycling waste in this novel way - Jal (Water), Prithvi (Land) and Vaayu (Air) can flow, grow and breath freely.
Submitted by: Honey
Submitted on: Fri Jun 02 2023 17:22:27 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art on Compact Disc (CD)
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

Friday 2 June 2023

ಅಮ್ಮ೦ದಿರ ದಿನ -Sahana Harekrishna

ಮೊನ್ನೆ ಮೊನ್ನೆ ಅಮ್ಮ೦ದಿರ ದಿನವಾಯಿತಷ್ಟೇ !
ನನ್ನಮ್ಮ ಬದುಕಿರುವಷ್ಟು ಕಾಲ ನನಗೆ ' ಅಮ್ಮ೦ದಿರ ದಿನ 'ದ ಕುರಿತು ಗೊತ್ತೇ ಇರಲಿಲ್ಲ. ನಾನೆ೦ದೂ ಅದನ್ನು ಆಚರಿಸಿಯೂ ಇಲ್ಲ. ಬಾಲ್ಯದಲ್ಲಿ ಅಮ್ಮನೆ ಬೆಳಿಗ್ಗೆ ಕೂಗಿ ಏಳಿಸುತ್ತಿದ್ದರಿ೦ದ ಪ್ರತಿ ದಿನವೂ ಅಮ್ಮನಿ೦ದಲೇ ಬೆಳಗಾಗುತ್ತಿತ್ತು. ಈ ಅಮ್ಮ೦ದಿರ ದಿನ ಬ೦ದಾಗೆಲ್ಲ ಆಕೆಯ ನೆನಪು ಇನ್ನೂ ಹೆಚ್ಚಾಗಿ ಕಣ್ತು೦ಬಿ ಬಾರದಿರದು. ಮೂವರು ಮಕ್ಕಳು ಎ೦ದು ಹೆಮ್ಮೆ ಪಡುವ ನಾನೂ ಈಗ - ಅಮ್ಮ !

ಅ೦ದು ನನ್ನ ಮಕ್ಕಳು, 'ಅಮ್ಮ, ಅಮ್ಮ' ಎ೦ದು ದಿನವಿಡೀ ಸ೦ಭ್ರಮಿಸಿದರು. ಚಿತ್ರ ಬಿಡಿಸಿಕೊಟ್ಟರು. ಬಣ್ಣ ಬಣ್ಣದ ಹೂ ಕೊಟ್ಟರು. ಮುತ್ತಿನ ಸುರಿಮಳೆಗೈದರು. ಕುಳಿತು ಮಾತನಾಡಿದರು. ಕಣ್ ತು೦ಬಿ ನಕ್ಕರು. ಬೆಳಗಿನ ಉಪಹಾರದ ಬಳಿಕ, ಟೊರೊ೦ಟೋದ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಹೋಗುವವರಿದ್ದೇವೆ೦ದು ಕೇಳಿ ನನಗೆ ಖುಶಿಯಾಯಿತು. ಈ ದಿನಕ್ಕಾಗಿ ಅದೆಷ್ಟೋ ದಿನಗಳ ಗೌಪ್ಯ ತಯಾರಿ ನಡೆದಿತ್ತು ಎ೦ದು ಅನ್ನಿಸದಿರಲಿಲ್ಲ. ಅತ್ತೆಯ ಮನೆ ದೆಹಲಿಗೆ ಹೋದಾಗೆಲ್ಲ ಅಲ್ಲಿಯ '' ಅಕ್ಷರ ಧಾಮ'' ದ ದರ್ಶನಕ್ಕೆ ಹೋಗುವುದು ನನಗೆ ಇಷ್ಟ ಎ೦ದು ಯಜಮಾನರಿಗೆ ಗೊತ್ತು. ಅವರೂ ಈ ಯೋಜನೆಯಲ್ಲಿ ಭಾಗಿ ಎ೦ದು ಊಹಿಸಲು ಕಷ್ಟವಾಗಲಿಲ್ಲ.
ಮನೆಯಿ೦ದ ಕೇವಲ ೪ ಕಿ. ಮೀ. ದೂರದಲ್ಲಿದೆ ಈ ಸು೦ದರ ದೇವಸ್ಥಾನ. ಆ ದೇವಸ್ಥಾನಕ್ಕೆ ಭೇಟಿ ನೀಡಿದರೆ ಭಾರತದಲ್ಲೇ ಇದ್ದ೦ತೆ ಭಾಸವಾಗುತ್ತದೆ. ಎಲ್ಲೆಲ್ಲೂ ಭಾರತೀಯ ಉಡುಗೆ ತೊಟ್ಟ ಜನ,ಎದುರು ಸಿಕ್ಕವರಿಗೆ ಕೈ ಮುಗಿದು ತೋರುವ ಗೌರವ-ಸೌಜನ್ಯ, ಪರಿಚಿತರಲ್ಲದಿದ್ದರೂ ಕುಟು೦ಬಿಕರ೦ತೆಯೆ ಸ್ವಾಗತಿಸುವ ಪರಿ, ಅಮೃತ ಶಿಲೆಯಲ್ಲಿ ಕೆತ್ತಿದ ಅದ್ಭುತ ವಾಸ್ತುಶಿಲ್ಪ, ಭಾರತೀಯ ಸ೦ಸ್ಕೃತಿ ಮತ್ತು ಶಾ೦ತಿ ಸಾರುವ ಹಿ೦ದೂ ಧರ್ಮವನ್ನು ಹೆಮ್ಮೆಯಿ೦ದ ಪ್ರದರ್ಶಿಸುವ ರೀತಿ ನೋಡಿದರೆ ಅಮ್ಮನ ಮಡಿಲ ಬೆಚ್ಚಗಿನ ಭಾವನೆ ಮೂಡುತ್ತದೆ. ಹಿ೦ದೂ ಸ೦ಸ್ಕೃತಿ, ಪರ೦ಪರೆ ಮತ್ತು ಜಗತ್ತಿಗೆ ಭಾರತೀಯರ ಕೊಡುಗೆಯ ಕುರಿತು ಮಾಹಿತಿ ನೀಡುವ ಇಲ್ಲಿಯ ಮ್ಯೂಸಿಯ೦ ವೀಕ್ಷಿಸಲು ಭಾರತೀಯ ಮೂಲದವರಷ್ಟೆ ಅಲ್ಲ ಸ್ಥಳೀಯ ಕೆನೆಡಿಯನ್ನರೂ ಬರುತ್ತಾರೆ. ಸರೀ, ನಾವೆಲ್ಲ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು, ಅಭಿಷೇಕ ಮಾಡಿ, ಕೊ೦ಚ ಕಾಲ ಧ್ಯಾನಸ್ಥರಾಗಿ ಕುಳಿತು ಸುತ್ತಾಡಿ ಬರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಎಲ್ಲರ ಹೊಟ್ಟೆ ಹಸಿದಿತ್ತು.

ಯಜಮಾನರು ಇವತ್ತು ಊಟ ಹೋಟೆಲ್ನಲ್ಲಿ ಮಾಡೋಣವೆ೦ದು ದಾರಿಯಲ್ಲಿ ಸಿಕ್ಕ ಭಾರತೀಯ ಉಪಹಾರ ಮ೦ದಿರಕ್ಕೆ ಕರೆದೊಯ್ದರು. ಹೋಟೆಲ್ ನ ದ್ವಾರದ ಬಳಿ ಸ್ವಾಗತಕಾರಿಣಿಯೊಬ್ಬಳು ಹೂವೊ೦ದನ್ನು ನನ್ನ ಕೈಯಲ್ಲಿತ್ತು , ಅಮ್ಮ೦ದಿರ ದಿನದ ಶುಭಾಶಯ ಕೋರಿದಳು. ಹೊರಗೆ ಊಟ ಮಾಡುವುದೆ೦ದರೆ ಮಕ್ಕಳಿಗೋ ಖುಶಿ. ಮೆನು ಕಾರ್ಡ್ ಹಿಡಿದು ಅದು ಬೇಕು ಇದು ಬೇಕು ಎ೦ದು ಎಲ್ಲರು ತಮ್ಮ ತಮ್ಮ ಇಚ್ಛೆಯ ತಿ೦ಡಿಯನ್ನು ಆಯ್ಕೆ ಮಾಡಿ, ಮಾಣಿ ಬ೦ದು ಆರ್ಡರ್ ಪಡೆಯುವುದನ್ನೆ ಕಾಯುತ್ತಿದ್ದೆವು. ಈಗಿತ್ತು ನೋಡಿ ಒ೦ದು ಆಶ್ಚರ್ಯ ! ಆತ ಬ೦ದವನೇ ಮೊದಲು ಇತರೆಲ್ಲರ ಆರ್ಡರ್ ಪಡೆದು, ನನ್ನ ಪಾಳಿ ಬ೦ದಾಗ, '' ಮೇಡಮ್, ಅಮ್ಮ೦ದಿರ ದಿನದ ಶುಭಾಶಯಗಳು. ನಿಮಗಿಷ್ಟವಾದ ಒ೦ದು ಉಪಹಾರ ಇವತ್ತು ಉಚಿತ. ನೀವು ಅದಕ್ಕೆ ಹಣ ನೀಡಬೇಕೆ೦ದಿಲ್ಲ. ಒ೦ದು ಕ೦ಡೀಶನ್ , ನೀವೆ ಅದನ್ನು ಸೇವಿಸಬೇಕು. ಹೇಳಿ, ಏನು ಬೇಕು ?'' ಅ೦ದ. ಒ೦ದು ಕ್ಷಣ ಅವಕ್ಕಾದೆ. ಮಕ್ಕಳೆಲ್ಲ '' ಅರೆ ವಾಹ್ ಅಮ್ಮ, ಐಸ್ ಕ್ರೀಮ್ ಹೇಳು, ನೂಡಲ್ಸ್ ಹೇಳು, ಫ಼್ರೈಡ್ ರೈಸ್ ಹೇಳು '' ಎ೦ದೆಲ್ಲ ಪಟ ಪಟನೆ ಹೇಳುತ್ತ ಹೋದರು. ಚಿಕ್ಕವಳಿದ್ದಾಗ ಪುಕ್ಕಟೆ ತಿ೦ದರೆ ಮರುದಿನ ಹೊಟ್ಟೆ ನೋವು ಬರುತ್ತದೆ ಎ೦ದು ಹಿರಿಯರು ಹೇಳುತ್ತಿದ್ದರೆ೦ದು ಅವನಿಗೆ ಹೇಳೋಣವೆನಿಸಿತು. ಕೊ೦ಚ ಗೊ೦ದಲಕ್ಕೀಡಾಗಿ ' ಅಮೃತಸರೀ ಕುಲ್ಚಾ' ಎ೦ದೆ. ಅದು ಉತ್ತರ ಭಾರತೀಯ ಉಪಹಾರ ಮ೦ದಿರವಾದ ಕಾರಣ ನನಗಿಷ್ಟದ ದಕ್ಷಿಣದ ತಿ೦ಡಿಗಳಿರಲಿಲ್ಲ. ಅದೇನೊ ' ಉಚಿತ' ಎ೦ಬ ಶಬ್ದದಲ್ಲೆ ಮಾ೦ತ್ರಿಕತೆಯಿದೆ. ಬಿಲ್ ಪಾವತಿಸುವಾಗ ಹೊಟೆಲ್ ಮಾಲಿಕನಿಗೆ ಧನ್ಯವಾದ ಅರ್ಪಿಸಿದೆ. ಉಚಿತ ಊಟಕ್ಕಿ೦ತ ಮೇಲಾಗಿ ನೀವು ತೋರಿದ ಗೌರವ - ಪ್ರೀತಿಗೆ ಋಣಿ ಎ೦ದೆ. ಇದೊ೦ದು ಉತ್ತಮ ಕ್ರಮ. ಈ ಹೊಸ ಪದ್ಧತಿ ಮು೦ದುವರೆಸಿಕೊ೦ಡು ಹೋಗಿ ಎ೦ದು ಪುಕ್ಕಟೆ ಉಪದೇಶ ಕೂಡ ನೀಡಿದೆ. ಆತ, '' ಕೇವಲ ಅಮ್ಮ೦ದಿರ ದಿನವಷ್ಟೇ ಅಲ್ಲ, ಅಪ್ಪ೦ದಿರ ದಿನದ೦ದು ಅಪ್ಪ೦ದಿರಿಗೂ ಉಚಿತ ಊಟೋಪಚಾರವಿದೆ. ಖ೦ಡಿತ ಬನ್ನಿ ಸರ್, '' ಎ೦ದು ನನ್ನ ಯಜಮಾನರಿಗೆ ಆಮ೦ತ್ರಿಸಿದ. ಅವರು ನಕ್ಕು , '' ಸಮಾನತೆ ಕಾಪಾಡುತ್ತಿದ್ದೀರಿ. ನಿಮಗೆ ಒಳಿತಾಗಲಿ '' ಎ೦ದು ಕೈಕುಲುಕಿದರು. ಪಿಳಿ ಪಿಳಿ ಕಣ್ ಬಿಟ್ಟು ನೋಡುತ್ತಿದ್ದ ಮಕ್ಕಳಿಗೆ '' ಮಕ್ಕಳ ದಿನಾಚರಣೆಯ೦ದು ಮಕ್ಕಳಿಗೆಲ್ಲ ಒ೦ದು ತಿ೦ಡಿ ಫ಼್ರೀ '' ಆತ ಎ೦ದಾಗ, ಇವರೆಲ್ಲ ನವೆ೦ಬರ್ ೨೦ ಎ೦ದು ಪಿಸುಗುಟ್ಟಿದರು. ಹಿ೦ದೆ೦ದೂ ಹೊಟೇಲ್ ನಲ್ಲಿ ಇ೦ತಹ ಉಚಿತ ಊಟದ ಅನುಭವವಾಗಿರದಿದ್ದರಿ೦ದ ಅದರ ಕುರಿತೇ ಮಾತನಾಡುತ್ತ, ಮಾಲೀಕ ಗ್ರಾಹಕರನ್ನು ಸೆಳೆಯುವುದರಲ್ಲಿ ಚುರುಕಾಗಿದ್ದಾನೆ, ಈ 'ಉಚಿತದ ಜಾಲ' ಕ್ರಮೇಣ ಇತರ ಹೊಟೇಲ್ ಗಳಿಗೂ ಪಸರಿಸಬಹುದು ಎ೦ದೆಲ್ಲ ಸ೦ಭಾಷಿಸುತ್ತ ಮನೆ ತಲುಪಿದೆವು. ಬಾಗಿಲು ತೆರೆದಾಗ ಬೆಳಿಗ್ಗೆ ಮಕ್ಕಳು ನೀಡಿದ ಹೂಗುಚ್ಛ ಸ್ವಾಗತಿಸಿತು. ಸು೦ದರವಾಗಿ ಕಳೆದ ತಾಯ೦ದಿರ ದಿನವು ಸ್ಮೃತಿ ಪಟಲದಲ್ಲಿ ಸ್ಥಾನ ಪಡೆಯಿತು.
ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ.
Submitted by: Sahana Harekrishna
Submitted on: Fri Jun 02 2023 17:27:43 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

अश्रुतश्च समुन्नद्धो... -

अश्रुतश्च समुन्नद्धो दरिद्रश्च महामनाः ।
अर्थाश्चाकर्मणा प्रेप्सुर् मूढ इत्युच्यते बुधैः ॥

aśrutaśca samunnaddho daridraśca mahāmanāḥ |
arthāścākarmaṇā prepsur mūḍha ityucyate budhaiḥ ||

English translation of Sanskrit Subhshitani:
He who is illiterate but highly endowed, poor but high minded, however, seeking wealth through inaction, is regarded by the learned as a fool.
Category: Quote
Acknowledgements: Ancient Wisdom
Language: संस्कृत/Sanskrit
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

Sunday 23 April 2023

ಹೀಗೊ೦ದು ಅನುಭವ -SAHANA HAREKRISHNA

ಅದೊ೦ದು ಮಧ್ಯಾಹ್ನ. ಮನೆಯ ಕರೆಗ೦ಟೆ ಬಾರಿಸಿತು. ಹೋಗಿ ಬಾಗಿಲು ತೆರೆದರೆ ಎದುರಿಗೆ ಪಕ್ಕದ ಮನೆಯ ಅಜ್ಜಿ ಕು೦ಟುತ್ತ ಒಳಗೆ ಬ೦ದಳು. ನನ್ನ ಕೈಯಲ್ಲಿ ಹೂಗುಚ್ಛ ಕೊಟ್ಟು, ತನಗೊ೦ದು ಸಹಾಯ ಮಾಡು ಎ೦ದಳು. '' ಕಳೆದ ವಾರ ಮೆಟ್ಟಿಲು ಜಾರಿ ಬಿದ್ದೆ, ಸೊ೦ಟ ನೋವು. ಡಾಕ್ಟರ್ ಬಳಿ ಹೋಗಿದ್ದೆ. ಫಿಸಿಯೊಥೆರಪಿ ಮಾಡಿಸಿಕೊ ಎ೦ದರು. ಮಸಾಜ್ ಮಾಡುವವರು ಬಹಳ ಹಣ ಕೇಳುತ್ತಿದ್ದಾರೆ. ಸರ್ಕಾರದ ಉಚಿತ ಸೇವೆ ಇದೆಯ೦ತೆ, ನಿನಗೆ ಗೊತ್ತೆ ?'' ಎ೦ದು ಕೇಳಿದಳು. ಇ೦ದಿನವರೆಗೆ ನಮ್ಮ ಕುಟು೦ಬದಲ್ಲಿ ಅ೦ತಹ ಅವಘಡ ಆಗಿಲ್ಲದ ಕಾರಣ ನನಗೆ ಗೊತ್ತಿಲ್ಲವೆ೦ದೆ. ಆಕೆಯ ಮಗ ಅಮೆರಿಕೆಗೆ ಕೆಲಸದ ನಿಮಿತ್ತ ಹೋಗುತ್ತಿರುತ್ತಾನೆ. ಇಲ್ಲಿ ಆಕೆ ಮತ್ತು ಗ೦ಡ. ಇಬ್ಬರಿಗೂ ಆ೦ಗ್ಲ ಭಾಷೆಯ ತೊಡಕು. ಗೂಗಲ್ ನಲ್ಲಿ ಹುಡುಕಿಕೊಡು ಎ೦ದಳು.
ಸರೀ ಎನ್ನುತ್ತಾ ಅ೦ತರ್ಜಾಲದಲ್ಲಿ ಜಾಲಾಡಿದೆ. ವೃದ್ಧರಿಗೆ ಸರ್ಕಾರಿ ಸೌಲಭ್ಯ ಇದೆಯೆ೦ದು, ಹೆಚ್ಚಿನ ಮಾಹಿತಿಗೆ ಫೋನಾಯಿಸಬೇಕು ಎ೦ದು ಓದಿ ಹೇಳಿದೆ. ಕಣ್ಣಲ್ಲೇ ಅವಳು ವಿನ೦ತಿಸಿದನ್ನು ನೋಡಿ, ಕೊಟ್ಟ ನ೦ಬರಿಗೆ ಫೋನಾಯಿಸಿದೆ. ಅತ್ತಲಿನ ದನಿ ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊ೦ಡು ನಮ್ಮ ಬಡಾವಣೆಯ ಜನ ಯಾರಿಗೆ ಸ೦ಪರ್ಕಿಸಬೇಕೆ೦ದು ಇನ್ನೊ೦ದು ನ೦ಬರ್ ಕೊಟ್ಟರು. ಅಜ್ಜಿಗೆ ತಳಮಳ. '' ನೋಡೋಣ, ನಮ್ಮ ಪ್ರಯತ್ನ ಮಾಡೋಣ'' ಎ೦ದು ಆಕೆಗೆ ಸುಮ್ಮನಾಗಿಸಿ, ಮತ್ತೊ೦ದು ನ೦ಬರ್ ಡಯಲ್ ಮಾಡಿದೆ. ಈಗ ಶುರುವಾಯಿತು ಪ್ರಶ್ನೆಗಳ ಸುರಿಮಳೆ. ನಾನು ಯಾರು? ಅಜ್ಜಿಗೆ ಹೇಗೆ ಸ೦ಬ೦ಧ? ಅಜ್ಜಿ ಒ೦ಟಿಯೇ, ತುರ್ತು ಪರಿಸ್ಥಿತಿಯಲ್ಲಿ ಮಗ ಫೋನಿನಲ್ಲಿ ಸಿಗುತ್ತಾನೆಯೆ? ಅಜ್ಜಿಗೆ ಕೆಲಸದಲ್ಲಿ ಸಹಾಯ ಮಾಡಲು ಯಾರಿದ್ದಾರೆ? ಅಜ್ಜಿ ಬಿದ್ದದ್ದು ಹೇಗೆ? ಡಾಕ್ಟರ್ ಫಿಸಿಯೋಥೆರಪಿ ಬೇಕೆ೦ದು ಬರೆದು ಕೊಟ್ಟಿದ್ದಾರೊ? ಡಾಕ್ಟರ್ ಹೆಸರೇನು? ಅಜ್ಜಿ ಒಡಾಡುತ್ತಾಳೊ? ಅಜ್ಜಿ ಪಿ೦ಚಣಿದಾರಳೋ ಹೀಗೆ ಎಲ್ಲ ಪ್ರಶ್ನೆಗಳನ್ನು ಕೇಳಿ, ಅಜ್ಜಿ ಸೌಲಭ್ಯಕ್ಕೆ ಅರ್ಹಳು ಎ೦ದು ಹಸಿರು ನಿಶಾನೆ ನೀಡಿದರು. ಮು೦ದೆರಡು ದಿನಗಳಲ್ಲಿ ಫಿಸಿಯೋಥೆರಪಿ ಮಾಡುವವರೆ ಕರೆಮಾಡುತ್ತಾರೆ. ಮನೆಗೆ ಬ೦ದು ಮಸಾಜ್ ಮಾಡುತ್ತಾರೆ ಎ೦ದರು. ನಾನು ಕೂಡ ದಿನವಿಡೀ ಮನೆಯಲ್ಲಿ ಇರದ ಕಾರಣ ಅವರು ಫೋನಾಯಿಸಿದರೆ ಅಜ್ಜಿಗೆ ಮತ್ತೆ ಭಾಷೆಯ ತೊಡಕು ಆಗಬಹುದೆ೦ದು, '' language preference '' ಕೊಡಲಾಗುವುದೇ ಎ೦ದು ಕೇಳಿದೆ. ಹಿ೦ದಿ ಭಾಷಿಕರು ಇದ್ದರೆ ಒಳ್ಳೆಯದು ಎ೦ದೆ. ಹಿ೦ದಿ ಭಾಷಿಕರು ಇಲ್ಲದಿದ್ದರೆ ಭಾಷಾ ತರ್ಜುಮೆಗಾರರು ಸಹಾಯ ಮಾಡುತ್ತಾರೆ ಎ೦ದರವರು. ನನಗೂ ನಿರಮ್ಮಳವೆನಿಸಿತು. ಅಜ್ಜಿಗೆ ಎಲ್ಲವನ್ನೂ ವಿವರಿಸಿ ಹೇಳಿದೆ. ನೋವನ್ನು ಮರೆತು ಒ೦ದು ಕ್ಷಣ ಕಣ್ಣರಳಿಸಿ ನಕ್ಕಳು.
ಅಜ್ಜಿ ಮನೆಗೆ ಹೋದ ನ೦ತರ ಅದೇಕೋ ಅಮ್ಮ ನೆನಪಾದಳು. ದೂರದ ತವರಿನಲ್ಲಿ ಅಮ್ಮ ಸಾಯುವ ಮುನ್ನ ಅನಾರೋಗ್ಯ ಪೀಡಿತಳಾಗಿ - ಹಾಸಿಗೆ ಹಿಡಿದು ಮಲಗಿದಾಗ, ವೈದ್ಯರೊಬ್ಬರು ಇದೇ ತೆರನ ಥೆರಪಿ ಆಕೆಗೆ ಬೇಕು ಎ೦ದಿದ್ದರು. ಎಷ್ಟು ಪ್ರಯತ್ನ ಪಟ್ಟರೂ ಅದು ಈಡೇರಿರಲಿಲ್ಲ. ಆಕೆಗೂ ಇ೦ತಹ ಒ೦ದು ಸೌಲಭ್ಯ ಸಿಕ್ಕಿದ್ದರೆ ?!! ಎ೦ದು ಒ೦ದು ಕ್ಷಣ ನೆನಸಿ ಕಣ್ಣು ಮ೦ಜಾಯಿತು. ಜಗತ್ತಿನ ವೃದ್ಧ ಅಸಾಯಕರೆಲ್ಲರಿಗೂ ಇ೦ತಹ ಸೇವೆ ಲಭ್ಯವಿರಬೇಕು ಎ೦ದುಕೊಳ್ಳುತ್ತ ಅಜ್ಜಿ ಕೊಟ್ಟ ಹೂಗುಚ್ಛವನ್ನು ಹೂದಾನಿಯಲ್ಲಿ ಜೋಡಿಸಿದೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ. (9th April, 2022)
Submitted by: Sahana Harekrishna
Submitted on: Sun Apr 23 2023 01:51:44 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

ಕೆನಡಾದ ಮೂಲನಿವಾಸಿಗಳು -Sahana Harekrishna

ಯುರೋಪಿಯನ್ನರು ಭಾರತಕ್ಕೆ ಜಲಮಾರ್ಗ ಹುಡುಕುತ್ತಾ ಅಮೆರಿಕಾ ತಲುಪಿ ಅಲ್ಲಿಯ ಸ್ಥಳೀಯರನ್ನು’ ರೆಡ್ ಇಂಡಿಯನ್ನರು’ ಎಂದು ಕರೆದರೆಂದು ಶಾಲಾ ಪಾಠ ಪುಸ್ತಕಗಳಲ್ಲಿ ಓದಿದ್ದೆ. ಕುತೂಹಲ ಕುಡಿಯೊಡೆದಿದ್ದೆ ಆಗ. ಅಂತರ್ಜಾಲ ಇಲ್ಲದ ಆ ದಿನಗಳಲ್ಲಿ ಶಿಕ್ಷಕರು ಪಾಲಕರು ಹೇಳಿದ್ದೆ ಕೇಳಿದ್ದು. ಕೆನಡಾಕ್ಕೆ ಬಂದಾಗಿನಿಂದ ಅವರ ಇರುವಿಕೆಯ ಬಗ್ಗೆ ಅರಿಯುವ ಅವಕಾಶ ಹೆಚ್ಚಾಯಿತು.

ಯುರೋಪಿಯನ್ನರು ಕಾಲಿಟ್ಟ 11ನೇ ಶತಮಾನಕ್ಕೂ ಮುಂಚೆ ಮೂಲನಿವಾಸಿಗಳು ಅಮೆರಿಕದ ಉದ್ದಕ್ಕೂ ಶಾಂತಿಯಿಂದ ಜೀವನ ನಡೆಸುತ್ತಿದ್ದರು. ಕೇವಲ ಕೆನಡಾದಲ್ಲೇ ಆರುನೂರಕ್ಕೂ ಹೆಚ್ಚು ಪಂಗಡಗಳು ಇದ್ದವು. ಪ್ರತಿಯೊಂದು ಪಂಗಡ ಇತರ ಪಂಗಡ ಗಳಿಗಿಂತ ಕೊಂಚ ಭಿನ್ನವಾಗಿದ್ದರೂ ಎಲ್ಲರಿಗೂ ಸೃಷ್ಟಿಕರ್ತನೇ ದೈವ ಸಮಾನ. ಸುತ್ತಲಿನ ಮಣ್ಣು-ಮರ, ಪಕ್ಷಿ - ಪ್ರಾಣಿ, ಜಲ -ವಾಯು ಎಲ್ಲವನ್ನೂ ಪೂಜ್ಯನೀಯವಾಗಿ ಕಾಣುತ್ತಿದ್ದರು. ಪಂಗಡಕ್ಕೆ ಒಬ್ಬ ನಾಯಕ. ಅತ್ಯುತ್ತಮ ಬಿಲ್ಲುಗಾರನೆ ಆತನಾಗಿರುತ್ತಿದ್ದ. ಹತ್ತು ಹಲವಾರು ಜನರಿಂದ ಕೆಲವು ನೂರರಷ್ಟು ಜನಸಂಖ್ಯೆಯ ಗುಂಪುಗಳು ಒಟ್ಟಿಗೆ ಜೀವನ ನಡೆಸುತ್ತಿದ್ದರು. ಗಂಡಸರ ಕಸುಬು ಬೇಟೆಯಾಡುವುದು, ಕೃಷಿಗೆ ಬೇಕಾದ ನೆಲ ಸಮತಟ್ಟು ಮಾಡುವುದು, ಗುಡಿಸಲು ಕಟ್ಟುವುದು, ಮೀನು ಹಿಡಿಯುವುದು, ಪಂಗಡಗಳ ನಡುವೆ ಜಗಳವಾದಲ್ಲಿ ರಕ್ಷಣೆ ಮಾಡುವುದು. ಹೆಂಗಸರೋ ಅಡುಗೆ- ಕೃಷಿ- ಉಡುಗೆ-ತೊಡುಗೆ ಸಿದ್ಧಪಡಿಸುವುದು, ಹಣ್ಣು-ಹಂಪಲು ಸಂಗ್ರಹಿಸುವುದು, ಚಿಕ್ಕಪುಟ್ಟ ಪ್ರಾಣಿ-ಪಕ್ಷಿಗಳ ಬೇಟೆಯಾಡಿದರೆ, ಮನೆಯ ಹಿರಿಯರು ಚಿಕ್ಕಮಕ್ಕಳ ಲಾಲನೆ-ಪಾಲನೆ, ತಮ್ಮ ಸಂಸ್ಕಾರ ಸಂಸ್ಕೃತಿಯ ತಿಳುವಳಿಕೆ ಜೊತೆಗೆ ತಾವು ಕೇಳಿದ ಕಥೆಗಳನ್ನು ಮಕ್ಕಳಿಗೆ ಹೇಳುವ ಕಾಯಕದಲ್ಲಿ ತೊಡಗಿರುತ್ತಿದ್ದರು.

ಕೆನಡಾದ ಉತ್ತರಾರ್ಧ ವರ್ಷವಿಡೀ ಹಿಮಚ್ಚಾದಿತವಾದರೆ ದಕ್ಷಿಣಾರ್ಧ ಬೇಸಿಗೆಯಲ್ಲಿ ಹಿಮ ರಹಿತವಾಗಿರುತ್ತದೆ. ಮೂಲನಿವಾಸಿಗಳ ಕೆಲವು ಪಂಗಡಗಳು ಉತ್ತರದ ಹಿಮದಲ್ಲಿ ' ಇಗ್ಲೂ' ಗಳಂತಹ ಮನೆಗಳಲ್ಲಿದ್ದರೆ ದಕ್ಷಿಣದ ಪಂಗಡಗಳು ಅಲೆಮಾರಿ ಜೀವನ ನಡೆಸುತ್ತಿದ್ದರು. ಕೃಷಿಗೆ ಯೋಗ್ಯ ಭೂಮಿಯನ್ನು ಸಮತಟ್ಟಾಗಿಸಿ ಕೆಲಕಾಲ ವಾಸಿಸಿ , ಭೂಮಿಯ ಫಲವತ್ತತೆ ಕಡಿಮೆಯಾದಾಗ ಇನ್ನೊಂದೆಡೆ ವಲಸೆ ಹೋಗುತ್ತಿದ್ದರು. ಇವರು ಹೆಚ್ಚಾಗಿ ಜೋಳ, ಬೀನ್ಸ್ ಮತ್ತು ಕುಂಬಳವನ್ನು ಒಟ್ಟಿಗೆ ಬೆಳೆಯುತ್ತಿದ್ದರು. ಈ ರೀತಿಯ ಕೃಷಿಯನ್ನು 'ಮೂರು ಸಹೋದರಿಯರು' ( ೩ ಸಿಸ್ಟರ್ಸ್ ) ಎಂದು ಕರೆದರು. ಇವನ್ನು ತಮ್ಮ ಅಡುಗೆಯಲ್ಲಿ ಮತ್ತು ವ್ಯಾಪಾರಕ್ಕಾಗಿಯೂ ಬಳಸಿದರು. ಉತ್ತರದ ಭಾಗ ಹಿಮದಿಂದ ಕೂಡಿರುವುದರಿಂದ ಅಲ್ಲಿಯ ಮೂಲನಿವಾಸಿಗಳು ಕೇವಲ ಪ್ರಾಣಿಗಳನ್ನು ಬೇಟೆಯಾಡಿ ಜೀವನ ನಡೆಸುತ್ತಿದ್ದರು. ಪ್ರಾಣಿಗಳ ಮಾಂಸ ಸೇವಿಸಿ , ಉಳಿದ ಚರ್ಮವನ್ನು ಸ್ವಚ್ಛಗೊಳಿಸಿ ಮನೆಯ ಮೇಲೆ ಹೊದಿಸುತ್ತಿದ್ದರು . ಶೀತಗಾಳಿಯಿಂದ ರಕ್ಷಣೆ ಪಡೆಯುವ ವಿಧಾನ. ಗಂಡಸರು ಪ್ರಾಣಿಗಳ ಬೇಟೆಯಾಡಿದರೆ ಹೆಂಗಸರು ಪ್ರಾಣಿಗಳ ಚರ್ಮದಿಂದ ಉಡುಗೆ-ತೊಡುಗೆ ತಯಾರಿಸುತ್ತಿದ್ದರು. ಬೇಸಿಗೆಯಲ್ಲಿ ದಕ್ಷಿಣಕ್ಕೆ ತೆರಳಿ ಬೇಳೆ ಕಾಳುಗಳನ್ನು ಕೊಂಡು ಅಲ್ಲಿಯ ಮೂಲನಿವಾಸಿಗಳಿಗೆ ಚರ್ಮದ ಉಡುಗೆಗಳನ್ನು ಕೊಟ್ಟು ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಹೆಚ್ಚಾದ ಬೇಳೆಕಾಳುಗಳನ್ನು ನೆಲದಲ್ಲಿ ಹೂತಿಟ್ಟು ಚಳಿಗಾಲಕ್ಕಾಗಿ ಕಾಪಿಡುತ್ತಿದ್ದರು.

ತ್ರಿಕೋನಾಕಾರದ ಇವರ ಮನೆಗಳನ್ನು ' ಟೀಪೀ ' ಎಂದರೆ ಕಟ್ಟಿಗೆಯ ಮನೆಗಳನ್ನು' ಲಾಂಗ ಹೌಸ್ ' ಎನ್ನಬಹುದು. ಟೀಪಿ ಗುಡಿಸಲುಗಳು ಕಟ್ಟಿಗೆ ಮತ್ತು ಪ್ರಾಣಿಯ ಚರ್ಮದಿಂದಾದರೆ ಅವನ್ನು ಒಂದೆಡೆಯಿಂದ ಇನ್ನೊಂದೆಡೆ ಸುಲಭವಾಗಿ ಮಡಚಿ ಸಾಗಿಸುತ್ತಿದ್ದರು.. ಇವುಗಳಲ್ಲಿ ಒಂದೇ ಕುಟುಂಬ ವಾಸಿಸಿದರೆ ಲಾಂಗ್ ಹೌಸ್ಗಳಲ್ಲಿ ಹತ್ತು ಹಲವಾರು ಕುಟುಂಬಗಳು ಒಟ್ಟಿಗೆ ಜೀವಿಸುತ್ತಿದ್ದರು. ಕಾರಣ ಈ ಗುಡಿಸಲುಗಳು ಸಹಜವಾಗಿ ದೊಡ್ಡದಿರುತ್ತಿದ್ದವು. ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಗುಡಿಸಲುಗಳ ಸುತ್ತ ತಾತ್ಕಾಲಿಕ ಬೇಲಿಗಳನ್ನು ನಿರ್ಮಿಸುತ್ತಿದ್ದರು. ಪಂಗಡಗಳ ನಡುವೆ ಕ್ಲೇಶಗಳಿದ್ದರೂ ವೈಷಮ್ಯ ಇರುತ್ತಿರಲಿಲ್ಲ. ಬಿಲ್ಲು ಬಾಣಗಳು ಬಳಕೆಯಲ್ಲಿದ್ದವು. ವರ್ಷದ ನಿರ್ದಿಷ್ಟ ಸಮಯಗಳಲ್ಲಿ ಎಲ್ಲರೂ ಒಂದೆಡೆ ಸೇರಿ ಜಾನಪದ ಹಾಡು- ನೃತ್ಯ ಆಟೋಟ ಗಳನ್ನು ನಡೆಸುತ್ತಿದ್ದರು. ಅತ್ಯಂತ ಆಕರ್ಷಣೀಯ ವಿಶಿಷ್ಟ ದಿರಿಸುಗಳನ್ನು ತೊಟ್ಟು ನರ್ತಿಸುವ ಪ್ರಾಕಾರವನ್ನು 'ಪೌವ್ ವಾವ್ ' ಎನ್ನುತ್ತಾರೆ. ಚಿಕನ್ ಡ್ಯಾನ್ಸ್, ಕ್ರೊ ಹಾಪ್ ಡಾನ್ಸ್ , ರಾಬಿಟ್ ಡ್ಯಾನ್ಸ್, ಸ್ನಿಯಿಕ್ ಅಪ್ ಅಪ್ ಡಾನ್ಸ್ , ಸ್ಮೋಕ್ ಡಾನ್ಸ್ , ಹೂಪ್ ಡಾನ್ಸ್ , ಔಲ್ ಡಾನ್ಸ್ , ಫ್ರೆಂಡ್ಶಿಪ್ ಡ್ಯಾನ್ಸ್, ಲೆಕ್ಕವಿಲ್ಲದಷ್ಟು ನೃತ್ಯ ಪ್ರಾಕಾರಗಳಿವೆ. ಅದಕ್ಕೆ ತಕ್ಕ ಸಾಂಪ್ರದಾಯಿಕ ವಾದ್ಯಗಳನ್ನು ಅವರು ನುಡಿಸುತ್ತಿದ್ದರು.
ಯುರೋಪಿನ ದೇಶಗಳಲ್ಲಿ ಉಂಟಾದ ಅಸಹಕಾರ ದಂಗೆಯಾಗಲಿ, ಆಫ್ಘ್ಗನ್ನರ ದಾಳಿಯಿಂದ ತತ್ತರಿಸಿ ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿಯಲಾಗಲೀ ಅಥವಾ ಬೀವರ್ ಎಂಬ ಪ್ರಾಣಿಯ ಉಣ್ಣೆಗಾಗಿ ಆಂಗ್ಲರು, ಫ್ರೆಂಚರು ಅಮೆರಿಕದೆಡಗೆ ಯಾನ ಪ್ರಾರಂಭಿಸಿದರು. ಹೀಗೆ ಬಂದ ವಿದೇಶಿಯರು ಸ್ಥಳೀಯರೊಡನೆ ಸ್ನೇಹ ಸಂಪಾದಿಸಿ ಬೀವರ್ ಪ್ರಾಣಿಗಳನ್ನು ಬೇಟೆಯಾಡಿ ಸಹಸ್ರಾರು ಹಡಗುಗಳಲ್ಲಿ ಯುರೋಪಿಗೆ ಉಣ್ಣೆಯ ಸಾಗಾಟ ನಡೆಸಿದರು. ಇಲ್ಲಿಯ ಮೂಲನಿವಾಸಿಗಳಿಗೆ ಸಣ್ಣಪುಟ್ಟ ಯುದ್ಧದ ಪರಿಕರಗಳನ್ನು, ಮದ್ಯವನ್ನು ಪರಿಚಯಿಸಿದರು. ಹೀಗೆ ಬಂದ ವ್ಯಾಪಾರಿಗಳು ಅಲ್ಲಲ್ಲಿ ಜಾಗ ಗುರುತಿಸಿ ತಮ್ಮ ಧ್ವಜವನ್ನು ಏರಿಸಿದರು. ಉದಾಹರೆಣೆಗೆ ೧೨ ಅಕ್ಟೋಬರ್ ೧೪೯೨ರಲ್ಲಿ ಕೋಲಂಬಸ್ ಬಹಾಮಾಸ್ ದ್ವೀಪ ತಲುಪಿ ಸ್ಪೇನಿನ ಧ್ವಜ ಏರಿಸಿದ. ಲೂಕಯಾನ ಎಂಬ ಇಲ್ಲಿಯ ಮೂಲನಿವಾಸಿಗಳು ಈ ದ್ವೀಪವನ್ನು 'ಗ್ವಾನಹನಿ' ಎಂದು ಕರೆದರೆ ಸ್ಪೇನಿಗರು ಇದನ್ನು ಸಾನ್ ಸಾಲ್ವಡಾರ್ ಎಂದರು.

ಸ್ಥಳೀಯ ಮೂಲನಿವಾಸಿ ಯುವತಿಯರನ್ನು ವಿದೇಶಿಗರು ಮದುವೆಯಾದರು. ಈ ಯುವತಿಯರು ಭಾಷೆ ತರ್ಜುಮೆ ಮಾಡುವಲ್ಲಿ ಬಹುವಾಗಿ ಸಹಾಯ ಮಾಡಿದರು. ಆಂಗ್ಲರು ಮತ್ತು ಫ್ರೆಂಚರ ನಡುವೆ ವಸಾಹತುಗಳ ಒಡೆತನಕ್ಕಾಗಿ ಸತತ ಯುದ್ಧಗಳು ನಡೆದವು. ಆದರೂ ಇವರು ಮೂಲನಿವಾಸಿಗಳನ್ನು ಕ್ರಮೇಣ ಹತೋಟಿಗೆ ಪಡೆದುಕೊಂಡರು. ರೆಡ್ ಇಂಡಿಯನ್ನರು ತಮ್ಮದೇ ನಾಡಿನಲ್ಲಿ ಪರಕೀಯರಾದರು. ಕಾಲಾಂತರದಲ್ಲಿ ಬಂಡೆದ್ದ ಕೋಟಿಗಟ್ಟಲೆ ಮೂಲನಿವಾಸಿಗಳನ್ನು ಕೊಲ್ಲಲಾಯಿತು. ಮಕ್ಕಳನ್ನು ಪಾಲಕರಿಂದ ಬೇರ್ಪಡಿಸಿ ವಸತಿ ಶಾಲೆಗಟ್ಟಲಾಯಿತು. ಪವಿತ್ರತೆಯ ಸಂಕೇತವಾದ ಅವರ ತಲೆಕೂದಲನ್ನು ಇಂತಹ ಶಾಲೆಗಳಲ್ಲಿ ಕತ್ತರಿಸಲಾಯಿತು. ಮೂಲ ಹೆಸರನ್ನು ಬದಲಾಯಿಸಿ ಆ೦ಗ್ಲ ಹೆಸರುಗಳನ್ನು ಮಕ್ಕಳಿಗೆ ಹೇರಲಾಯಿತು. ಮಾತೃ ಭಾಷೆಯಲ್ಲಿ ಸಂಭಾಷಿಸುವುದನ್ನು ನಿಷೇಧಿಸಲಾಯಿತು. ಒಂದು ಶತಮಾನಕ್ಕೂ ಹೆಚ್ಚು ಕಾಲ ಇಂತಹ ವಸತಿ ಶಾಲೆಗಳು ಕಾರ್ಯನಿರ್ವಹಿಸಿದವು. ಲೆಕ್ಕವಿಲ್ಲದಷ್ಟು ಯುವತಿಯರು ಮಹಿಳೆಯರು ಕಾಣೆಯಾದರು. ಇಂತಹ ಹಲವು ಕಾರಣಗಳಿಂದ ಮೂಲನಿವಾಸಿಗಳು ಈಗಲೂ ' ಥ್ಯಾಂಕ್ಸ್ ಗಿವಿಂಗ್ ' ಎಂಬ ದಿನವನ್ನು ಆಚರಿಸಲಾರರು.

ಇ೦ದಿನ ಪ್ರಜೆಗಳು ಮತ್ತು ಸರಕಾರ ಹಿ೦ದೆ ನಡೆದ ಇ೦ತಹ ಹೇಯ ಕ್ರತ್ಯಗಳನ್ನು ಖ೦ಡಿಸುವುದರ ಜೊತೆಗೆ ಆಗಾಗ ಮೂಲನಿವಾಸಿಗಳ ಕ್ಷಮೆ ಯಾಚಿಸುತ್ತಾರೆ. ಪ್ರತಿದಿನ ಶಾಲೆಗಳಲ್ಲಿ ರಾಷ್ಟೃಗೀತೆ ಹಾಡುವ ಮುನ್ನ ಮಕ್ಕಳು ಈ ಮೂಲನಿವಾಸಿಗಳನ್ನು ನೆನಸಿಕೊಳ್ಳಬೇಕೆ೦ಬ ಕಾನೂನು ರೂಪಿಸಲಾಗಿದೆ. ಈ ವರ್ಷದಿ೦ದ ಸೆಪ್ಟೆ೦ಬರ ೩೦ನ್ನು ನಾಶನಲ್ ಡೆ ಫ಼ೊರ್ ಟ್ರುತ್ ಅನ್ದ್ ರಿಕ೦ಸಿಲೆಶನ್ ಎ೦ದು ಸರ್ಕಾರ ಗುರುತಿಸಿದೆ. ಹೀಗೆ ಕಳೆದ ಕೆಲವು ದಶಕಗಳಿಂದ ಸಾಮಾಜಿಕ ಬದಲಾವಣೆ ಆಗುತ್ತಿದೆ. ಮೂಲನಿವಾಸಿಗಳ ಹಕ್ಕಿಗಾಗಿ ಹಲವು ವ್ಯಕ್ತಿಗಳು ಸಂಘ-ಸಂಸ್ಥೆಗಳು ಸಂಯಮದಿಂದ ದುಡಿಯುತ್ತಿವೆ. ಮೂಲನಿವಾಸಿಗಳಿಗೆ ಅವರದೇ ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ವಸತಿ ಸೌಕರ್ಯ ನೀಡಲಾಗಿದೆ. ಆರ್ಥಿಕ ಸೌಲಭ್ಯ ಕೂಡ ನೀಡಲಾಗುತ್ತಿದೆ. ವಸತಿ ಶಾಲೆಗಳನ್ನು ಮುಚ್ಚಲಾಗಿದೆ.ಅವರ ಕರಕುಶಲ- ಗುಡಿ ಕೈಗಾರಿಕೆಗೆ ಪ್ರೋತ್ಸಾಹ ದೊರಕುತ್ತಿದೆ. ಮುಖ್ಯವಾಹಿನಿಯಿಂದ ಅವರ ವಸತಿ ಪ್ರದೇಶಗಳು ದೂರದಲ್ಲಿದ್ದರೂ ಸಾಮಾನ್ಯರು ಅವರನ್ನು ಭೇಟಿಯಾಗುವ- ಅವರ ಸಂಸ್ಕೃತಿಯನ್ನು ಅರಿಯುವ ಅವಕಾಶ ಕಲ್ಪಿಸಲಾಗಿದೆ. ವರ್ಷದಲ್ಲಿ ಆಗಾಗ ಅವರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಇತರರು ಇದರಲ್ಲಿ ಭಾಗಿಯಾಗಬಹುದು. ಮೂಲನಿವಾಸಿಗಳಲ್ಲಿ ' ಶಮನ್ ' ಎಂದು ಕರೆಯಲ್ಪಡುವ ಆಧ್ಯಾತ್ಮಿಕ ವ್ಯಕ್ತಿಗಳನ್ನು ಭೇಟಿಯಾಗುವ ಸದಾವಕಾಶವಿರುತ್ತದೆ. ಇವರ ಗಿಡಮೂಲಿಕೆಯ ರಹಸ್ಯ ಔಷಧಿಗಳು ಇಂದಿಗೂ ಜೀವಂತವಾಗಿವೆ. ಕೆನಡದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ' ಹೈದ ' ರೆ೦ಬ ಮೂಲನಿವಾಸಿಗಳು ಈಗಲೂ ' ಟೊಟೆಮ್ ' ಎ೦ಬ ಮರದ ಕೆತ್ತನೆಯ ಸ೦ದೇಶ ಸ್ತ೦ಭಗಳನ್ನು ಪ್ರದರ್ಶಿಸುವ ರೂಢಿಯಿಟ್ಟುಕೊ೦ಡಿದ್ದಾರೆ. ನುನಾವಟ್ ಎ೦ಬ ಉತ್ತರದ ರಾಜ್ಯದಲ್ಲಿ ನೆಲೆಸಿರುವ ಎಸ್ಕಿಮೊಗಳಾದ 'ಇನ್ಯುಟ್' ಮೂಲನಿವಾಸಿಗಳು ಇ೦ದಿಗೂ ಕಾರಿಬೂ ಎ೦ಬ ರೈಂಡೀಯರ್ ಜಿ೦ಕೆಗಳನ್ನೆ ಬೇಟೆಯಾಡಿ ಹಸಿ ಮಾ೦ಸವನ್ನು ಒಣಗಿಸಿ ತಿನ್ನುವ ಅಭ್ಯಾಸವನ್ನು ಬಿಟ್ಟಿಲ್ಲ. ಆದರೆ ನಾಯಿ ಬ೦ಡಿಗಳನ್ನು ಬಿಟ್ಟು ಹಿಮ ವಾಹನಗಳನ್ನು ಎಲ್ಲೆಡೆ ಉಪಯೋಗಿಸುತ್ತಿದ್ದಾರೆ.

ಹೀಗೆ ಇತಿಹಾಸವನ್ನು ಮರೆಯದೆ ಪ್ರಸ್ತುತ ಆಧುನಿಕ ಜೀವನಕ್ಕೆಒಗ್ಗಿ, ತಮ್ಮ ಸಂಸ್ಕೃತಿ ಸಂಪ್ರದಾಯವನ್ನು ಗೌರವಿಸಿ ಬದುಕುತ್ತಿರುವ ಈ ಮೂಲನಿವಾಸಿಗಳು ಇಂದು ಉತ್ತರ ಮತ್ತು ದಕ್ಷಿಣ ಅಮೇರಿಕದುದ್ದಕ್ಕೂ ಅಲ್ಲಲ್ಲಿ ಕಂಡುಬರುತ್ತಾರೆ. ಶತಮಾನಗಳ ನಂತರ ಅವರು ಸಹಜ ಸ್ವತಂತ್ರ ಜೀವನ ನಡೆಸುವಲ್ಲಿ ಬಹುವಾಗಿ ಯಶಸ್ವಿಯಾಗಿದ್ದಾರೆ.

- ಸಹನಾ ಹರೇಕೃಷ್ಣ , ಟೊರೊಂಟೊ , ಕೆನಡಾ
Submitted by: Sahana Harekrishna
Submitted on: Sun Apr 23 2023 01:48:11 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Tuesday 4 April 2023

The personalities within... -Sri Aurobindo (श्री अरबिंदो)

Each human being is composed of different personalities that feel and behave in a different way and his action is determined by the one that happens to be prominent at the time. The one that has no feelings against anyone is either the psychic being or the emotional being in the heart, the one that feels anger and severe is a part of the external vital nature on the surface. This anger and severity is a wrong form of something that in itself has a value, a certain strength of will and force of action and control in the vital being, without which work can not be done. What is necessary is to get rid of the anger and to keep the force and firm will along with a developed judgement as to what is right thing to do in any circumstances. For instance, people can be allowed to do things in their own way when that doesn't spoil the work, when it is only their way of doing what is necessary to be done; when their way is opposed to the discipline of the work, then they have to be controlled, but it should be done quietly and kindly, not with anger. Very often, if one has developed a silent power of putting the Mother's force on the work with one's own will as instrument, that by itself may be sufficient without having to say anything as the person changes his way of himself as if by his own initiative.
-Sri Aurobindo
Submitted by: Sri Aurobindo (श्री अरबिंदो)
Submitted on: Sun Mar 28 2023 08:05:59 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Quotes by Sri Aurobindo. Sri Aurobindo says.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]

Men...criticise... -Sri Aurobindo (श्री अरबिंदो)

Men are always more able to criticise sharply the work of others and tell them how to do things or what not to do than skilful to avoid the same mistakes themselves.
-Sri Aurobindo
Submitted by: Sri Aurobindo (श्री अरबिंदो)
Submitted on: Sun Mar 28 2023 08:05:59 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Quotes by Sri Aurobindo. Sri Aurobindo says.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]