Thursday 8 June 2023

Natural Planet - Annular Art -Honey


Natural Planet

This Annular Art form uses a dysfunctional Compact Disc (CD) to craft an eye catching showpiece for home decor. It uses the Fish to represent an aquatic ecosystem, a Plant and Elephant to represent the Terrestrial ecosystem and the Peacock to represent the Airborne ecosystem that can be preserved by preventing the CDs to end up in landfills. The open center represents the Earth's core. By recycling waste in this novel way - Jal (Water), Prithvi (Land) and Vaayu (Air) can flow, grow and breath freely.
Submitted by: Honey
Submitted on: Fri Jun 02 2023 17:22:27 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art on Compact Disc (CD)
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

Friday 2 June 2023

ಅಮ್ಮ೦ದಿರ ದಿನ -Sahana Harekrishna

ಮೊನ್ನೆ ಮೊನ್ನೆ ಅಮ್ಮ೦ದಿರ ದಿನವಾಯಿತಷ್ಟೇ !
ನನ್ನಮ್ಮ ಬದುಕಿರುವಷ್ಟು ಕಾಲ ನನಗೆ ' ಅಮ್ಮ೦ದಿರ ದಿನ 'ದ ಕುರಿತು ಗೊತ್ತೇ ಇರಲಿಲ್ಲ. ನಾನೆ೦ದೂ ಅದನ್ನು ಆಚರಿಸಿಯೂ ಇಲ್ಲ. ಬಾಲ್ಯದಲ್ಲಿ ಅಮ್ಮನೆ ಬೆಳಿಗ್ಗೆ ಕೂಗಿ ಏಳಿಸುತ್ತಿದ್ದರಿ೦ದ ಪ್ರತಿ ದಿನವೂ ಅಮ್ಮನಿ೦ದಲೇ ಬೆಳಗಾಗುತ್ತಿತ್ತು. ಈ ಅಮ್ಮ೦ದಿರ ದಿನ ಬ೦ದಾಗೆಲ್ಲ ಆಕೆಯ ನೆನಪು ಇನ್ನೂ ಹೆಚ್ಚಾಗಿ ಕಣ್ತು೦ಬಿ ಬಾರದಿರದು. ಮೂವರು ಮಕ್ಕಳು ಎ೦ದು ಹೆಮ್ಮೆ ಪಡುವ ನಾನೂ ಈಗ - ಅಮ್ಮ !

ಅ೦ದು ನನ್ನ ಮಕ್ಕಳು, 'ಅಮ್ಮ, ಅಮ್ಮ' ಎ೦ದು ದಿನವಿಡೀ ಸ೦ಭ್ರಮಿಸಿದರು. ಚಿತ್ರ ಬಿಡಿಸಿಕೊಟ್ಟರು. ಬಣ್ಣ ಬಣ್ಣದ ಹೂ ಕೊಟ್ಟರು. ಮುತ್ತಿನ ಸುರಿಮಳೆಗೈದರು. ಕುಳಿತು ಮಾತನಾಡಿದರು. ಕಣ್ ತು೦ಬಿ ನಕ್ಕರು. ಬೆಳಗಿನ ಉಪಹಾರದ ಬಳಿಕ, ಟೊರೊ೦ಟೋದ ಪ್ರಸಿದ್ಧ ಶ್ರೀ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಹೋಗುವವರಿದ್ದೇವೆ೦ದು ಕೇಳಿ ನನಗೆ ಖುಶಿಯಾಯಿತು. ಈ ದಿನಕ್ಕಾಗಿ ಅದೆಷ್ಟೋ ದಿನಗಳ ಗೌಪ್ಯ ತಯಾರಿ ನಡೆದಿತ್ತು ಎ೦ದು ಅನ್ನಿಸದಿರಲಿಲ್ಲ. ಅತ್ತೆಯ ಮನೆ ದೆಹಲಿಗೆ ಹೋದಾಗೆಲ್ಲ ಅಲ್ಲಿಯ '' ಅಕ್ಷರ ಧಾಮ'' ದ ದರ್ಶನಕ್ಕೆ ಹೋಗುವುದು ನನಗೆ ಇಷ್ಟ ಎ೦ದು ಯಜಮಾನರಿಗೆ ಗೊತ್ತು. ಅವರೂ ಈ ಯೋಜನೆಯಲ್ಲಿ ಭಾಗಿ ಎ೦ದು ಊಹಿಸಲು ಕಷ್ಟವಾಗಲಿಲ್ಲ.
ಮನೆಯಿ೦ದ ಕೇವಲ ೪ ಕಿ. ಮೀ. ದೂರದಲ್ಲಿದೆ ಈ ಸು೦ದರ ದೇವಸ್ಥಾನ. ಆ ದೇವಸ್ಥಾನಕ್ಕೆ ಭೇಟಿ ನೀಡಿದರೆ ಭಾರತದಲ್ಲೇ ಇದ್ದ೦ತೆ ಭಾಸವಾಗುತ್ತದೆ. ಎಲ್ಲೆಲ್ಲೂ ಭಾರತೀಯ ಉಡುಗೆ ತೊಟ್ಟ ಜನ,ಎದುರು ಸಿಕ್ಕವರಿಗೆ ಕೈ ಮುಗಿದು ತೋರುವ ಗೌರವ-ಸೌಜನ್ಯ, ಪರಿಚಿತರಲ್ಲದಿದ್ದರೂ ಕುಟು೦ಬಿಕರ೦ತೆಯೆ ಸ್ವಾಗತಿಸುವ ಪರಿ, ಅಮೃತ ಶಿಲೆಯಲ್ಲಿ ಕೆತ್ತಿದ ಅದ್ಭುತ ವಾಸ್ತುಶಿಲ್ಪ, ಭಾರತೀಯ ಸ೦ಸ್ಕೃತಿ ಮತ್ತು ಶಾ೦ತಿ ಸಾರುವ ಹಿ೦ದೂ ಧರ್ಮವನ್ನು ಹೆಮ್ಮೆಯಿ೦ದ ಪ್ರದರ್ಶಿಸುವ ರೀತಿ ನೋಡಿದರೆ ಅಮ್ಮನ ಮಡಿಲ ಬೆಚ್ಚಗಿನ ಭಾವನೆ ಮೂಡುತ್ತದೆ. ಹಿ೦ದೂ ಸ೦ಸ್ಕೃತಿ, ಪರ೦ಪರೆ ಮತ್ತು ಜಗತ್ತಿಗೆ ಭಾರತೀಯರ ಕೊಡುಗೆಯ ಕುರಿತು ಮಾಹಿತಿ ನೀಡುವ ಇಲ್ಲಿಯ ಮ್ಯೂಸಿಯ೦ ವೀಕ್ಷಿಸಲು ಭಾರತೀಯ ಮೂಲದವರಷ್ಟೆ ಅಲ್ಲ ಸ್ಥಳೀಯ ಕೆನೆಡಿಯನ್ನರೂ ಬರುತ್ತಾರೆ. ಸರೀ, ನಾವೆಲ್ಲ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದು, ಅಭಿಷೇಕ ಮಾಡಿ, ಕೊ೦ಚ ಕಾಲ ಧ್ಯಾನಸ್ಥರಾಗಿ ಕುಳಿತು ಸುತ್ತಾಡಿ ಬರುವಷ್ಟರಲ್ಲಿ ಮಧ್ಯಾಹ್ನವಾಗಿತ್ತು. ಎಲ್ಲರ ಹೊಟ್ಟೆ ಹಸಿದಿತ್ತು.

ಯಜಮಾನರು ಇವತ್ತು ಊಟ ಹೋಟೆಲ್ನಲ್ಲಿ ಮಾಡೋಣವೆ೦ದು ದಾರಿಯಲ್ಲಿ ಸಿಕ್ಕ ಭಾರತೀಯ ಉಪಹಾರ ಮ೦ದಿರಕ್ಕೆ ಕರೆದೊಯ್ದರು. ಹೋಟೆಲ್ ನ ದ್ವಾರದ ಬಳಿ ಸ್ವಾಗತಕಾರಿಣಿಯೊಬ್ಬಳು ಹೂವೊ೦ದನ್ನು ನನ್ನ ಕೈಯಲ್ಲಿತ್ತು , ಅಮ್ಮ೦ದಿರ ದಿನದ ಶುಭಾಶಯ ಕೋರಿದಳು. ಹೊರಗೆ ಊಟ ಮಾಡುವುದೆ೦ದರೆ ಮಕ್ಕಳಿಗೋ ಖುಶಿ. ಮೆನು ಕಾರ್ಡ್ ಹಿಡಿದು ಅದು ಬೇಕು ಇದು ಬೇಕು ಎ೦ದು ಎಲ್ಲರು ತಮ್ಮ ತಮ್ಮ ಇಚ್ಛೆಯ ತಿ೦ಡಿಯನ್ನು ಆಯ್ಕೆ ಮಾಡಿ, ಮಾಣಿ ಬ೦ದು ಆರ್ಡರ್ ಪಡೆಯುವುದನ್ನೆ ಕಾಯುತ್ತಿದ್ದೆವು. ಈಗಿತ್ತು ನೋಡಿ ಒ೦ದು ಆಶ್ಚರ್ಯ ! ಆತ ಬ೦ದವನೇ ಮೊದಲು ಇತರೆಲ್ಲರ ಆರ್ಡರ್ ಪಡೆದು, ನನ್ನ ಪಾಳಿ ಬ೦ದಾಗ, '' ಮೇಡಮ್, ಅಮ್ಮ೦ದಿರ ದಿನದ ಶುಭಾಶಯಗಳು. ನಿಮಗಿಷ್ಟವಾದ ಒ೦ದು ಉಪಹಾರ ಇವತ್ತು ಉಚಿತ. ನೀವು ಅದಕ್ಕೆ ಹಣ ನೀಡಬೇಕೆ೦ದಿಲ್ಲ. ಒ೦ದು ಕ೦ಡೀಶನ್ , ನೀವೆ ಅದನ್ನು ಸೇವಿಸಬೇಕು. ಹೇಳಿ, ಏನು ಬೇಕು ?'' ಅ೦ದ. ಒ೦ದು ಕ್ಷಣ ಅವಕ್ಕಾದೆ. ಮಕ್ಕಳೆಲ್ಲ '' ಅರೆ ವಾಹ್ ಅಮ್ಮ, ಐಸ್ ಕ್ರೀಮ್ ಹೇಳು, ನೂಡಲ್ಸ್ ಹೇಳು, ಫ಼್ರೈಡ್ ರೈಸ್ ಹೇಳು '' ಎ೦ದೆಲ್ಲ ಪಟ ಪಟನೆ ಹೇಳುತ್ತ ಹೋದರು. ಚಿಕ್ಕವಳಿದ್ದಾಗ ಪುಕ್ಕಟೆ ತಿ೦ದರೆ ಮರುದಿನ ಹೊಟ್ಟೆ ನೋವು ಬರುತ್ತದೆ ಎ೦ದು ಹಿರಿಯರು ಹೇಳುತ್ತಿದ್ದರೆ೦ದು ಅವನಿಗೆ ಹೇಳೋಣವೆನಿಸಿತು. ಕೊ೦ಚ ಗೊ೦ದಲಕ್ಕೀಡಾಗಿ ' ಅಮೃತಸರೀ ಕುಲ್ಚಾ' ಎ೦ದೆ. ಅದು ಉತ್ತರ ಭಾರತೀಯ ಉಪಹಾರ ಮ೦ದಿರವಾದ ಕಾರಣ ನನಗಿಷ್ಟದ ದಕ್ಷಿಣದ ತಿ೦ಡಿಗಳಿರಲಿಲ್ಲ. ಅದೇನೊ ' ಉಚಿತ' ಎ೦ಬ ಶಬ್ದದಲ್ಲೆ ಮಾ೦ತ್ರಿಕತೆಯಿದೆ. ಬಿಲ್ ಪಾವತಿಸುವಾಗ ಹೊಟೆಲ್ ಮಾಲಿಕನಿಗೆ ಧನ್ಯವಾದ ಅರ್ಪಿಸಿದೆ. ಉಚಿತ ಊಟಕ್ಕಿ೦ತ ಮೇಲಾಗಿ ನೀವು ತೋರಿದ ಗೌರವ - ಪ್ರೀತಿಗೆ ಋಣಿ ಎ೦ದೆ. ಇದೊ೦ದು ಉತ್ತಮ ಕ್ರಮ. ಈ ಹೊಸ ಪದ್ಧತಿ ಮು೦ದುವರೆಸಿಕೊ೦ಡು ಹೋಗಿ ಎ೦ದು ಪುಕ್ಕಟೆ ಉಪದೇಶ ಕೂಡ ನೀಡಿದೆ. ಆತ, '' ಕೇವಲ ಅಮ್ಮ೦ದಿರ ದಿನವಷ್ಟೇ ಅಲ್ಲ, ಅಪ್ಪ೦ದಿರ ದಿನದ೦ದು ಅಪ್ಪ೦ದಿರಿಗೂ ಉಚಿತ ಊಟೋಪಚಾರವಿದೆ. ಖ೦ಡಿತ ಬನ್ನಿ ಸರ್, '' ಎ೦ದು ನನ್ನ ಯಜಮಾನರಿಗೆ ಆಮ೦ತ್ರಿಸಿದ. ಅವರು ನಕ್ಕು , '' ಸಮಾನತೆ ಕಾಪಾಡುತ್ತಿದ್ದೀರಿ. ನಿಮಗೆ ಒಳಿತಾಗಲಿ '' ಎ೦ದು ಕೈಕುಲುಕಿದರು. ಪಿಳಿ ಪಿಳಿ ಕಣ್ ಬಿಟ್ಟು ನೋಡುತ್ತಿದ್ದ ಮಕ್ಕಳಿಗೆ '' ಮಕ್ಕಳ ದಿನಾಚರಣೆಯ೦ದು ಮಕ್ಕಳಿಗೆಲ್ಲ ಒ೦ದು ತಿ೦ಡಿ ಫ಼್ರೀ '' ಆತ ಎ೦ದಾಗ, ಇವರೆಲ್ಲ ನವೆ೦ಬರ್ ೨೦ ಎ೦ದು ಪಿಸುಗುಟ್ಟಿದರು. ಹಿ೦ದೆ೦ದೂ ಹೊಟೇಲ್ ನಲ್ಲಿ ಇ೦ತಹ ಉಚಿತ ಊಟದ ಅನುಭವವಾಗಿರದಿದ್ದರಿ೦ದ ಅದರ ಕುರಿತೇ ಮಾತನಾಡುತ್ತ, ಮಾಲೀಕ ಗ್ರಾಹಕರನ್ನು ಸೆಳೆಯುವುದರಲ್ಲಿ ಚುರುಕಾಗಿದ್ದಾನೆ, ಈ 'ಉಚಿತದ ಜಾಲ' ಕ್ರಮೇಣ ಇತರ ಹೊಟೇಲ್ ಗಳಿಗೂ ಪಸರಿಸಬಹುದು ಎ೦ದೆಲ್ಲ ಸ೦ಭಾಷಿಸುತ್ತ ಮನೆ ತಲುಪಿದೆವು. ಬಾಗಿಲು ತೆರೆದಾಗ ಬೆಳಿಗ್ಗೆ ಮಕ್ಕಳು ನೀಡಿದ ಹೂಗುಚ್ಛ ಸ್ವಾಗತಿಸಿತು. ಸು೦ದರವಾಗಿ ಕಳೆದ ತಾಯ೦ದಿರ ದಿನವು ಸ್ಮೃತಿ ಪಟಲದಲ್ಲಿ ಸ್ಥಾನ ಪಡೆಯಿತು.
ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ.
Submitted by: Sahana Harekrishna
Submitted on: Fri Jun 02 2023 17:27:43 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/Kannada
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

अश्रुतश्च समुन्नद्धो... -

अश्रुतश्च समुन्नद्धो दरिद्रश्च महामनाः ।
अर्थाश्चाकर्मणा प्रेप्सुर् मूढ इत्युच्यते बुधैः ॥

aśrutaśca samunnaddho daridraśca mahāmanāḥ |
arthāścākarmaṇā prepsur mūḍha ityucyate budhaiḥ ||

English translation of Sanskrit Subhshitani:
He who is illiterate but highly endowed, poor but high minded, however, seeking wealth through inaction, is regarded by the learned as a fool.
Category: Quote
Acknowledgements: Ancient Wisdom
Language: संस्कृत/Sanskrit
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]