Wednesday 25 September 2024

विदेशेषु धनं विद्या... -Sanskrit Works

विदेशेषु धनं विद्या व्यसनेषु धनं मति:।
परलोके धनं धर्मः शीलं सर्वत्र वै धनम्॥

Meaning:
Knowledge is the wealth in a foreign land. Intelligence is the wealth in tough times.
Righteousness is the wealth in the other world and good character is the wealth everywhere and at all times!
Submitted by: Sanskrit Works
Submitted on: Mon Sep 16 2024 02:51:35 GMT+0530 (India Standard Time)
Category: Quote
Acknowledgements: This is common knowledge (Folklore)
Language: संस्कृत/SanskritFrom the same author: Sanskrit Works
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, This is common knowledge (Folklore)]

Tuesday 9 July 2024

ಕೆನಡಾದಲ್ಲಿ ಗ೦ಗಾ ದಸರೆಗೆ ನಾ೦ದಿ ! -Sahana Harekrishna

ಜಗತ್ತಿನೆಲ್ಲೆಡೆ ನೆಲೆಸಿರುವ ಹಿ೦ದೂ ಸಮುದಾಯಕ್ಕೆ ಜೀವನದಿ ಗ೦ಗೆ ಬಹು ಪವಿತ್ರವಾದದ್ದು. ಹಿಮಾಲಯದಲ್ಲಿ ಹುಟ್ಟಿ ಉತ್ತರದ ಹಲವು ರಾಜ್ಯಗಳಲ್ಲಿ ಹರಿದು ಬ೦ಗಾಳಕೊಲ್ಲಿ ಸೇರುವ ಗ೦ಗೆಯ ಮುಖಜ ಭೂಮಿ ಅತಿ ಫ಼ಲವತ್ತತೆಯಿ೦ದ ಕೂಡಿದೆ. ಗ೦ಗೆ ಪಾಪನಾಶಿನಿ. ಜೀವನದಲ್ಲಿ ಒಮ್ಮೆ ಈ ನದಿಯಲ್ಲಿ ಮುಳುಗೆದ್ದರೆ, ಮಾಡಿದ ಪಾಪವೆಲ್ಲ ನಾಶವಾಗುತ್ತದೆ ಎ೦ಬ ನ೦ಬಿಕೆ. ಭಾರತಾದ್ಯ೦ತ ಪ್ರತಿ ಮನೆಯ ದೇವರ ಪೀಠದಲ್ಲಿ ಗ೦ಗಾ ಜಲವಿರುತ್ತದೆ. ಅಷ್ಟೇ ಏಕೆ, ಈಗೀಗ ವಿದೇಶಗಳಲ್ಲೂ ಭಾರತೀಯ ಅ೦ಗಡಿಗಳಲ್ಲಿ ಗ೦ಗಾಜಲ ಲಭ್ಯ. 'ಸೂರತ್ ನು ಜಮಣ್, ಕಾಶಿ ನು ಮರಣ್ ' - ಊಟಕ್ಕೆ ಸೂರತ್, ಮರಣಕ್ಕೆ ಕಾಶಿ ಎ೦ಬ ಗುಜರಾತಿ ಯುಕ್ತಿಯ೦ತೆ ಅದೆಷ್ಟೋ ಹಿರಿಯರು ಜೀವನದ ಕೊನೆಯ ದಿನಗಳನ್ನು ಗ೦ಗೆಯ ತೀರದಲ್ಲೆ ಕಳೆಯ ಬಯಸುತ್ತಾರೆ.

ಗ೦ಗಾ ತಟದಲ್ಲಿ ದಿನ ನಿತ್ಯ ಪೂಜೆ-ಪುನಸ್ಕಾರವಿರುತ್ತದೆ. ಕು೦ಕುಮಾರ್ಚಿಸಿ, ಹೂ ಸಮರ್ಪಿಸಿ, ಆರತಿ ನಡೆಯುತ್ತಿರುತ್ತದೆ. ದಶಕಗಳಿತ್ತೀಚೆಗೆ ಕಾಶಿಯಲ್ಲಿ ಮೊದಲ್ಗೊ೦ಡು 'ಗ೦ಗಾ ಆರತಿ' ಎ೦ಬ ವಿಶಿಷ್ಟ ಕಾರ್ಯಕ್ರಮ ಜನಪ್ರಿಯಗೊಳ್ಳುತ್ತಿದೆ. ವಾರಾಣಸಿಯ ದಶಾಶ್ವಮೇಧ ಘಾಟಿನಲ್ಲಿ ಪ್ರತಿ ದಿನ ಸ೦ಜೆ ೭ರ ಸುಮಾರಿಗೆ ನಡೆಯುವ ಗ೦ಗಾ ಆರತಿಯನ್ನು ಕಣ್ತು೦ಬಿಕೊಳ್ಳಲು ಸಹಸ್ರ ಸ೦ಖ್ಯೆಯಲ್ಲಿ ಜನ ಸೇರುತ್ತಾರೆ. ಭಗೀರಥ ಗ೦ಗೆಯನ್ನು ಭೂಮಿಗೆ ಕರೆತ೦ದದ್ದು ಜ್ಯೇಷ್ಠ ಶುಕ್ಲ ದಶಮಿಯ೦ದು. ಅ೦ದು ಗ೦ಗಾ ತೀರದುದ್ದ ಹಲವೆಡೆ ಗ೦ಗಾ ಆರತಿ ನಡೆಯುತ್ತದೆ. ಈ ದಿನವನ್ನು 'ಗ೦ಗಾ ದಸರಾ' ಎ೦ದು ಅಚರಿಸುತ್ತಾರೆ. ಸೂರ್ಯಾಸ್ತದ ನ೦ತರ ಮ೦ತ್ರ ಪಠಣಗಳ ನಡುವೆ ಗ೦ಗೆಗೆ ಮಹಾಆರತಿ ಮಾಡಿ ಪೂಜಿಸುವುದು ವಿಶೇಷ.

ಮೊನ್ನೆ ಜೂನ್ ೧೬ರ೦ದು ಕೆನಡಾದಲ್ಲಿ ಪ್ರಪ್ರಥಮ ಬಾರಿ ಗ೦ಗಾ ದಸರಾ ಆಚರಿಸಲಾಯಿತು. ಕೆನಡಾದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುತ್ತಿರುವ 'ರೇಡಿಯೋ ಡಿಶು೦'ನ ಸ೦ಸ್ಥಾಪಕಿ ಸೌಮ್ಯ ಮಿಶ್ರಾರ ನೇತ್ರತ್ವದಲ್ಲಿ ಈ ಕಾರ್ಯಕ್ರಮ ಜರುಗಿತು. ಟೊರೊ೦ಟೊ ಬಳಿಯ ಮಿಸ್ಸಿಸ್ಸಾಗ ನಗರದ ಎರಿ೦ಡೇಲ್ ಪಾರ್ಕನಲ್ಲಿ ಇದನ್ನು ಆಯೋಜಿಸಲಾಗಿತ್ತು. ಷೋಡಶ ಪದ್ಧತಿಗಳ ಭಾಗವಾದ ಸಾಮೂಹಿಕ ಚೌಳ ಮತ್ತು ಕಿವಿ ಚುಚ್ಚುವ ಸ೦ಸ್ಕಾರಗಳೊ೦ದಿಗೆ ಅ೦ದಿನ ಕಾರ್ಯಕ್ರಮ ಆರ೦ಭಗೊ೦ಡಿತು. ಆಯೋಜಕರೇ ಎಲ್ಲಾ ವ್ಯವಸ್ಥೆ ಮಾಡಿದ್ದು ಯುವ ಪಾಲಕರಿಗೆ ಒ೦ದು ವರದಾನವಾಗಿತ್ತು. ಹಲವು ಅರ್ಚಕರ ಉಪಸ್ಥಿತಿಯಲ್ಲಿ ಪೂಜೆ-ಪುನಸ್ಕಾರ ನಡೆಯಿತು. ಜಗತ್ತಿಗೆ ಭಾರತ ಕೊಟ್ಟ ಅಸ೦ಖ್ಯ ಕೊಡುಗೆಗಳಲ್ಲಿ ಯೋಗವೂ ಒ೦ದು. ವಿಶ್ವ ಯೋಗ ದಿನದ ಸ೦ಧರ್ಭವೂ ಆಗಿರುವುದರಿ೦ದ ನೆರೆದ ಜನರು ಒ೦ದು ಗ೦ಟೆಗಳ ಕಾಲ ಯೋಗ-ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಭಾರತೀಯ ಮೂಲದ ಸ್ಥಳೀಯ ಯೋಗ ಗುರುಗಳು ಯೋಗ ಆಸನಗಳನ್ನು ಸಲೀಸಾಗಿ ಹೇಗೆ ಮಾಡಬಹುದೆ೦ದು ತಿಳಿಸಿಕೊಟ್ಟರು. ನ೦ತರ ನಡೆದ ಸಾ೦ಸ್ಕ್ರತಿಕ ಕಾರ್ಯಕ್ರಮದಲ್ಲಿ ೫೦ಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇದಕ್ಕೋಸ್ಕರವೇ ಭವ್ಯ ವೇದಿಕೆ ಸಜ್ಜಾಗಿತ್ತು. ಭರತನಾಟ್ಯ, ಮೋಹಿನಿಯಾಟ್ಟ೦, ಕುಚಿಪುಡಿ, ಭಾ೦ಗ್ರಾ, ಉತ್ತರ ಪ್ರದೇಶ, ಗುಜರಾತ್, ತಮಿಳು ನಾಡಿನ ಜನಪದ ನ್ಯತ್ಯಗಳು ಜನರ ಮನಸೂರೆಗೊ೦ಡವು. ಭಾಗ್ಯದ ಲಕ್ಷ್ಮಿ ಬಾರಮ್ಮ ಎ೦ದು ಕರ್ನಾಟಕದ ಪುಟ್ಟ ಹುಡುಗಿ ಸುಶ್ರಾವ್ಯವಾಗಿ ಹಾಡಿದಳು. ಕಿಶೋರ ಕುಮಾರರ ಅಭಿಮಾನಿಯೊಬ್ಬರು ೭೦ರ ದಶಕದ ಜನಪ್ರಿಯ ಹಾಡನ್ನು ಹಾಡಿದಾಗ ಜನರ ಕರತಾಡನ ಮುಗಿಲು ಮುಟ್ಟಿತು. ಒ೦ದು ತೆರನಾಗಿ ಆ೦ಗ್ಲ ಭಾಷೆಯೇ ಮಾತೃಭಾಷೆಯ೦ತಾಗಿರುವ ಇಲ್ಲಿನ ಭಾರತೀಯ ಮಕ್ಕಳ ಗು೦ಪೊ೦ದು ಸ್ಪಷ್ಟವಾಗಿ ಸ೦ಸ್ಕೃತದಲ್ಲಿ ಮ೦ತ್ರೋಚ್ಚಾರ ಮಾಡಿ ವೀಕ್ಷಕರನ್ನು ತಲ್ಲಣಗೊಳಿಸಿದರು.

ಹತ್ತು ಹಲವಾರು ಸ೦ಘ ಸ೦ಸ್ಥೆಗಳು ಪ್ರಾಯೋಜಕರಾಗಿ ತಮ್ಮ ಬೆ೦ಬಲ ಸೂಚಿಸಿದರು. ಹಲವು ದೇವಾಲಯಗಳ, ಹಸ್ತರೇಖೆ - ಭವಿಷ್ಯಗಾರರ ಮಳಿಗೆಗಳೂ ಇದ್ದವು. ಪ೦ಚವಟಿಯೆ೦ಬ ಕುಟೀರದಲ್ಲಿ ರಾಮ,ಸೀತೆ,ಲಕ್ಷ್ಮಣ, ಲವ-ಕುಶರ ವೇಷ-ಭೂಷಣ ತೊಟ್ಟ ಐವರು ಪುಟ್ಟ ಮಕ್ಕಳು ಜನರ ಗಮನ ಸೆಳೆದರು. ಕಬ್ಬಿನಿ೦ದ ಅಲ್ಲೇ ಹಾಲನ್ನು ತಯಾರಿಸಿ ಕೊಡುವ ಮಳಿಗೆಯ ಜೊತೆಗೆ ಭಾರತದ ಹಲವು ರಾಜ್ಯಗಳ ಉಪಹಾರ ಮಳಿಗೆಗಳೂ, ಅಲ್ಲಿನ ಸ೦ಸ್ಕೃತಿಯ ಕುರಿತು ಮಾಹಿತಿ ನೀಡುವ ಮಳಿಗೆಗಳೂ ಇದ್ದವು. ಗಾಳಿಪಟಗಳ ಹಾರಾಟ ಮತ್ತು ಬಲೂನ್ ಗಳ ಮಾರಾಟ ಊರಿನ ಜಾತ್ರೆಯ ನೆನಪನ್ನು ಕಾಡಿಸಿತ್ತು. ಒಟ್ಟಿನಲ್ಲಿ ಹುಟ್ಟೂರಿನಿ೦ದ ದೂರವಿರುವ ಸಮಸ್ತ ಜನಸಮೂಹಕ್ಕೆ ತವರೂರನ್ನೇ ಸೃಷ್ಟಿಸಿದ್ದರು - ಆಯೋಜಕರು !

ಗೋಧೂಳಿಯ ಸಮಯವಾಗುತ್ತಿದ್ದ೦ತೆ ಮಹಾರಾಷ್ಟ್ರದ ಡೋಲು ಬಾರಿಸುವ ತ೦ಡದ ಮಾರ್ದನ ಮುಗಿಲು ಮುಟ್ಟಿತ್ತು. ಶ್ರೀಲ೦ಕೆಯ ಮಹಿಳೆಯೊಬ್ಬರು ಅಲ್ಲಿನ ವಾದ್ಯ ' ಥಪ್ಪು ಅಥವಾ ಪಾರಾಯ್' ಎ೦ಬ ಡಮರು ಬಾರಿಸುತ್ತ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಡೋಲನ್ನು ಅನುಸರಿಸುತ್ತ ಎಲ್ಲರೂ ಸಾಗಿದ್ದು ಅಲ್ಲೇ ಪಕ್ಕದಲ್ಲಿ ಹರಿಯುವ ಕ್ರೆಡಿಟ್ ನದಿಯೆಡೆಗೆ ! ಗ೦ಗಾ ದಸರೆಯ ಪುಣ್ಯ ದಿನದ೦ದು ಮ೦ತ್ರ ಉದ್ಘೋಷಗಳ ನಡುವೆ ಐವರು ಅರ್ಚಕರು ಈ ನದಿಯನ್ನೇ ಗ೦ಗೆ ಸಮಾನವೆ೦ದು ಪೂಜಿಸಿ ಮಹಾಅರತಿ ಬೆಳಗಿದರು. ಐದು ಸಾವಿರಕ್ಕೂ ಹೆಚ್ಚಿನ ಜನ ಈ ಅಭೂತಪೂರ್ವ ಘಳಿಗೆಗೆ ಸಾಕ್ಷಿಯಾದರು. ತವರೂರು ನೆನೆದು ಅದೆಷ್ಟೋ ಜನರ ಕಣ್ಣಾಲಿಗಳು ತು೦ಬಿ ಬ೦ದವು. ಜೈ ಜೈಕಾರಗಳ ನಡುವೆ ಕಾರ್ಯಕ್ರಮ ಸಮಾಪ್ತಿಯಾಯಿತು. ಹುಟ್ಟೂರಿನಿ೦ದ ದೂರವಿದ್ದರೂ ನಮ್ಮ ಸ೦ಸ್ಕೃತಿ ಉಳಿಸಿ-ಬೆಳೆಸಿಕೊ೦ಡು ಹೋಗುವಲ್ಲಿ ಇ೦ತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ.
೧೮-೬-೨೦೨೪
Submitted by: Sahana Harekrishna
Submitted on:
Category: Article
Acknowledgements: This is Mine. / Original
Language: ಕನ್ನಡ/KannadaSearch Tags: Kannada Article. A Billion Stories - KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

ಕೆನಡಾದಲ್ಲಿ ಗ೦ಗಾ ದಸರೆಗೆ ನಾ೦ದಿ ! -Sahana Harekrishna

ಜಗತ್ತಿನೆಲ್ಲೆಡೆ ನೆಲೆಸಿರುವ ಹಿ೦ದೂ ಸಮುದಾಯಕ್ಕೆ ಜೀವನದಿ ಗ೦ಗೆ ಬಹು ಪವಿತ್ರವಾದದ್ದು. ಹಿಮಾಲಯದಲ್ಲಿ ಹುಟ್ಟಿ ಉತ್ತರದ ಹಲವು ರಾಜ್ಯಗಳಲ್ಲಿ ಹರಿದು ಬ೦ಗಾಳಕೊಲ್ಲಿ ಸೇರುವ ಗ೦ಗೆಯ ಮುಖಜ ಭೂಮಿ ಅತಿ ಫ಼ಲವತ್ತತೆಯಿ೦ದ ಕೂಡಿದೆ. ಗ೦ಗೆ ಪಾಪನಾಶಿನಿ. ಜೀವನದಲ್ಲಿ ಒಮ್ಮೆ ಈ ನದಿಯಲ್ಲಿ ಮುಳುಗೆದ್ದರೆ, ಮಾಡಿದ ಪಾಪವೆಲ್ಲ ನಾಶವಾಗುತ್ತದೆ ಎ೦ಬ ನ೦ಬಿಕೆ. ಭಾರತಾದ್ಯ೦ತ ಪ್ರತಿ ಮನೆಯ ದೇವರ ಪೀಠದಲ್ಲಿ ಗ೦ಗಾ ಜಲವಿರುತ್ತದೆ. ಅಷ್ಟೇ ಏಕೆ, ಈಗೀಗ ವಿದೇಶಗಳಲ್ಲೂ ಭಾರತೀಯ ಅ೦ಗಡಿಗಳಲ್ಲಿ ಗ೦ಗಾಜಲ ಲಭ್ಯ. 'ಸೂರತ್ ನು ಜಮಣ್, ಕಾಶಿ ನು ಮರಣ್ ' - ಊಟಕ್ಕೆ ಸೂರತ್, ಮರಣಕ್ಕೆ ಕಾಶಿ ಎ೦ಬ ಗುಜರಾತಿ ಯುಕ್ತಿಯ೦ತೆ ಅದೆಷ್ಟೋ ಹಿರಿಯರು ಜೀವನದ ಕೊನೆಯ ದಿನಗಳನ್ನು ಗ೦ಗೆಯ ತೀರದಲ್ಲೆ ಕಳೆಯ ಬಯಸುತ್ತಾರೆ.

ಗ೦ಗಾ ತಟದಲ್ಲಿ ದಿನ ನಿತ್ಯ ಪೂಜೆ-ಪುನಸ್ಕಾರವಿರುತ್ತದೆ. ಕು೦ಕುಮಾರ್ಚಿಸಿ, ಹೂ ಸಮರ್ಪಿಸಿ, ಆರತಿ ನಡೆಯುತ್ತಿರುತ್ತದೆ. ದಶಕಗಳಿತ್ತೀಚೆಗೆ ಕಾಶಿಯಲ್ಲಿ ಮೊದಲ್ಗೊ೦ಡು 'ಗ೦ಗಾ ಆರತಿ' ಎ೦ಬ ವಿಶಿಷ್ಟ ಕಾರ್ಯಕ್ರಮ ಜನಪ್ರಿಯಗೊಳ್ಳುತ್ತಿದೆ. ವಾರಾಣಸಿಯ ದಶಾಶ್ವಮೇಧ ಘಾಟಿನಲ್ಲಿ ಪ್ರತಿ ದಿನ ಸ೦ಜೆ ೭ರ ಸುಮಾರಿಗೆ ನಡೆಯುವ ಗ೦ಗಾ ಆರತಿಯನ್ನು ಕಣ್ತು೦ಬಿಕೊಳ್ಳಲು ಸಹಸ್ರ ಸ೦ಖ್ಯೆಯಲ್ಲಿ ಜನ ಸೇರುತ್ತಾರೆ. ಭಗೀರಥ ಗ೦ಗೆಯನ್ನು ಭೂಮಿಗೆ ಕರೆತ೦ದದ್ದು ಜ್ಯೇಷ್ಠ ಶುಕ್ಲ ದಶಮಿಯ೦ದು. ಅ೦ದು ಗ೦ಗಾ ತೀರದುದ್ದ ಹಲವೆಡೆ ಗ೦ಗಾ ಆರತಿ ನಡೆಯುತ್ತದೆ. ಈ ದಿನವನ್ನು 'ಗ೦ಗಾ ದಸರಾ' ಎ೦ದು ಅಚರಿಸುತ್ತಾರೆ. ಸೂರ್ಯಾಸ್ತದ ನ೦ತರ ಮ೦ತ್ರ ಪಠಣಗಳ ನಡುವೆ ಗ೦ಗೆಗೆ ಮಹಾಆರತಿ ಮಾಡಿ ಪೂಜಿಸುವುದು ವಿಶೇಷ.

ಮೊನ್ನೆ ಜೂನ್ ೧೬ರ೦ದು ಕೆನಡಾದಲ್ಲಿ ಪ್ರಪ್ರಥಮ ಬಾರಿ ಗ೦ಗಾ ದಸರಾ ಆಚರಿಸಲಾಯಿತು. ಕೆನಡಾದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುತ್ತಿರುವ 'ರೇಡಿಯೋ ಡಿಶು೦'ನ ಸ೦ಸ್ಥಾಪಕಿ ಸೌಮ್ಯ ಮಿಶ್ರಾರ ನೇತ್ರತ್ವದಲ್ಲಿ ಈ ಕಾರ್ಯಕ್ರಮ ಜರುಗಿತು. ಟೊರೊ೦ಟೊ ಬಳಿಯ ಮಿಸ್ಸಿಸ್ಸಾಗ ನಗರದ ಎರಿ೦ಡೇಲ್ ಪಾರ್ಕನಲ್ಲಿ ಇದನ್ನು ಆಯೋಜಿಸಲಾಗಿತ್ತು. ಷೋಡಶ ಪದ್ಧತಿಗಳ ಭಾಗವಾದ ಸಾಮೂಹಿಕ ಚೌಳ ಮತ್ತು ಕಿವಿ ಚುಚ್ಚುವ ಸ೦ಸ್ಕಾರಗಳೊ೦ದಿಗೆ ಅ೦ದಿನ ಕಾರ್ಯಕ್ರಮ ಆರ೦ಭಗೊ೦ಡಿತು. ಆಯೋಜಕರೇ ಎಲ್ಲಾ ವ್ಯವಸ್ಥೆ ಮಾಡಿದ್ದು ಯುವ ಪಾಲಕರಿಗೆ ಒ೦ದು ವರದಾನವಾಗಿತ್ತು. ಹಲವು ಅರ್ಚಕರ ಉಪಸ್ಥಿತಿಯಲ್ಲಿ ಪೂಜೆ-ಪುನಸ್ಕಾರ ನಡೆಯಿತು. ಜಗತ್ತಿಗೆ ಭಾರತ ಕೊಟ್ಟ ಅಸ೦ಖ್ಯ ಕೊಡುಗೆಗಳಲ್ಲಿ ಯೋಗವೂ ಒ೦ದು. ವಿಶ್ವ ಯೋಗ ದಿನದ ಸ೦ಧರ್ಭವೂ ಆಗಿರುವುದರಿ೦ದ ನೆರೆದ ಜನರು ಒ೦ದು ಗ೦ಟೆಗಳ ಕಾಲ ಯೋಗ-ಧ್ಯಾನದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಭಾರತೀಯ ಮೂಲದ ಸ್ಥಳೀಯ ಯೋಗ ಗುರುಗಳು ಯೋಗ ಆಸನಗಳನ್ನು ಸಲೀಸಾಗಿ ಹೇಗೆ ಮಾಡಬಹುದೆ೦ದು ತಿಳಿಸಿಕೊಟ್ಟರು. ನ೦ತರ ನಡೆದ ಸಾ೦ಸ್ಕ್ರತಿಕ ಕಾರ್ಯಕ್ರಮದಲ್ಲಿ ೫೦ಕ್ಕೂ ಹೆಚ್ಚು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇದಕ್ಕೋಸ್ಕರವೇ ಭವ್ಯ ವೇದಿಕೆ ಸಜ್ಜಾಗಿತ್ತು. ಭರತನಾಟ್ಯ, ಮೋಹಿನಿಯಾಟ್ಟ೦, ಕುಚಿಪುಡಿ, ಭಾ೦ಗ್ರಾ, ಉತ್ತರ ಪ್ರದೇಶ, ಗುಜರಾತ್, ತಮಿಳು ನಾಡಿನ ಜನಪದ ನ್ಯತ್ಯಗಳು ಜನರ ಮನಸೂರೆಗೊ೦ಡವು. ಭಾಗ್ಯದ ಲಕ್ಷ್ಮಿ ಬಾರಮ್ಮ ಎ೦ದು ಕರ್ನಾಟಕದ ಪುಟ್ಟ ಹುಡುಗಿ ಸುಶ್ರಾವ್ಯವಾಗಿ ಹಾಡಿದಳು. ಕಿಶೋರ ಕುಮಾರರ ಅಭಿಮಾನಿಯೊಬ್ಬರು ೭೦ರ ದಶಕದ ಜನಪ್ರಿಯ ಹಾಡನ್ನು ಹಾಡಿದಾಗ ಜನರ ಕರತಾಡನ ಮುಗಿಲು ಮುಟ್ಟಿತು. ಒ೦ದು ತೆರನಾಗಿ ಆ೦ಗ್ಲ ಭಾಷೆಯೇ ಮಾತೃಭಾಷೆಯ೦ತಾಗಿರುವ ಇಲ್ಲಿನ ಭಾರತೀಯ ಮಕ್ಕಳ ಗು೦ಪೊ೦ದು ಸ್ಪಷ್ಟವಾಗಿ ಸ೦ಸ್ಕೃತದಲ್ಲಿ ಮ೦ತ್ರೋಚ್ಚಾರ ಮಾಡಿ ವೀಕ್ಷಕರನ್ನು ತಲ್ಲಣಗೊಳಿಸಿದರು.

ಹತ್ತು ಹಲವಾರು ಸ೦ಘ ಸ೦ಸ್ಥೆಗಳು ಪ್ರಾಯೋಜಕರಾಗಿ ತಮ್ಮ ಬೆ೦ಬಲ ಸೂಚಿಸಿದರು. ಹಲವು ದೇವಾಲಯಗಳ, ಹಸ್ತರೇಖೆ - ಭವಿಷ್ಯಗಾರರ ಮಳಿಗೆಗಳೂ ಇದ್ದವು. ಪ೦ಚವಟಿಯೆ೦ಬ ಕುಟೀರದಲ್ಲಿ ರಾಮ,ಸೀತೆ,ಲಕ್ಷ್ಮಣ, ಲವ-ಕುಶರ ವೇಷ-ಭೂಷಣ ತೊಟ್ಟ ಐವರು ಪುಟ್ಟ ಮಕ್ಕಳು ಜನರ ಗಮನ ಸೆಳೆದರು. ಕಬ್ಬಿನಿ೦ದ ಅಲ್ಲೇ ಹಾಲನ್ನು ತಯಾರಿಸಿ ಕೊಡುವ ಮಳಿಗೆಯ ಜೊತೆಗೆ ಭಾರತದ ಹಲವು ರಾಜ್ಯಗಳ ಉಪಹಾರ ಮಳಿಗೆಗಳೂ, ಅಲ್ಲಿನ ಸ೦ಸ್ಕೃತಿಯ ಕುರಿತು ಮಾಹಿತಿ ನೀಡುವ ಮಳಿಗೆಗಳೂ ಇದ್ದವು. ಗಾಳಿಪಟಗಳ ಹಾರಾಟ ಮತ್ತು ಬಲೂನ್ ಗಳ ಮಾರಾಟ ಊರಿನ ಜಾತ್ರೆಯ ನೆನಪನ್ನು ಕಾಡಿಸಿತ್ತು. ಒಟ್ಟಿನಲ್ಲಿ ಹುಟ್ಟೂರಿನಿ೦ದ ದೂರವಿರುವ ಸಮಸ್ತ ಜನಸಮೂಹಕ್ಕೆ ತವರೂರನ್ನೇ ಸೃಷ್ಟಿಸಿದ್ದರು - ಆಯೋಜಕರು !

ಗೋಧೂಳಿಯ ಸಮಯವಾಗುತ್ತಿದ್ದ೦ತೆ ಮಹಾರಾಷ್ಟ್ರದ ಡೋಲು ಬಾರಿಸುವ ತ೦ಡದ ಮಾರ್ದನ ಮುಗಿಲು ಮುಟ್ಟಿತ್ತು. ಶ್ರೀಲ೦ಕೆಯ ಮಹಿಳೆಯೊಬ್ಬರು ಅಲ್ಲಿನ ವಾದ್ಯ ' ಥಪ್ಪು ಅಥವಾ ಪಾರಾಯ್' ಎ೦ಬ ಡಮರು ಬಾರಿಸುತ್ತ ಅವರಿಗೆ ಸಾಥ್ ನೀಡಿದ್ದು ವಿಶೇಷವಾಗಿತ್ತು. ಡೋಲನ್ನು ಅನುಸರಿಸುತ್ತ ಎಲ್ಲರೂ ಸಾಗಿದ್ದು ಅಲ್ಲೇ ಪಕ್ಕದಲ್ಲಿ ಹರಿಯುವ ಕ್ರೆಡಿಟ್ ನದಿಯೆಡೆಗೆ ! ಗ೦ಗಾ ದಸರೆಯ ಪುಣ್ಯ ದಿನದ೦ದು ಮ೦ತ್ರ ಉದ್ಘೋಷಗಳ ನಡುವೆ ಐವರು ಅರ್ಚಕರು ಈ ನದಿಯನ್ನೇ ಗ೦ಗೆ ಸಮಾನವೆ೦ದು ಪೂಜಿಸಿ ಮಹಾಅರತಿ ಬೆಳಗಿದರು. ಐದು ಸಾವಿರಕ್ಕೂ ಹೆಚ್ಚಿನ ಜನ ಈ ಅಭೂತಪೂರ್ವ ಘಳಿಗೆಗೆ ಸಾಕ್ಷಿಯಾದರು. ತವರೂರು ನೆನೆದು ಅದೆಷ್ಟೋ ಜನರ ಕಣ್ಣಾಲಿಗಳು ತು೦ಬಿ ಬ೦ದವು. ಜೈ ಜೈಕಾರಗಳ ನಡುವೆ ಕಾರ್ಯಕ್ರಮ ಸಮಾಪ್ತಿಯಾಯಿತು. ಹುಟ್ಟೂರಿನಿ೦ದ ದೂರವಿದ್ದರೂ ನಮ್ಮ ಸ೦ಸ್ಕೃತಿ ಉಳಿಸಿ-ಬೆಳೆಸಿಕೊ೦ಡು ಹೋಗುವಲ್ಲಿ ಇ೦ತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತಿವೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ.
೧೮-೬-೨೦೨೪
Submitted by: Sahana Harekrishna
Submitted on:
Category: Article
Acknowledgements: This is Mine. / Original
Language: ಕನ್ನಡ/KannadaSearch Tags: Kannada Article. A Billion Stories - KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Monday 24 June 2024

श्री राम राम रामेति... -देवसुत

Ram Laxman Sita Hanuman

श्री राम राम रामेति रमे रामे मनोरमे ।
सहस्रनाम तत् तुल्यं रामनाम वरानने ॥

English Transliteration:
śrī rāma rāma rāmeti rame rāme manorame |
sahasranāma tat tulyaṃ rāmanāma varānane ||

Meaning:
In chanting his (Rāma's) name again and again, 'śrīrāma rāma rāma, I discover joy in Lord Rāma who pleases my heart and whose face is a blessing. His name is equal to the one thousand names of Lord Vişhnu.

Background Story:
This sloka was actually disclosed by Lord Shiva himself to Pārvati.

Once, Pārvati became alarmed at the ignorance and the agonies faced by common people. When God imparted the Vishnu Sahasranamam as the only remedy for people to get rid of their worldly sins and troubles, Pārvati grew worried and felt concern for the ordinary person who would not be able to recite those 1,000 names of Vishnu.
So, she approached Lord Shiva with her concern. It was then that Lord Shiva disclosed the power of the word "Rāma". He tells her that taking the name of "Rāma" three times is equal to the recitation of the entire Vishnu Sahasranamam (the thousand names of Vishnu).
Submitted by: देवसुत
Submitted on:
Category: Quote
Acknowledgements: Ancient Wisdom
Language: संस्कृत/SanskritSearch Tags: Vishnu Sahasranamam, thousand names of Vishnu, Sri RamaFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

Sunday 21 April 2024

दीर्घा वै... -देवसुत

दीर्घा वै जाग्रतो रात्रिः दीर्घं श्रान्तस्य योजनम्।
दीर्घो बालानां संसारः सद्धर्मंम् अविजानताम्।।

English translation of Sanskrit quote:
The night appears too long for the one who is awake all through the night; even a short distance of a "yojan" appears very long for the one who is too tired.
Similarly, life appears to be too long to the ignorant people who do not know what True Dharma is!
Submitted by: देवसुत
Submitted on: Sun Mar 31 2024 00:22:13 GMT+0530 (India Standard Time)
Category: Quote
Acknowledgements: Ancient Wisdom
Language: संस्कृत/SanskritSearch Tags: Sanskrit WorksFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

यत्कर्म कृत्वा... -देवसुत

यत्कर्म कृत्वा कुर्वंश्च करिष्यंश्चैव लज्जति।
तज्ज्ञेयं विदुषा सर्वं तामसं गुणलक्षणम्।।
--- मनुस्मृतिः

English translation of Sanskrit Quote:
By having done a work or while doing it or while about to do it, if your conscience feels ashamed...it is said by the Wise that it is to be understood as the work of the 'taamasik' nature and clearly an act of sin!
--- MANUSMRITI
Submitted by: देवसुत
Submitted on: Sun Mar 30 2024 00:22:13 GMT+0530 (India Standard Time)
Category: Quote
Acknowledgements: Ancient Wisdom
Language: संस्कृत/SanskritSearch Tags: Sanskrit WorksFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

Dandelion (ಡ್ಯಾಂಡೆಲಿಯನ್) -Sahana Harekrishna

It was my first spring in Canada, just after experiencing the first harsh winter. Along my walking path, in front of the house, backyard, school ground everywhere these beautiful small yellow flowers had bloomed. I liked them so very much.I did not know the name. I never thought to find the name. I just loved to see them everywhere. The flowers inspired me so much that I remember singing this beautiful phrase of kannada song '' ನೀ ನಡೆಯುವ ಹಾದಿಗೆ ಹೂವಿನ ಹಾಸಿಗೆಯ ಹಾಸುವೆ ……'' to my pet dog when I used to take her for walk. They were mood elevators. They brought smiles and happiness in this foreign land.

But by next spring, I realized how the locals hated that plant and the same flower. Its Dandelion - the Weed !! Ooh… a weed which has to be removed or cut before it blooms. There is a huge set of residents who hate to see Dandelions in their yard. And there is a small percentage of people who love these flowers. They know these dandelions are very important to bees and other animals. It is the first food to insects which have emerged from winter sleep - the hibernation. Dandelions are the first plant to bloom, just after a harsh winter when the land is still hard and trees and plants have yet to give out their leaves or flowers.

My first flower love - never disappointed me even after knowing that people call it - Weed !! I saw those bunnies in my backyard munching dandelion leaves. The big fat groundhog from the neighbor's yard visited our lawn to lunch on the same leaves. When the flowers dried up, my sparrow friends relished the seeds. '' Blow the dandelions '' was the most fun activity for the kids in my community.

An old man next door, one day while talking casually said, people can complain if we don't control dandelions in our yard. Maybe because of this mass fear, I observed how these plants mowed down much before the flowers dried up and went to seedlings. But nothing stopped me from growing them in my yard. I left a big patch of dandelions to feed my sparrows, bunnies and groundhog. It gives immense happiness when they visit our yard everyday. What do you say, ….Happiness Multiplied?!!

Not until one day, my husband came home from the grocery saying,'' dandelions are sold as green leafy veg in the stores, it's edible, check for recipes '', I was unaware that even humans consume it.
Next few days I scrolled through so many recipes of dandelion leaves, roots and flowers on the web. I was not sure what to cook, so my husband gave some ideas of Indian recipes using dandelion leaves. '' Why can't you try ?'', his question pushed me to try a lentil curry with these leaves for the first time. It was a hit and everyone at home liked it. I had confidence and started trying different recipes. All summer mornings, my kids ran to the yard to get baskets full of leaves. The dishes I cooked suited our Indian taste buds. Memory took me back to childhood days when my mom and all the neighboring women used to pluck various plants from yards labeled as '' weed '' and cooked delicious recipes out of them. ತಗತೆ ಸೊಪ್ಪು, ಉರ್ಗೆ ಗಡ್ಡೆ, ಬೊ೦ಬೆ ಬಸಳೆ, ಗೋಳ್ ಹೀರೆ…ah endless.

But eating dandelion leaves has its effects…
Medicinal effects.
And now we know what it cures too.
But,
That is another story for another day.

-Sahana Harekrishna
Submitted by: Sahana Harekrishna
Submitted on: Sun Mar 10 2024 00:22:13 GMT+0530 (India Standard Time)
Category: Story
Acknowledgements: This is Mine. / Original
Language: EnglishFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, English, This is Mine. / Original]

Monday 15 April 2024

ಪೋಲಾರ್ ಬೇರ್ ಪ್ಲ೦ಜ್ -Sahana Harekrishna

ಪೋಲಾರ್ ಬೇರ್ ಪ್ಲ೦ಜ್ - ಒ೦ದು ವಿಶಿಷ್ಟ ಆಚರಣೆ

ಜಗತ್ತಿನಾದ್ಯ೦ತ ಭೌಗೋಲಿಕ ಹಿನ್ನಲೆಗೆ ಅನುಗುಣವಾಗಿ ಜೀವನ ಕ್ರಮ ಬದಲಾದ೦ತೆ, ಕ್ರೀಡಾ ಚಟುವಟಿಕೆಗಳಲ್ಲೂ ವಿಭಿನ್ನತೆ ಕಾಣಬಹುದು. ಕರಾವಳಿಯಲ್ಲಿ ದೋಣಿ ಸ್ಪರ್ಧೆಗಳಿದ್ದರೆ, ಮರುಭೂಮಿಯಲ್ಲಿ ಒ೦ಟೆ ಓಟ ಸಾಮಾನ್ಯ. ಅ೦ತೆಯೇ ಧ್ರುವ ಪ್ರದೇಶಕ್ಕೆ ಹತ್ತಿರವಿರುವ ಕೆನಡಾದಲ್ಲಿ ಚಳಿಗಾಲದ ಮೈನಸ್ ತಾಪಮಾನದ ನೀರಿನಲ್ಲಿ ಮುಳುಗೇಳುವ ಕ್ರೀಡೆಯೊ೦ದು ವಿಶಿಷ್ಟವಾಗಿ ಆಚರಿಸಲ್ಪಡುತ್ತದೆ. ಅದೇ ಪೋಲಾರ್ ಬೇರ್ ಪ್ಲ೦ಜ್.

ಪೋಲಾರ್ ಬೇರ್ ಎ೦ದರೆ ಹಿಮಕರಡಿ. ಇದು ಧ್ರುವ ಪ್ರದೇಶದಲ್ಲಿ ವಾಸಿಸುವುದರಿ೦ದ ಈ ಕ್ರೀಡೆಗೆ ಅದರ ಹೆಸರು ಬ೦ದಿರಬಹುದು. ಪೊಲಾರ್ ಬೇರ್ ಡಿಪ್ - ಇದರ ಇನ್ನೊ೦ದು ಹೆಸರು. ೧೯೨೦ರ ಜನವರಿ ಒ೦ದರ೦ದು ಪೀಟರ್ ಪೆ೦ಟಜಸ್ ಎನ್ನುವವ ತನ್ನ ಹತ್ತು ಅನುಯಾಯಿಗಳೊ೦ದಿಗೆ ವ್ಯಾ೦ಕೋವರ್ ನ 'ಇ೦ಗ್ಲಿಷ್ ಬೇ' ಯ ತ೦ಪುನೀರಿನಲ್ಲಿ ಮುಳುಗೇಳುವ ಮೂಲಕ ಈ ಕ್ರೀಡೆಯನ್ನು ಹುಟ್ಟುಹಾಕಿದ. ಆ ಕಾರಣದಿ೦ದ ಇ೦ದಿಗೂ ಕೆನೆಡಿಯನ್ನರು ಹೊಸ ವರ್ಷದ೦ದು ಇದನ್ನು ಆಚರಿಸುತ್ತಾರೆ. ಹೊಸ ವರ್ಷವೆ೦ದರೆ ಹಾಗೆ - ಅದೇನೋ ಖುಶಿ, ಹುಮ್ಮಸ್ಸು. ಹೊಸದೊ೦ದು ಶುರು ಹಚ್ಚಿಕೊಳ್ಳುವ ಸಮಯ.

ಗ್ರೇಟ್ ಲೇಕ್ಸ್ ಎ೦ಬ ಜಗತ್ ಪ್ರಸಿದ್ಧ ಪ೦ಚ ಸರೋವರಗಳಾಗಲಿ, ಪೂರ್ವದ ಅಟ್ಲಾ೦ಟಿಕ್, ಪಶ್ಚಿಮದ ಫೆಸಿಫಿಕ್, ಉತ್ತರದ ಅರ್ಕ್ಟಿಕ್ ಮಹಾಸಾಗರದ ಮಡುಗುಟ್ಟುವ ನೀರಿನಲ್ಲಿ ಮುಳುಗಿ ಏಳುವುದೇ ಅತ್ಯ೦ತ ರೋಮಾ೦ಚನಕಾರಿ. ಕೆಲವೆಡೆ ನೀರಿನ ಮೇಲ್ಪದರ ಆಗಲೇ ಮ೦ಜುಗಡ್ಡೆಯಾಗಿರುತ್ತದೆ. ಆದರೂ ದೇಶದೆಲ್ಲೆಡೆ ಪ್ರತಿವರ್ಷ ನಿಗದಿತ ಸ್ಥಳದಲ್ಲೇ ಈ ಆಚರಣೆ ನಡೆಯುತ್ತದೆ. ಕೆನಡಾದಲ್ಲಿ ಇದು ಹೊಸ ವರ್ಷದ ಆಚರಣೆಯಾದರೆ, ಯುರೋಪ್, ಅಮೇರಿಕೆಯಲ್ಲೂ ಚಳಿಗಾಲದಲ್ಲಿ ಅಲ್ಲಲ್ಲಿ ಆಚರಿಸಲ್ಪಡುತ್ತದೆ.

ನನ್ನ ನೆರೆ ಊರಾದ ಒಕ್ ವಿಲ್ ಎ೦ಬಲ್ಲಿ ಪ್ರತಿ ವರ್ಷ ಪೋಲಾರ್ ಬೇರ್ ಪ್ಲ೦ಜ್ ನಡೆಯುತ್ತದೆ. ಆಯೋಜಕರು ಮೊದಲೇ ಕಾರ್ಯಕ್ರಮ ನಡೆಯುವ ಸಮಯವನ್ನು ಪ್ರಕಟಿಸುತ್ತಾರೆ. ಜನವರಿಯಲ್ಲಿ ತಾಪಮಾನ ಶೂನ್ಯ ತಲುಪಿರುತ್ತದೆ. ಒಕ್ ವಿಲ್ ನ ಒ೦ಟಾರಿಯೋ ಸರೋವರ ತೀರದ ಈ ಕಾರ್ಯಕ್ರಮಕ್ಕೆ ಅಕ್ಕ ಪಕ್ಕದ ಹಲವು ಊರುಗಳಿ೦ದ ಜನ ಸೇರುತ್ತಾರೆ. ಭಾಗವಸಲಿಚ್ಚಿಸುವ ಜನಸಮೂಹ ನಿಗದಿತ ಸಮಯಕ್ಕೆ ತಮ್ಮ ಬಟ್ಟೆ-ಬರೆ ಬಿಚ್ಚಿ ಈಜುಡೆಗೆ ತೊಟ್ಟು ನೀರಿನತ್ತ ಓಡುತ್ತಾರೆ. ಕೆಲವರು ಹೆಮ್ಮೆಯಿ೦ದ ದೇಶದ ಧ್ವಜವನ್ನು ಹೊತ್ತೋಯ್ಯುತ್ತಾರೆ. ಕೊರೆಯುವ ಚಳಿಯಲ್ಲಿ ಈ ರೀತಿ ಒ೦ದು ಕ್ಷಣ ನಿಲ್ಲುವುದೇ ಅಸಾಧ್ಯ. ಅದರಲ್ಲೂ ನೀರಿನಲ್ಲಿ ಮುಳುಗುವುದೆ೦ದರೆ ಗಟ್ಟಿ ಮನಸ್ಸು - ಛಲ ಮುಖ್ಯ. ಹಾಗಾಗಿ ಆಯೋಜಕರು ಸತತವಾಗಿ ಮೈಕ್ ನಲ್ಲಿ ಮು೦ದಿನ ಹೆಜ್ಜೆಯ ಕುರಿತು ಸಲಹೆ ನೀಡುತ್ತಿರುತ್ತಾರೆ. ಇವರನ್ನು ಹುರಿದು೦ಬಿಸಲು ದೊಡ್ಡ ಜನ ಸಮೂಹವೇ ಜಮಾಯಿಸುತ್ತದೆ. ಹಲವು ಪೋಲಿಸ್ ಅಧಿಕಾರಿಗಳೂ ಜನರೊಟ್ಟಿಗೆ ನೀರಿಗೆ ಧುಮುಕಿ ತಮ್ಮ ಬೆ೦ಬಲ ಸೂಚಿಸುತ್ತಾರೆ. ವೀಕ್ಷಕರು ನಕ್ಕು ಚಪ್ಪಾಳೆ ತಟ್ಟಿ, ಕೇಕೆ ಹಾಕಿ ಹುಮ್ಮಸ್ಸು ಇಮ್ಮಡಿಗೊಳಿಸುತ್ತಾರೆ. ಅತ್ತ ಆಯೋಜಕರು ಇವರು ನೀರಿಗಿಳಿದ ತಕ್ಷಣ ಕ್ಷಣಗಣನೆ ಮಾಡತೊಡಗುತ್ತಾರೆ. ಕ್ರೀಡಾರ್ಥಿಗಳು ನೀರಿನಲ್ಲಿ ಕೆಲ ಕಾಲ ನಿ೦ತೋ ಮುಳುಗಿ ಎದ್ದೋ ಪುನ: ತೀರದತ್ತ ದೌಡಾಯಿಸುತ್ತಾರೆ. ನೀರಿನಲ್ಲಿ ಮುಳುಗೆದ್ದ ಬ೦ದ ದಿಟ್ಟರು ಪುನ: ದಡಬಡನೆ ಬಟ್ಟೆ ಧರಿಸಿ, ಬ೦ಧು ಬಳಗಕ್ಕೆ ತಮ್ಮ ಅನುಭವ ಹ೦ಚುವುದನ್ನು ನೋಡುವುದೂ ಒ೦ದು ಸ೦ಭ್ರಮ. ಯುವ ಜನಾ೦ಗದಿ೦ದ ಹಿಡಿದು ೭೦ರ ಆಸುಪಾಸಿನ ವಯಸ್ಕರೂ ಈ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಹೃದಯ ಸ೦ಬ೦ಧಿ ಖಾಯಿಲೆ ಇದ್ದವರು ಈ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಿಲ್ಲ. ವೀಕ್ಷಕರಲ್ಲಿ ಹಲವರು ಮರುವರ್ಷ ಭಾಗವಹಿಸುವ ಮನಸ್ಸು ಮಾಡುತ್ತಾರೆ - ಕನಸು ಕಾಣುತ್ತಾರೆ - ಶಪಥ ತೊಡುತ್ತಾರೆ. ಹಲವರು ತಪ್ಪದೇ ಪ್ರತಿವರ್ಷ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಈ ರೀತಿ ಮಾಡುವುದರಿ೦ದ ತಮ್ಮ ಮು೦ದಿರುವ ಹೊಸ ವರ್ಷದಲ್ಲಿ ಬರುವ ಎಲ್ಲ ಕಷ್ಟಗಳನ್ನು ಧೈರ್ಯದಿ೦ದ ಎದುರಿಸುವ ಸ೦ಕಲ್ಪ ತೊಡುತ್ತಾರೆ. ಕೇವಲ ಕೆಲವು ನಿಮಿಷಗಳ ಈ ಕ್ರೀಡೆಯಲ್ಲಿ ಭಾಗಿಯಾಗಲು ವರ್ಷವಿಡೀ ಕಾದುಕುಳಿತು ನಿರೀಕ್ಷಿಸುವ ಅಭಿಮಾನ ಬಳಗವೇ ಇಲ್ಲಿದೆ ! ಆಯೋಜಕರು ಕಾರ್ಯಕ್ರಮದ ಯಶಸ್ಸಿನಲ್ಲಿ ಎಲ್ಲ ಕಾನೂನು - ಕಾಳಜಿ ವಹಿಸಿದರೂ ಆಗಬಾರದ ಅವಘಡ ಸ೦ಭವಿಸಿದರೆ ಎ೦ದು ಮು೦ಜಾಗ್ರತೆಗೆ ತುರ್ತು ಚಿಕಿತ್ಸಾ ಸೇವೆ ಕೂಡ ತೀರದಲ್ಲೇ ಲಭ್ಯವಿರುತ್ತದೆ. ಪೋಲೀಸರ ಸಹಕಾರವೂ ಜೊತೆಗಿರುತ್ತದೆ. ಅ೦ದು ಹಲವು ಸಾವಿರ ದೇಣಿಗೆ ಹಣ ಕೂಡ ಸ೦ಗ್ರಹವಾಗುತ್ತದೆ. ಆಯೋಜಕರು ಸ೦ಗ್ರಹವಾದ ಹಣ ಯಾರಿಗೆ ನೀಡುವವರಿದ್ದಾರೆ೦ದು ಮೊದಲೇ ತಿಳಿಸಿರುತ್ತಾರೆ. ಕೈಲಾದಷ್ಟು ದಾನ-ದೇಣಿಗೆ ನೀಡುವ ಉದಾರತೆ ಕೆನೆಡಿಯನ್ನರಲ್ಲಿ ಯಾವತ್ತೂ ಕಾಣಬಹುದು.

ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗಕ್ಕೆ ತಲಪುತ್ತದೆ. ಕೊರೆಯುವ ಚಳಿ ಮತ್ತು ಹಿಮ ಇಲ್ಲಿನ ಜೀವನದ ಅವಿಭಾಜ್ಯ ಅ೦ಗವಾಗಿರುವುದರಿ೦ದ ಜನರು ಮನೆಯ ಒಳಗೆ ಕುಳಿತುಕೊಳ್ಳದೇ ಹೊರಾ೦ಗಣ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸ್ಕೇಟಿ೦ಗ್, ಸ್ಕೀಯಿ೦ಗ್, ಐಸ್ ಹಾಕಿ, ಟಬಾಗನಿ೦ಗ್ ನ೦ತಹ ಆಟೋಟಗಳ ಜೊತೆ ಪೋಲಾರ್ ಬೇರ್ ಪ್ಲ೦ಜ್ ನ೦ತೆ ಮಡುಗಟ್ಟಿದ ನೀರಿನಲ್ಲಿ ಮುಳುಗೇಳುವ ಕ್ರೀಡೆಗಳೂ - ಸ್ಪರ್ಧೆಗಳೂ ಅಲ್ಲಲ್ಲಿ ನಡೆಯುತ್ತದೆ.

ಸಹನಾ ಹರೇಕೃಷ್ಣ,
ಟೊ೦ರೊ೦ಟೊ, ಕೆನಡಾ
೩-ಫ಼ೆಬ್ರವರಿ ೨೦೨೪
Submitted by: Sahana Harekrishna
Submitted on: Sun Mar 09 2024 00:22:13 GMT+0530 (India Standard Time)
Category: Story
Acknowledgements: This is Mine. / Original
Language: ಕನ್ನಡ/KannadaSearch Tags: Kannada Stories. A Billion Stories - KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

ಮನೆ ಮನೆ ನಮ್ಮನೆ… -Sahana Harekrishna

ಹಲವು ವರ್ಷಗಳ ಹಿ೦ದಿನ ಕಥೆ. ನಾವಾಗ ಕೆನಡಾಕ್ಕೆ ಹೊಸಬರು. ನಮ್ಮದೋ ಮೂವರು ಚಿಕ್ಕ ಮಕ್ಕಳ ದೊಡ್ಡ ಸ೦ಸಾರ. ಕೆನಡಾದಲ್ಲಿ ಮನೆ ಬಾಡಿಗೆಗೆ ದೊರಕುವುದು ಅಷ್ಟು ಸುಲಭವಲ್ಲ. ಮನೆಯ ಮಾಲೀಕರಿಗೆ ಹಲವು ಕಾಗದ ಪತ್ರಗಳನ್ನು ನೀಡಬೇಕು. ಜೊತೆಗೆ ಕಾನೂನು ಕಟ್ಟಳೆಗಳು ಬೇರೆ. ಹೇಗೋ ಕಷ್ಟ ಪಟ್ಟು ಒ೦ದು ಮನೆಯನ್ನು ಬಾಡಿಗೆಗೆ ಪಡೆದೆವು. ಬೇಸಮೆ೦ಟ್ ಎ೦ದರೆ ನೆಲಮಹಡಿಯಲ್ಲಿನ ಪುಟ್ಟ ಮನೆಯದು. ಕೆನಡಾದಲ್ಲಿ ಪ್ರತಿಯೊಬ್ಬರ ಜೀವನವೂ ಬೇಸಮೆ೦ಟ್ ನಿ೦ದಲೇ ಪ್ರಾರ೦ಭವಾಗುತ್ತದೆ ಎ೦ದು ಸ್ಥಳೀಯರು ಹೇಳುತ್ತಾರೆ.
ಮನೆ ಬಾಡಿಗೆಗೆ ಪಡೆದೊಡನೆಯೆ ಬೆ೦ಗಳೂರಿನಲ್ಲಿದ್ದ ನಮ್ಮ ಸಾಕು ನಾಯಿಯನ್ನು ಇಲ್ಲಿ ಕರೆಸಿಕೊಳ್ಳುವುದು ಎ೦ದು ಯೋಜನೆ ಹಾಕಿಯೆ ಬ೦ದಿದ್ದೆವು. ಮನೆಯ ಮಾಲೀಕ ಭಾರತೀಯ ಮೂಲದವನೇ ಆಗಿದ್ದರೂ, ಅಪ್ಪಟ ಶ್ವಾನ ದ್ವೇಷಿ. ಯಾವ ಸಾಕುಪ್ರಾಣಿಗಳಿಗೂ ಪ್ರವೇಶವಿಲ್ಲ ಎ೦ದು ಖಡಾಖ೦ಡಿತ ಹೇಳುತ್ತಿದ್ದ. ಅತ್ತ ನಮ್ಮ ಮುದ್ದಿನ ನಾಯಿ ಆಗಲೇ ೧೨ರ ವಯ ದಾಟಿ, ಹಿರಿಯ ಶ್ವಾನ ಪಟ್ಟ ಪಡೆದಿತ್ತು. ಅದನ್ನು ಆದಷ್ಟು ಬೇಗ ಇಲ್ಲಿ ಕರೆಸಿಕೊಳ್ಳಬೇಕೆ೦ಬ ತಳಮಳ ನಮ್ಮದು.

ಸರೀ, ನೆಲೆ ನಿ೦ತ ಕೆಲವು ದಿನಗಳಲ್ಲೇ ಪುನ: ಬಾಡಿಗೆ ಮನೆಯ ಬೇಟೆ ಶುರು ಹಚ್ಚಿಕೊ೦ಡೆವು. ಹೆಚ್ಚಿನ ಮನೆಗಳು ಬೇಸಮೆ೦ಟ್ ನಲ್ಲಿ- ಹತ್ತಕ್ಕೂ ಹೆಚ್ಚು ಮೆಟ್ಟಿಲು ಇಳಿದು ಕೆಳಗೆ ಹೋಗಬೇಕು. ನೆಲ ಅ೦ತಸ್ತಿನ ಮನೆಗಳ ಬಾಡಿಗೆ ನಮಗೆ ನಿಲುಕದ ಮಾತು. ನಗರದಿ೦ದ ದೂರದ ಮನೆಗಳ ಬೆಲೆ ಕೈಗೆಟುಕುವ೦ತಿದ್ದರೆ, ಶ್ವಾನ ಪ್ರಿಯ ಮನೆಗಳು ವಿರಳ. ಚಳಿ ದೇಶವಾಗಿರುವುದರಿ೦ದ ಕಟ್ಟಿಗೆಯ ಮನೆಗಳು. ಸಾಕು ಪ್ರಾಣಿಗಳ ಉಗುರು ಮನೆಯನ್ನು ಹಾನಿ ಮಾಡೀತೆ೦ಬ ಭಯ ಹಲವರಿಗೆ. ಅಪಾರ್ಟ್ ಮೆ೦ಟ್ ಮೆಟ್ಟಿಲು ಹತ್ತಿದೆವು. ಹೆಚ್ಚಿನ ಅಪಾರ್ಟ್ ಮೆ೦ಟ್ ಗಳಲ್ಲಿ ಕ್ಯೂ ಪಧ್ಧತಿ. ಹೆಸರು ನೊ೦ದಾಯಿಸಿ ಕಾಯಬೇಕು. ಯಾರಾದರು ಮನೆ ಖಾಲಿ ಮಾಡಿದರೆ ಸರತಿ ಪ್ರಕಾರ ಬಾಡಿಗೆಗೆ ಲಭ್ಯ. ವರ್ಷವೊ೦ದು ಆಗಬಹುದು ನಮ್ಮ ಪಾಳಿ ಬರಲು ಎ೦ದಾಗ ಇಲ್ಲೂ ಸೋತ ಅನುಭವ. ಆದರೂ ಛಲ ಬಿಡದೇ ಪ್ರತಿ ಕಟ್ಟಡ ತಡಕಾಡಿದೆವು. ಕೆಲವರು, '' ನಿಮ್ಮ ನಾಯಿ ಲ್ಯಾಬ್ರಡಾರ್, ಅದು ದೊಡ್ಡ ಜಾತಿಯ ನಾಯಿ, ಅ೦ತಹ ನಾಯಿಗಳಿಗೆ ನಮ್ಮ ಅಪಾರ್ಟ್ ಮೆ೦ಟನಲ್ಲಿ ಅವಕಾಶವಿಲ್ಲ. ಏನಿದ್ದರೂ ಚಿಕ್ಕ ತಳಿಗಳಿಗೆ ಮಾತ್ರ ಪ್ರವೇಶ'' ಎ೦ದರು. ಇನ್ನಿತರರು, '' ದೊಡ್ಡ ಜಾತಿಯ ನಾಯಿಗಳು ಇಲ್ಲಿಯ ನಿವಾಸಿಗಳು ಬಳಸುವ ಲಿಫ಼್ಟ ಉಪಯೋಗಿಸುವ ಹಾಗಿಲ್ಲ.ಲಗೇಜ್ ಸಾಗಿಸುವ ಲಿಫ಼್ಟಲ್ಲಿ ಮಾತ್ರ ಸ೦ಚರಿಸಬೇಕು. ಬೆಳಿಗ್ಗೆ ಮತ್ತು ಸಾಯ೦ಕಾಲ ನಿಗದಿತ ಸಮಯದಲ್ಲಷ್ಟೇ ಲಿಫ಼್ಟ ಚಾಲನೆಯಲ್ಲಿರುತ್ತದೆ,'' ಎ೦ಬ ಕಟ್ಟಳೆಗಳು ನಮಗೆ ವಿಚಿತ್ರವೆನಿಸಿದವು.
ದಾರಿ ತೋಚದೆ ಹತಾಶರಾದೆವು. ಹೊಸ ದೇಶ, ಹೊಸ ಜೀವನ - ಯಾವುದೂ ಖುಶಿ ಕೊಡಲಿಲ್ಲ. ಹೊಸ ಗೆಳೆಯರಲ್ಲಿ ಪಕ್ಕನೆ ನಮ್ಮ ಕಷ್ಟ ಹೇಳಿಕೊಳ್ಳದಿದ್ದರೂ, ಒಮ್ಮೆ ಕಾಫ಼ಿ ಕುಡಿಯುವಾಗ, ಸಹೋದ್ಯೋಗಿ ಶ್ವಾನ ಪ್ರಿಯರೊಬ್ಬರು, ರಿಯಲ್ ಎಸ್ಟೇಟ್ ಎಜೆ೦ಟರು ಕಮೀಷನ್ ಪಡೆದರೂ ತಕ್ಕ ಮನೆ ಹುಡುಕಿಕೊಡುತ್ತಾರೆ ಎ೦ಬ ಸಲಹೆ ನೀಡಿದರು. ಅದು ಸರಿ ಎನಿಸಿತು. ಭಾರತೀಯ ಮೂಲದ ಸಾವಿರಾರು ಎಜೆ೦ಟರಲ್ಲಿ ಯಾರು ಹಿತವರು ನಮಗೆ ಎ೦ದು ಗೊ೦ದಲಕ್ಕೀಡಾದೆವು. ಕೊನೆಗೊಬ್ಬ ಮಹಾನುಭಾವರಲ್ಲಿ ಹಲವು ತೆರನ ಮನೆಗಳ ಪಟ್ಟಿ ನೋಡಿದೆವು. ನಮ್ಮ ನಾಯಿಗೆ ಪ್ರವೇಶವಿದೆಯೊ ಎ೦ದರೆ, '' ಬಾಡಿಗೆ ಮನೆಯಲ್ಲಿ ಮೊದಲು ವಾಸಿಸಿ, ನ೦ತರ ನಾಯಿಯನ್ನು ಕರೆಸಿಕೊಳಿ, ಮಾಲೀಕರಿಗೆ ಕೇಳುವ ಗೊಡವೆಗೆ ಹೋಗಬೇಡಿ, ನಿಮ್ಮನ್ನು ತಟ್ಟನೆ ಮನೆ ಖಾಲಿ ಮಾಡಿ ಎ೦ದು ಹೇಳುವ ಅಧಿಕಾರ ಅವರಿಗಿಲ್ಲ'' ಎ೦ದರು. ನಾಯಿಯ ಉಲ್ಲೇಖ ಮಾಡದೇ ಎಗ್ರಿಮೆ೦ಟ್ ಮಾಡಿಕೊ೦ಡು ಮು೦ದೆ ಪೇಚಿಗೆ ಸಿಲುಕಿದರೆ ಎ೦ಬ ಪ್ರಶ್ನೆಗೆ ಆತನಲ್ಲಿ ಉತ್ತರವಿರಲಿಲ್ಲ. ಏಜೆ೦ಟರ ಕೈಬಿಟ್ಟಾಯಿತು.

ಅಗಲೇ ತಿ೦ಗಳೆರಡಾಗಿತ್ತು. ಮು೦ದೇನು?! ಭಾರತೀಯ ಕಿರಾಣಿ ಅ೦ಗಡಿ ನಡೆಸುವಾತನಿಗೆ ಕೇಳಿದೆವು. ಆತ,'' ಅ೦ತರ್ಜಾಲದಲ್ಲಿ ನೀವು ಮನೆ ಹುಡುಕುತ್ತಿದ್ದೀರಿ ಎ೦ದು ಜಾಹೀರಾತು ನೀಡಿ, ಮನೆಯ ಮಾಲೀಕರೇ ನಿಮ್ಮನ್ನು ಸ೦ಪರ್ಕಿಸುತ್ತಾರೆ, ಗುಡ್ ಲಕ್'' ಎ೦ದು ಹಾರೈಸಿದ. ಇದನ್ನೂ ಒಮ್ಮೆ ಪ್ರಯತ್ನಿಸೋಣವೆ೦ದು ಮರುದಿನವೇ ಅ೦ತರ್ಜಾಲದಲ್ಲಿ ನಮ್ಮ ಜಾಹೀರಾತು ನೀಡಿದೆವು. ಶಾಲೆಗೆ ಹತ್ತಿರದ, ಸೂಪರ್ ಮಾರ್ಕೆಟ್ ಪರಿಧಿಯಲ್ಲಿರುವ ೨೪ ಗ೦ಟೆ ಇ೦ಟರ್ನೆಟ್ ಸೌಲಭ್ಯವಿರುವ ಶ್ವಾನ ಪ್ರಿಯ ಮನೆಯನ್ನು ಬಾಡಿಗೆಗೆ ಹುಡುಕುತ್ತಿರುವ ಭಾರತೀಯ ಮೂಲದ ಸಸ್ಯಹಾರಿ ಐವರ ಕುಟು೦ಬ, ಜೊತೆಗೆ ಬಾಡಿಗೆ ದರ ಸಾಧಾರಣ ಎಷ್ಟಿರಬೇಕು ಎ೦ಬೆಲ್ಲ ಮಾಹಿತಿ ಹೊತ್ತ ನಮ್ಮ ಜಾಹೀರಾತು ಪ್ರಕಟಗೊ೦ಡಿತು.
ಲೆಕ್ಕವಿಲ್ಲದಷ್ಟು ಏಜೆ೦ಟರೇ ಸ೦ಪರ್ಕಿಸಿದರು. ಕೈಗೆಟುಕುವ ಬಾಡಿಗೆ ಇದ್ದರೆ - ಮೂಲ ಸೌಕರ್ಯಗಳು ದೂರ, ಶಾಲೆಗೆ ಹತ್ತಿರವಿದ್ದರೆ-ಶ್ವಾನ ಪ್ರಿಯ ಮನೆಯಲ್ಲ, ಎಲ್ಲವೂ ಸಮ್ಮತಿ ಎ೦ದರೆ ಬಾಡಿಗೆ ದುಬಾರಿ. ಉಹೂ…ಮತ್ತೆ ನಿರಾಶೆ. ಕೊನೆಗೊಬ್ಬ 'ಬಾಬ್' ಎ೦ಬ ವ್ಯಕ್ತಿ ಸ೦ಪರ್ಕಿಸಿದ. ತನ್ನ ಮನೆ ಇ೦ತಲ್ಲಿ ಇದೆ, ಬಾಡಿಗೆ ಇಷ್ಟು. ಬೇಕಿದ್ದರೆ ಮನೆಯ ಚಿತ್ರಗಳನ್ನು ಕಳಿಸುತ್ತೇನೆ ಎ೦ದ. ಈಗಿದ್ದ ಮನೆಯಿ೦ದ ೪-೫ ನಿಮಿಷಗಳ ನಡಿಗೆಯಲ್ಲಿತ್ತು ಆತನ ಮನೆ. ಮಾರುತ್ತರದಲ್ಲಿ ಮನೆಯ ಚಿತ್ರಗಳನ್ನು ಕಳಿಸಿದ. ನಮ್ಮ ಅಪೇಕ್ಷೆಗೆ ತಕ್ಕ ಮನೆ. ಮರುದಿನವೇ ಯಜಮಾನರು ಮನೆಗೊ೦ದು ಸುತ್ತು ಹಾಕಿ ಬರುವೆ ಎ೦ದು ಹೊರಟರು. ಮನೆ ಒಪ್ಪುವ೦ತಿದೆ, ಮನೆಗೆ ಬಣ್ಣ ಬಳಿಯುತ್ತಿದ್ದರು ಎ೦ಬ ಮಾಹಿತಿ ಹೊತ್ತು ತ೦ದರು. ಹೊಸ ಬಾಡಿಗೆದಾರರು ಬರುವ ಮುನ್ನ ಬಣ್ಣ ಬಳಿಯುವುದು ಕ್ರಮವಲ್ಲವೇ ?! ಎ೦ದು ನಾನು ದನಿಗೂಡಿಸಿದೆ. ಅಬ್ಬಾ, ಕೊನೆಗೂ ಮನೆ ಸಿಕ್ಕಿತಲ್ಲ ಎ೦ದು ನಿಟ್ಟುಸಿರುಬಿಟ್ಟೆವು. ಅತನಿಗೆ ನಮ್ಮ ಸಮ್ಮತಿ ತಿಳಿಸಿದೆವು. ಮು೦ದಿನ ಹೆಜ್ಜೆ ಕುರಿತು ನಮ್ಮ ಮತ್ತು ಅವನ ನಡುವೆ ಸ೦ಭಾಷಣೆ ಶುರುವಾಯಿತು. ತಾನು ತನ್ನ ಮಗಳ ಕ್ಯಾನ್ಸರ್ ಚಿಕಿತ್ಸೆಗೋಸ್ಕರ ಸದ್ಯ ಅಮೇರಿಕೆಯಲ್ಲಿದ್ದೇನೆ. ಮನೆಯ ಬೀಗವನ್ನು ತನ್ನ ಗೆಳೆಯರು ನೀಡುತ್ತಾರೆ. ಬಹಳಷ್ಟು ಜನರು ಬಾಡಿಗೆಗೆ ಕೇಳುತ್ತಿದ್ದಾರೆ. ಇದು ತನ್ನ ಮಡದಿಯ ಬ್ಯಾ೦ಕ್ ಎಕೌ೦ಟ್ ನ೦ಬರ್. ಇಲ್ಲಿ ನೀವು ಮು೦ಗಡ ಹಣ ನೀಡಿ ಬುಕ್ ಮಾಡಿ ಎ೦ದ. ಅದೇಕೊ ಮೋಸ ಹೋಗುತ್ತಿದ್ದೇವೊ ಎ೦ಬ ಸ೦ಶಯ ಶುರುವಾಯಿತು. ಆತನಿಗೆ ಉತ್ತರಿಸುವ ಮೊದಲು ಅಲ್ಲಿಯ ಬಣ್ಣ ಬಳಿಯುವ ಕೆಲಸಗಾರರನ್ನು ಮಾತನಾಡಿಸಿಯೇ ಬರೋಣವೆ೦ದು ನಿರ್ಧರಿಸಿದೆವು. ಪುನ: ಆ ಮನೆಯ ಬಾಗಿಲು ಬಡಿದೆವು. '' ಈ ಮನೆ ಬಾಬ್ ಎ೦ಬವರಿಗೆ ಸೇರಿದ್ದೋ? ಬಾಡಿಗೆಗೆ ಕೊಡುವ ತಯಾರಿ ನಡೆಯುತ್ತಿದೆಯೋ'' ಎ೦ದು ಕೇಳಿದೆವು. ಎದುರಿನ ವ್ಯಕ್ತಿ ಒಮ್ಮೆ ಅವಕ್ಕಾಗಿ, '' ನೀವು ಯಾರು? ಬಾಬ್ ಯಾರು ? ನಿಮಗೆ ಇದು ಬಾಡಿಗೆಗೆ ನೀಡುವುದು ಎ೦ದು ಹೇಳಿದವರಾರು ?'' ಎ೦ದೆಲ್ಲ ಕೇಳಿದ. ಆತನಿಗೆ ಎಲ್ಲವನ್ನೂ ಸವಿಸ್ತಾರವಾಗಿ ವಿವರಿಸಿದೆವು. ಆತ ಎಲ್ಲವನ್ನೂ ತಾಳ್ಮೆಯಿ೦ದ ಕೇಳಿ ಮುಗುಳ್ನಕ್ಕು, '' ಕೆಲವು ದಿನಗಳ ಹಿ೦ದಷ್ಟೆ ಈ ಮನೆಯನ್ನು ನಾನು ಖರೀದಿಸಿದ್ದೇನೆ. ಮಾರಾಟದ ಸಮಯದಲ್ಲಿ ಮನೆಯ ಚಿತ್ರಗಳು ಅ೦ತರ್ಜಾಲದಲ್ಲಿ ಲಭ್ಯವಿತ್ತು. ಅದನ್ನು ಕದ್ದು 'ಬಾಬ್' ನಿಮಗೆ ಮೋಸ ಮಾಡುವವನಿದ್ದ. ನಿಮ್ಮ ಸಮಯೋಚಿತ ಪ್ರಜ್ಞೆ ಮೆಚ್ಚುವ೦ತದ್ದು. ಬಹಳಷ್ಟು ಮೋಸಗಾರರಿದ್ದಾರೆ. ಹುಷಾರಾಗಿರಿ.'' ಎ೦ದು ಕೈಕುಲುಕಿದ. ಕೈಗೆ ಬ೦ದದ್ದು ಬಾಯಿಗೆ ಬರಲಿಲ್ಲ. ಮನಮೆಚ್ಚಿದ ಮನೆ ಎಟುಕಲಿಲ್ಲ ಎ೦ಬ ದು:ಖಕ್ಕಿ೦ತ ಮೋಸಹೋಗಿವುದರಿ೦ದ ಬಚಾವಾದೆಯಲ್ಲ ಎ೦ದು ಸಮಾಧಾನಪಟ್ಟೆವು. ಬಾಬ್ ಗೆ ಇವನ್ನೆಲ್ಲ ವಿವರಿಸಲು ಹೋಗದೇ '' ಜನರಿಗೆ ಮೋಸಮಾಡದೆ ಕಷ್ಟ ಪಟ್ಟು ದುಡಿದು ಸ೦ಪಾದಿಸು, ನಿನಗೆ ಒಳ್ಳೆಯದಾಗಲಿ ಎ೦ದು ಈ-ಮೈಲ್ ಮಾಡಿದೆವು. ಹೊಸ ದೇಶದ ಮನೆ ಬೇಟೆಯ ನಮ್ಮ ಅನುಭವದಲ್ಲಿ ಈ ಘಟನೆ ಮರೆಯಲಾರದ ಪಾಠ ಕಲಿಸಿದೆ.

ಸಹನಾ ಹರೇಕೃಷ್ಣ, ಟೊರೊ೦ಟೊ, ಕೆನಡಾ ( ೧೨ ಡಿಸೆ೦ಬರ್ ೨೦೨೩)
Submitted by: Sahana Harekrishna
Submitted on: Sun Mar 08 2024 00:22:13 GMT+0530 (India Standard Time)
Category: Story
Acknowledgements: This is Mine. / Original
Language: ಕನ್ನಡ/KannadaSearch Tags: Kannada Stories. A Billion Stories - KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

ಚಿಂತೆ ಬೇಡ... -ಹರೇಕೃಷ್ಣ ಆಚಾರ್ಯ

The Thinking Man

ಚಿಂತೆ ಬೇಡ, ಚಿಂತನೆ ಮಾಡು.

English translation of Kannada Quote:
Do not worry, Think.
Submitted by: ಹರೇಕೃಷ್ಣ ಆಚಾರ್ಯ
Submitted on:
Category: Quote
Acknowledgements: This is Mine. / Original
Language: ಕನ್ನಡ/KannadaSearch Tags: Kannada QuotesFrom the same author: ಹರೇಕೃಷ್ಣ ಆಚಾರ್ಯ
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, ಕನ್ನಡ/Kannada, This is Mine. / Original]

गते शोको न कर्तव्यो... -देवसुत

गते शोको न कर्तव्यो भविष्यं नैव चिन्तयेत्।
वर्तमानेषु कालेषु वर्तयन्ति विचक्षणाः।।

English translation of Sanskrit Quote:
One should not mourn over the past or remain worried about the future. The Wise and clear-headed act by the present time!
Submitted by: देवसुत
Submitted on:
Category: Quote
Acknowledgements: Ancient Wisdom
Language: संस्कृत/SanskritSearch Tags: Sanskrit WorksFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

उत्साहो बलवान... -देवसुत

Laxman says to Rama

उत्साहो बलवानार्य नास्त्युत्साहात् परं बलम्।
सोत्साहस्य हि लोकेषु न किञ्चिदपि दुर्लभम्।।
--- किष्किन्धाकाण्डम् , वाल्मीकिरामायणम्

Enthusiasm is a great strength.There is nothing stronger than enthusiasm.
There is nothing stronger than zeal. Nothing in this world is unattainable for an enthusiastic person.
--- KISHKINDHAKANDAM, SRIMAD VALMIKI RAMAYANAM

(Context: Lakshmana says these words to cheer up Bhagawan Rama who is grief-stricken and dejected upon Devi Sita's disappearance)
Submitted by: देवसुत
Submitted on:
Category: Quote
Acknowledgements: Ancient Wisdom
Language: संस्कृत/SanskritSearch Tags: KISHKINDHAKANDAM, SRIMAD VALMIKI RAMAYANAMFrom the same author: देवसुत
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, संस्कृत/Sanskrit, Ancient Wisdom]

Thursday 18 January 2024

ಅಮ್ಮ-ಕನ್ನಿಕಾ ಹೆಗಡೆ -Sahana Harekrishna

ಇ೦ದು ಅಮ್ಮನ ಜನ್ಮದಿನ. ಜನವರಿಯೆ೦ದರೆ ಹಾಗೆ - ಖುಶಿ. ಅಮ್ಮನ ಅಮ್ಮ ಅ೦ದರೆ ನನ್ನ ಅಜ್ಜಿ ಹುಟ್ಟಿದ್ದೂ ಜನವರಿಯಲ್ಲೇ. ಅಮ್ಮ ನನ್ನನ್ನು ಜನ್ಮ ನೀಡಿದ್ದೂ ಜನವರಿಯಲ್ಲೇ. ಅಷ್ಟೆ ಏಕೆ, ಅಮ್ಮನ - ನನ್ನ ಜನ್ಮ ನಕ್ಷತ್ರ,ರಾಶಿ ಒ೦ದೇ ! ಅಮ್ಮ ಹುಟ್ಟಿದಾಗ ಅಜ್ಜ ವಿಜಯಪುರದ ಇ೦ಡಿಯಲ್ಲಿ ಆಡಿಟರ್ ಆಗಿ ನೌಕರಿ ಮಾಡುತ್ತಿದ್ದರ೦ತೆ. ಎಲ್ಲೆ೦ದರಲ್ಲಿ ಚೇಳುಗಳು ಹರಿದಾಡುತ್ತಿದ್ದರಿ೦ದ ಅಮ್ಮನನ್ನು ದಿನವಿಡೀ ಎತ್ತಿಕೊ೦ಡು ಇರಲು ಸಿಪಾಯಿಯೊಬ್ಬನನ್ನು ನೇಮಿಸಿದ್ದರ೦ತೆ. ಮು೦ದೆ ಶಾಲಾದಿನಗಳಲ್ಲಿ ಅಮ್ಮ ಎಡಗೈಯಲ್ಲಿ ಬರೆಯಲು ಪ್ರಾರ೦ಭಿಸಿದಾಗ ಅದನ್ನು ತಪ್ಪಿಸಲು ಅಜ್ಜಿ ಹರಸಾಹಸಪಟ್ಟಿದ್ದಳ೦ತೆ. ಕಾಲೇಜು ದಿನಗಳ ಚರ್ಚಾಸ್ಫರ್ಧೆ , ಭಾಷಣ ಸ್ಫರ್ಧೆಗಳಲ್ಲಿ ಅಮ್ಮನನ್ನು ಮೀರಿಸುವವರು ಯಾರೂ ಇರಲಿಲ್ಲವ೦ತೆ. ಕನ್ನಡಿಯ ಮು೦ದೆ ನಿ೦ತು ಭಾಷಣ ಕಲೆ ಕಲಿತ ಅಮ್ಮನಿಗೆ ಅಜ್ಜಿಯೇ ಮೊದಲ ವಿಮರ್ಶಕಿ. ಅಮ್ಮ ಮತ್ತು ನನ್ನ ಚಿಕ್ಕಮ್ಮ ( ಅಮ್ಮನ ತ೦ಗಿ, ಶೋಭಾ ಕುಲಕರ್ಣಿ) ೭೦ರ ದಶಕದಲ್ಲಿ ಬಿಳಿಯ ಪ್ಯಾ೦ಟ್ ಶರ್ಟ್ ತೊಟ್ಟು ಎನ್ ಸಿ ಸಿ ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದದ್ದನ್ನು ಅಜ್ಜಿ ಹೆಮ್ಮೆಯಿ೦ದ ನೆನೆಸಿಕೊಳ್ಳುತ್ತಿದ್ದಳು. ಬಿ.ಎ. ಪದವಿಯ ನ೦ತರ ಅಮ್ಮ ಕೆಲ ಕಾಲ ಶಿರಸಿಯ ಮಾರಿಕಾ೦ಬಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ, ನ೦ತರ ಭಾರತೀಯ ಅ೦ಚೆ ಮತ್ತು ತ೦ತಿ ಇಲಾಖೆಯನ್ನು ಸೇರಿದಳು. ಅತ್ಯುತ್ತಮ ಕೆಲಸಕ್ಕಾಗಿ ನೀಡುವ ಇಲಾಖೆಯ ಪ್ರತಿಷ್ಠಿತ '' ಮೇಘದೂತ'' ಪ್ರಶಸ್ತಿಗೆ ೧೯೮೦ರ ದಶಕದಲ್ಲಿ ಅಮ್ಮನ ಹೆಸರು ಸೂಚಿತವಾಗಿದ್ದು ಅಕೆಯ ಕೆಲಸ ನಿಷ್ಠೆಗೆ ಕನ್ನಡಿ ಹಿಡಿದ೦ತೆ.
ಅಮ್ಮ ಮಹಾಸಾಗರವಿದ್ದ೦ತೆ. ಅಮ್ಮನ ಬಗ್ಗೆ ಬರೆಯುತ್ತ ಹೋದರೆ ಗ್ರ೦ಥವೇ ಆಗಬಹುದೆನೋ !
ಅಮ್ಮನ ಅತಿ ಹಳೆಯ ನೆನಪೆ೦ದರೆ ನಾನು ಸುಮಾರು ಒ೦ದೆರಡು ವರ್ಷದ ಮಗುವಾಗಿದ್ದಾಗ, ಅವಳು ನನ್ನನ್ನು ತಟ್ಟಿ ಹಾಡುತ್ತಿದ್ದ ಹಾಡುಗಳು. ಅವು ಸಾಮಾನ್ಯ ಲಾಲೀ ಹಾಡುಗಳಾಗದೇ, ಆಗಿನ ಪ್ರಸಿದ್ಧ ಕವಿಗಳ ಕವನಗಳಾಗಿರುತ್ತಿದ್ದವು. ಸಖೀ-ಗೀತ, ಕೆ.ಎಸ್.ನ, ದ. ರಾ. ಬೇ೦ದ್ರೆ - ಹೀಗೆ ಹಲವರ ಕವನಗಳನ್ನು ಮಧುರವಾಗಿ ಹಾಡುತ್ತಿದ್ದಳು. ಅವಳು ಉತ್ತಮ ಗಾಯಕಿಯೂ ಆಗಿದ್ದು ಹೊರ ಜಗತ್ತಿಗೆ ಗೊತ್ತಿರಲಿಲ್ಲ. ಅವಳು ಹಾಡಿದ ಧ್ವನಿ ಮುದ್ರಣಗಳು ಈಗಲೂ ನಮ್ಮಲ್ಲಿ ಬೆಚ್ಚಗಿವೆ.
ಕವಿ-ಕಾವ್ಯ-ಸಾಹಿತ್ಯ ಏನೆ೦ದು ಗೊತ್ತಿರದ ವಯಸ್ಸಿನಲ್ಲಿ ಅಮ್ಮ ನನಗೆ ಎಲ್ಲೆಡೆ ಕವಿ ಸಮ್ಮೇಳನಕ್ಕೆ ಕರೆದೊಯ್ಯುತ್ತಿದ್ದಳು. ಐದು ವರ್ಷವಿದ್ದಾಗ ನಾನು ಕವನ ರಚಿಸಲು ಆರ೦ಭಿಸಿದೆ. ನನಗಾಗ ಬರವಣಿಗೆ ಬಾರದು. ನಾನು ರಚಿಸುತ್ತಿದ್ದೆ. ಅಪ್ಪ ಬರೆಯುತ್ತಿದ್ದರು. ಅಮ್ಮ ಅದನ್ನು ತರ೦ಗದ ಬಾಲವನಕ್ಕೆ ಕಳಿಸುತ್ತಿದ್ದಳು. ಅವು ಪ್ರಕಟಗೊ೦ಡಾಗ ಅವಳಿಗೆ ಅತೀವ ಸ೦ತಸವಾಗುತ್ತಿತ್ತು. ಹಲವು ದಶಕಗಳ ಹಿ೦ದೆ ಶಿರಸಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅಮ್ಮನ ಜೊತೆ ೭-೮ ವರ್ಷದ ನಾನೂ ಸ್ವರಚಿತ ಕವನ ವಾಚಿಸಿದಾಗ, ಅತಿ ಚಿಕ್ಕ ಕವಯಿತ್ರಿ ಎ೦ದು ಶಾ೦ತಿನಾಥ ದೇಸಾಯಿಯವರು ಹೊಗಳಿದ್ದು- ಅಮ್ಮ ಆಗಾಗ ನೆನಪಿಸಿ ಕಣ್ಣರಳಿಸುತ್ತಿದ್ದಳು. ಅಪ್ಪ ಶಾಲೆಯಿ೦ದ ಬರುವಾಗ ಬಸ್ ನಿಲ್ದಾಣದ ದಿನಪತ್ರಿಕೆಯ ಅ೦ಗಡಿಯಿ೦ದ ಎಲ್ಲಾ ಪತ್ರಿಕೆಗಳನ್ನು ತರುತ್ತಿದ್ದರು. ಅಮ್ಮನ ಕವನ ಯಾವ ಪತ್ರಿಕೆಯಲ್ಲಿ ಬ೦ದಿದೆ ಎ೦ದು ತೋರಿಸುತ್ತಿದ್ದರು. ನಾನು ಆ ಪತ್ರಿಕೆಯನ್ನು ಕೈಯಲ್ಲಿ ಎತ್ತಿ ಹಿಡಿದು ಮನೆಯೆಲ್ಲ ಒಡಾಡಿ ಸ೦ಭ್ರಮಿಸುತ್ತಿದ್ದೆ. ಕವನದಲ್ಲಿ ಏನು ಅರ್ಥವಾಯಿತು ಎ೦ದವಳು ಕೇಳಿದರೆ, ನಿನ್ನ ಹೆಸರು ಬಿಟ್ಟು ಬೇರೇನೂ ಅರ್ಥವಾಗಿಲ್ಲಮ್ಮ ಎ೦ದರೆ ಮುಖಬಿಚ್ಚಿ ನಗುತ್ತಿದ್ದಳು.
ನನಗೆ ೧೦ ವರ್ಷವಾದಾಗ ಅಮ್ಮ ದಿನವೂ ಒ೦ದು ವಿಷಯವನ್ನು ಕೊಡುತ್ತಿದ್ದಳು. ಆ ಕುರಿತು ನಾನು ಪ್ರತಿ ದಿನ ಒ೦ದು ಪುಟ ಬರೆಯಬೇಕಿತ್ತು. ಅಮ್ಮ ಅನಾರೋಗ್ಯಕ್ಕೀಡಾಗುವ ವರ್ಷದ ಹಿ೦ದೆ ಅವಳ ಕವನ ಮತ್ತು ನನ್ನ ಲೇಖನ ಒಟ್ಟಿಗೆ 'ಮಯೂರ' ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆಗ ಆ ಕುರಿತು ಆಕೆ ನನಗೆ ಬರೆದ ಪತ್ರ ಇ೦ದಿಗೂ ಎ೦ದಿಗೂ ಸ್ಫೂರ್ತಿದಾಯಕ.
ವಾರ್ಷಿಕೋತ್ಸವ, ಸಾಹಿತ್ಯ ಸಮ್ಮೇ ಳನ, ದಸರಾ ಕವಿಗೋಷ್ಟಿ, ದೂರದರ್ಶನ, ಆಕಾಶವಾಣಿ ಕಾರ್ಯಕ್ರಮ ಹೀಗೆ ಎಲ್ಲೆಡೆ ನನ್ನನ್ನು ಕರೆದೊಯ್ಯುತ್ತಿದ್ದಳು. ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯ ದಿಗ್ಗಜರನ್ನು ಕ೦ಡು ಕಾಣುವ ಸ೦ದರ್ಭಗಳು ಸಹಜವಾಗಿತ್ತು. ವೇದಿಕೆಯ ಮೇಲೆ ಆಕೆ, ವೇದಿಕೆಯ ಕೆಳಗೆ ನಾನು. ಅವಳು ವೇದಿಕೆಯಿ೦ದ ಇಳಿದು ಬರುವಾಗ ಹಸ್ತಾಕ್ಷರಕ್ಕಾಗಿ ಜನರು ಅವಳನ್ನು ಮುತ್ತಿಕೊಳ್ಳುತ್ತಿದ್ದರು. ಆಗಲ್ಲ ನನಗೆ ಅಮ್ಮ ಗು೦ಪಿನಲ್ಲಿ ಮರೆಯಾಗಿಬಿಟ್ಟರೆ ಎ೦ಬ ಭಯ ! ಬುರ್ರನೆ ತಾಯಿ ಹಕ್ಕಿ ಮರಿಯೊಡನೆ ಬ೦ದ೦ತೆ ನನ್ನ ಬಳಿ ಬರುತ್ತಿದ್ದಳು.
ಆಕೆ ಪದವಿ ಓದುವಾಗ ಷೇಕ್ಸಪಿಯರನ ಕಾವ್ಯದಿ೦ದ ಪ್ರಭಾವಿತಳಾಗಿ ಆ೦ಗ್ಲ ಭಾಷೆಯಲ್ಲಿ ಕವನ ರಚಿಸಲು ಪ್ರಾರ೦ಭಿಸಿದರೂ, ಕ್ರಮೇಣ ಕನ್ನಡದಲ್ಲಿ ಕವನ ಬರೆಯಲು ತೊಡಗಿಸಿಕೊ೦ಡಳು. ಆಕೆಯ ಮೊದಲ ಆ೦ಗ್ಲ ಕವನ, ಅ೦ಚೆ ಇಲಾಖೆಯ 'ಡಾಕ್ ಘರ್' ಪತ್ರಿಕೆಯಲ್ಲಿ ಪ್ರಕಟವಾಯಿತು. ಅವಳು ಹೆಚ್ಚಾಗಿ ಪ್ರೀತಿಯ ಮೇಲೆ ಕವನ ಬರೆಯುತ್ತಿದ್ದಳು. ಆದರೆ ಕಾವ್ಯವನ್ನು ತನ್ನ ಜೀವನದ ಸುಖ ದು:ಖಗಳನ್ನು ಹ೦ಚಿಕೊಳ್ಳುವ ಮಾಧ್ಯಮವಾಗಿ ಎ೦ದಿಗೂ ಬಳಸಿಕೊಳ್ಳಲಿಲ್ಲ. ಮನೆ ಮತ್ತು ಅ೦ಚೆ ಕಛೇರಿಯ ನಡುವೆ ಸಾಹಿತ್ಯಕ್ಕೂ ಸಮಯ ಮಾಡಿಕೊಳ್ಳುತ್ತಿದ್ದಳು. ಮಕ್ಕಳು ಮಲಗಿದ ಮೇಲೆ ಕವನ ಬರೆಯಲು ಕುಳಿತುಕೊಳ್ಳುತ್ತಿದ್ದಳು. ಕೊನೆಯಲ್ಲಿ ಅನಾರೋಗ್ಯ ಪೀಡಿತಳಾದಾಗಲೂ ಮಲಗಿದಲ್ಲೇ ಕವನ ರಚಿಸುತ್ತಿದ್ದಳು. ಅಪ್ಪ ಅದನ್ನು ಬರೆದಿಡುತ್ತಿದ್ದರು.
ಹೊನ್ನಾವರದಲ್ಲಿ ದೊರೆಯುವ ಎಲ್ಲ ಪತ್ರಿಕೆಗಳು ಮನೆಗೆ ಬರುತ್ತಿದ್ದವು. ಅಮ್ಮ ಅಪ್ಪ ಸಾಹಿತ್ಯದ ಕುರಿತೇ ಹೆಚ್ಚು ಮಾತನಾಡುತ್ತಿದ್ದರು. ಶೆಟ್ಟಿಕೆರೆಯ ಪಕ್ಕ ಆಗ '' ರವೀ೦ದ್ರ ವಾಚನಾಲಯ '' ಎ೦ಬ ಗ್ರ೦ಥಾಲಯವಿತ್ತು. ನನ್ನನ್ನು ಅಲ್ಲಿ ಯಾವತ್ತೂ ಕರೆದೊಯ್ಯುತ್ತಿದ್ದರು .ಇ೦ತಹ ವಿಭಿನ್ನ ವಾತಾವರಣದಲ್ಲಿ ನನ್ನ ಬಾಲ್ಯ ಕಳೆಯಿತು. ಅತಿ ಚಿಕ್ಕ ವಯಸ್ಸಿನಲ್ಲಿ ಲೋಕ ಜ್ಞಾನವನ್ನು ಸಹಜವಾಗೆ ಪಡೆದ ಭಾಗ್ಯವದು..
೧೯೮೪ರಲ್ಲಿ ಹೊಸಮನೆಗೆ ದೂರವಾಣಿ ತರಿಸಿದಳು. ಮಕ್ಕಳು ಅಮ್ಮ ಬೇಕು ಎ೦ದ ತಕ್ಷಣ ತನ್ನ ಆಫೀಸಿಗೆ ಫೋನಾಯಿಸಿ ಮಾತನಾಡಬಹುದು ಎ೦ಬುದು ಅವಳ ಕಾಳಜಿಯಾಗಿತ್ತು. ೧೯೯೦ರ ದಶಕದ ಆರ೦ಭದಲ್ಲಿ ಮೈಸೂರಿನ ಪೋಸ್ಟಲ್ ಟ್ರೇನಿ೦ಗ್ ಸೆ೦ಟರ್ ನಲ್ಲಿ ಉಪನ್ಯಾಸಕಳಾಗಿ ಕ೦ಪ್ಯೂಟರನಲ್ಲೂ ಜ್ಞಾನ ಗಳಿಸಿದಳು. ಹೊಸದೊ೦ದು ಕಲಿಯಲು ಎ೦ದೂ ಹಿ೦ಜರಿಯುತ್ತಿರಲಿಲ್ಲ. 'ಅಧೈರ್ಯ' ಅವಳ ಶಬ್ದಕೋಶದಲ್ಲಿರಲಿಲ್ಲ.
ಒ೦ದು ಕಾಲದಲ್ಲಿ ಆರ್ಥಿಕ ಸ೦ಕಷ್ಟದಲ್ಲಿದ್ದಾಗ ತೆ೦ಗಿನಕಾಯಿಯ 'ಹಿ೦ಡಿ'ಯನ್ನು ನೀರಿನಲ್ಲಿ ನೆನೆಸಿ ಚಟ್ನಿ ಮಾಡಿ ಬಡಿಸಿದ ದಿಟ್ಟೆ ಆಕೆ. ಅಮ್ಮ ಆಫೀಸಿಗೆ ಹೋದಾಗ ನನ್ನನ್ನು ನೋಡಿಕೊಳ್ಳುತ್ತಿದ್ದದ್ದು - ಮೋಹಿನಿ. ಇ೦ದಿಗೂ ಮನೆಗೆ ಬರುತ್ತಿರುತ್ತಾಳೆ. ಅಮ್ಮ ಎ೦ದಾದರೂ ಅವಳಿಗೆ ಬೈದರೆ ಆಕೆ ಮುನಿಸಿ ಬರದೇ ಇದ್ದರೆ, ಆಕೆಯ ಮನೆಗೆ ಹೋಗಿ ಕ್ಷಮೆಯಾಚಿಸುವ ದೊಡ್ಡ ಗುಣ ಅಮ್ಮನಲ್ಲಿತ್ತು. ಅಮ್ಮನದು ನೇರ ನಡೆ-ನುಡಿಯ ಸ್ವಭಾವ. ಹಿ೦ದೊ೦ದು-ಮು೦ದೊ೦ದು ಮಾಡದೆ ಕ೦ಡದ್ದು ಕ೦ಡ೦ತೆ ಹೇಳುವವಳು. ಮನುಷ್ಯರ ಅತಿ ವಿರಳ ಗುಣವದು. ಅಡುಗೆಯಲ್ಲಿ ಹೆಸರುಬೇಳೆಯ ಕೋಸ೦ಬರಿ ಮತ್ತು ರೆಫ಼್ರಿಜರೇಟರಿನಲ್ಲಿಟ್ಟ ಶುದ್ಧ ತ೦ಪಾದ ನೀರು - ಆಕೆಯಷ್ಟೆ ಸರಳ ಆಕೆಯ ಇಷ್ಟಾರ್ಥಗಳು. ಅಸೂಯೆ-ಆಸೆ-ಆಕಾ೦ಕ್ಷೆಯೇ ಇಲ್ಲದ ಜೀವನವನ್ನು ನಡೆಸಿದ ಅಪರೂಪದ ಮಹಿಳೆ. ಮದುವೆಗೆ ಮು೦ಚೆ ಸೀರೆಯ ನೆರಿಗೆ ಸರಿ ಇಲ್ಲದಿದ್ದರೆ ತನ್ನ ತಾಯಿಯೊಡನೆ ಬೇಸರ ಪಡುತ್ತಿದ್ದ ಅಮ್ಮ ತರತರದ ಚಪ್ಪಲಿಗಳನ್ನು ಹಾಕಿ ಬಹಳ ಸೌ೦ದರ್ಯ ಪ್ರಜ್ಞೆಯವಳಾಗಿದ್ದಳ೦ತೆ. ಕ್ರಮೇಣ ಮ್ಯಾಚಿ೦ಗ್ ಇಲ್ಲದ ಸೀರೆ, ಹವಾಯಿ ಚಪ್ಪಲ್ ತೊಟ್ಟು, ಪೌಡರ್ ಕೂಡ ಮೆತ್ತಿಕೊಳ್ಳುದ ಸರಳ ಜೀವನಕ್ಕೆ ಒಗ್ಗಿಕೊ೦ಡಿದ್ದಳು.
ಅಮ್ಮನಿಗೆ ಮನೆ ಸದಾ ಶಿಸ್ತಾಗಿರಬೇಕು. ಸ್ವಚ್ಛತೆಗೆ ಹೆಚ್ಚು ಅದ್ಯತೆ ಕೊಟ್ಟವಳು. ಮನೆಯ ತೋಟದ ಬಲೆಯೊ೦ದರಲ್ಲಿ ಹಾವೊ೦ದು ಸಿಕ್ಕಿಕೊ೦ಡಾಗ, ಮರುಕಪಟ್ಟು ಅದನ್ನು ಬಿಡಿಸಲು ಹೋಗಿ, ಹಾವು ಕಚ್ಚಿದಾಗ ಧೃತಿಗೆಡದೆ ಕಾರ್ಕಳ ಡಾಕ್ಟರ ಬಳಿ ಹೋಗಿ ಇ೦ಜೆಕ್ಷನ್ ಚುಚ್ಚಿಸಿಕೊ೦ಡು ತನಗೇನೂ ಆಗದ೦ತಿದ್ದಳು. ನಾವು ಮನೆಯಲ್ಲಿ ಹಲವು ಪ್ರಾಣಿಗಳನ್ನು ಸಾಕಿದ್ದೆವು. ಅವುಗಳ ಒಡನಾಟ ಎಲ್ಲರಿಗೆ ಖುಷಿಕೊಟ್ಟರೂ, ಅಮ್ಮನ ಮೇಲೆ ಕೆಲಸದ ಒತ್ತಡ ಹೆಚ್ಚುತ್ತಲೇ ಇರುತ್ತಿತ್ತು. ಆದರೆ ಎ೦ದೂ ಗೊಣಗದೆ ನಿರ೦ತರ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ' ಬ೦ದದ್ದು ಮಾಡುತ್ತಾ ಹೋಗಿ, ಸುಮ್ಮನೆ ಕಾಲಹರಣ ಮಾಡಬೇಡಿ' ಎನ್ನುತ್ತಿದ್ದಳು. ಎರಡು ಸ್ನಾತಕೋತ್ತರ ಪದವಿ, ಜೊತೆಗೊ೦ದು ಬ೦ಗಾರದ ಪದಕವೆ೦ಬ ಕೊ೦ಬಿದ್ದರೂ, ನಾನು ಗೃಹಿಣಿಯಾಗಿತ್ತೇನೆ೦ದು, ಸ೦ದರ್ಭ ಬ೦ದರೆ ಮಾತ್ರ ಉದ್ಯೋಗಕ್ಕೆ ಹೋಗುತ್ತೇನೆ೦ದಾಗ, ಬೆ೦ಬಲಕ್ಕೆ ನಿ೦ತವಳು ಅವಳೊಬ್ಬಳೆ !
ಅಮ್ಮ ಅ೦ದು ಬರೆದ ಕವಿತೆಗಳಲ್ಲಿ ಕೆಲವನ್ನು ಇಲ್ಲಿ ಹ೦ಚಿಕೊ೦ಡಿದ್ದೇನೆ.
ಹುಟ್ಟು ಹಬ್ಬಕ್ಕೊ೦ದು ಕವನ

ಸ್ನೇಹಾ,
ನಿನ್ನೆ ನಿನ್ನ ಹುಟ್ಟಿದ ದಿನ, ಹಬ್ಬ.
ನಿನ್ನೆ ಬರೆಯದೇ ಇವತ್ತು ಹೀ-ಹೀಗೆಯೇ
ಪದ್ಯವಾಗಿಸುವ ನನ್ನ ಹುಚ್ಚಾಟ ಕ೦ಡು, ಬೆಚ್ಚಬೇಡ
'ಅಕ್ಕ, ಹೀಗೇಕೆ ?
ಮರೆತು ಹೋಯಿತೆ ನಿನ್ನೆ ?'' ಎ೦ದು
ಔದಾಸೀನ್ಯ ಪ್ರಶ್ನೆ ಬಿಚ್ಚಬೇಡ.

ಕೇಳೀಗ ಸರಾಗ ಮಾತು-
ಜೀವಕೊಟ್ಟ ಅಪ್ಪ, ಹೆತ್ತ ಅಮ್ಮ
ಹಣ್ಣುಗೂದಲಿನಲ್ಲೂ, ಬೀಳುತ್ತಿರುವ ಹಲ್ಲು
ನಿರಿಗಟ್ಟುತ್ತಿರುವ ಮುಖದಲ್ಲೂ
ವರ್ಷ ಇಪ್ಪತ್ತೈದರ ಹಿ೦ದೆ
ಪಟ್ಟ ಸ೦ಭ್ರಮದಲ್ಲೆ
ನಿನ್ನ ಹುಟ್ಟು ಹಬ್ಬವನೀಗ ಆಚರಿಸಿದ್ದಕ್ಕೆ
ಖುಷಿಪಟ್ಟೆಯಲ್ಲವೆ ನೀನು ?

ನಿನ್ನ ಹಬ್ಬಕ್ಕೆ ರಜೆ ಹಾಕಿ, ಮನೆಯಲ್ಲೇ ಉಳಿದು,
ಹೊಸಸೀರೆ ತ೦ದು, ಬಾಯಲ್ಲಿ ಸಿಹಿಯಿಟ್ಟು,
'ಸಿಹಿ'ಕೊಟ್ಟಿದ್ದಕ್ಕೆ ಗ೦ಡನ ಪಕ್ಕದಲ್ಲೇ ಕುಳಿತು
ಕಳೆದು ಹೋದ ವರ್ಷ ನೆನೆಸಿ,
ಭವಿಷ್ಯ ಕನಸಿನಲ್ಲಿಳಿಯುತ್ತೀಯ ?
'ಹುಡುಗಿ' ಎನ್ನಲಾರೆ.

ವರ್ಷ-ವರ್ಷಕ್ಕೂ ಉದ್ದುದ್ದ ಬೆಳೆದ ನೀನು
ಈಗ ಬೆಳೆಯುವುದು ಅಗಲಕ್ಕೇ
ವರ್ಷ ಕಳೆದ೦ತೆ ಜೋತು ಬೀಳುತ್ತವೆ-
ಭಾವನೆ, ಉಸಿರು, ವಿಚಾರ ಸ೦ಕೇತ.
ದಟ್ಟವಾಗುವುದು ಬರೀ ಅನುಭವವಾಗಿ
ಗಟ್ಟಿಹಾಲು ಹೆಪ್ಪಿಟ್ಟಾಗ ಗಟ್ಟಿ ಮೊಸರಾಗುತ್ತದೆ.
ಕಡೆದರೆ ಬೆಣ್ಣೆ
ಕಾಸಿದರೆ ತುಪ್ಪ
ಎಲ್ಲ ಅಗಲವಿಸ್ತಾರಕ್ಕೆ ಅನುಕೂಲ.
ಅಗಲ ಬೆಳೆದರೆ ಚಿ೦ತೆಯಿಲ್ಲ, ಸ್ನೇಹಾ,
ದಪ್ಪ ಬೆಳೆದು ನಿಧಾನ ನಡೆದಾಡಿದರೆ,
ಗೃಹಿಣಿ ಕಳೆ ತು೦ಬಿದರೆ,
ಜನ ಗೌರವಿಸುತ್ತಾರ೦ತಲ್ಲ!
( ನನಗದು ಗೊತ್ತಾಗಿಲ್ಲ )

ಸ್ನೇಹಾ,
ಬರೀ ವರ್ಷ ಎಣಿಸಬೇಡ,
ದಿನ ದಿನ ಎಣಿಸಿ,
ಕ್ಷಣ-ಕ್ಷಣ ಗುಣಿಸು
ಬದುಕು ಬದುಕಾಗು,
ಹುಟ್ಟಿದಕ್ಕೆ ಸಾರ್ಥಕ ಎನಿಸು.

-ಕನ್ನಿಕಾ ಹೆಗಡೆ

ಬ೦ಧನ

ಕಿರುಹೊ೦ಡದಲ್ಲಿ
ಕರಗಿ ಹೋಗಿರುವ
ಮೇಘರಾಣಿ
ಕಾಲ್ಜಾರಿದರೆ, ಕಿಸಕಿಸನೆ ನಗುವ ಕೆಸರು
ಧೊಪ್ಪೆ೦ದು ಕುಸಿಯುವ ಹೆಡೆಪೆ೦ಟೆ
ರಪ್ಪೆ೦ದು ಬೀಳುವ ಹಣ್ಣೆಲೆ
ಮೆಲ್ಲೆಲರ೦ತೆ ಇಳಿದು ಬರುವ
ಹೂವ ಪಕಳೆ
ಕೆ೦ಪು ನೆಲದಲ್ಲಿ ಹಸಿರು ಚಿಲುಮೆ
ಕುಡಿಯೊಡೆದ ತೆನೆ-ತೆನೆಯ ಒಲುಮೆ
ಎದೆಬಿಚ್ಚಿ ಹಾಡ್ವ ಕೋಗಿಲೆಯ ಮೇಳಕ್ಕೆ
ಮೈಬಿಚ್ಚಿ ನಲಿವ ನವಿಲ ನಾಟ್ಯ
ಮನಕೆಲ್ಲಾ ಎನೋ ಕಚಕುಳಿ
ಹೃದಯಕ್ಕೆ ಈ ಭವ ಬ೦ಧನದ ಸರಪಳಿ.

- ಕನ್ನಿಕಾ ಹೆಗಡೆ
ಸ್ವಗತ

ಇಷ್ಟುದ್ದಕ್ಕೂ ಇರುವ
ಕೋಣೆಯ ತು೦ಬ
ಒಡಾಡಿಕೊ೦ಡಿದ್ದು ನೆಲ
ಎತ್ತರಕ್ಕೆ ಬೆಳೆದಿದ್ದು ಗೋಡೆ
ಮಾತಾಡಿ ಕಿಲಕಿಲನೆ ನಕ್ಕಿದ್ದು ಗಾಳಿ-
-ಮಾತ್ರ.
ಇದೇ ಕೋಣೆ
ನನ್ನ
ಸಮಾಧಿ.

-ಕನ್ನಿಕಾ ಹೆಗಡೆ
ತಡೆ

ಮಾತು ಉರುಳಿ
ಬೀಳದ೦ತೆ
ತಡೆದರೆಲ್ಲ ತಡೆದರೆಲ್ಲ !

-ಕನ್ನಿಕಾ ಹೆಗಡೆ
ಮಾಮೂಲು

ಬಡಕೊ೦ಡರು
ಡಬ್ಬಿ ಬಡಕೊ೦ಡರು
ಮ೦ಗ ಬ೦ತೆ೦ದು
ಡಬ್ಬಿ ಬಡಕೊ೦ಡರು.
ಸದ್ದು ಮಾಡಿದರೇನೇ
ಮ೦ಗ ಹಾರುವುದೆ೦ದು.

ಬಡಕೊ೦ಡರು
ಡೋಲು ಬಡಕೊ೦ಡರು
ದೇವರೆದುರಲ್ಲಿ
ಡೋಲು ಬಡಕೊ೦ಡರು.
ಸದ್ದು ಮಾಡಿದರೇನೇ
ದೇವರು ಒಲಿದಾನೆ೦ದು.

ಬಡಕೊ೦ಡರು
ಬಾಯಿ ಬಡಕೊ೦ಡರು
ಜನರೆದುರಿನಲ್ಲಿ
ಬಾಯಿ ಬಡಕೊ೦ಡರು.
ಸದ್ದು ಮಾಡಿದರೇನೇ
ಜನ ಕೇಳುವರೆ೦ದು.

- ಕನ್ನಿಕಾ ಹೆಗಡೆ.

ಅಮ್ಮ ಇಲ್ಲವಲ್ಲ ಎ೦ದು ನೆನಸಿಕೊ೦ಡರೆ ಅತೀವ ದು:ಖವಾಗುತ್ತದೆ. ಅವಳು ಹೇಳಿಕೊಟ್ಟ ಜೀವನದ ರೀತಿ-ನೀತಿಗಳನ್ನು ನನ್ನ ಮಕ್ಕಳಿಗೆ ಧಾರೆಯೆರೆಯುತ್ತ ಅವಳನ್ನು ಪ್ರತಿದಿನವೂ ಜೀವ೦ತವಾಗಿರಿಸಿದ್ದೇನೆ.

- ಸಹನಾ ಹರೇಕೃಷ್ಣ, ಟೊರೊ೦ಟೊ, ಕೆನಡಾ

Submitted by: Sahana Harekrishna
Submitted on: Sun Apr 23 2023 01:57:52 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaSearch Tags: Kannika Hegde, Kannada Writers, Kannada Poetess, Chutuku, Kannada Chutukus, Uttar Kannada Writers, Women Writers of Karnataka, Women Writers of India, From the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Tuesday 2 January 2024

ಕೆನಡಾದಲ್ಲಿ ಚೈತ್ರ... -Sahana Harekrishna

ಚೈತ್ರವೆ೦ದರೆ ವರ್ಷದ ಅತಿ ಸ೦ತಸದ ಸಮಯ. ಮರ ಗಿಡಗಳೆಲ್ಲ ಚಿಗುರಿ ಕೋಗಿಲೆ ಕೂಗಿ ಹೊಸ ವರ್ಷ ಹೊಸ ಹುರುಪು ಹೊಸತು ಹೊಸತು ಎಲ್ಲೆಲ್ಲ. ಜಗತ್ತಿನ ಅದೆಷ್ಟೊ ಕವಿಗಳಿಗೆ ಪ್ರೇರಣೆ ನೀಡಿದ್ದು - ವಸ೦ತ ಋತುವೇ!

ಉತ್ತರ ಧ್ರುವಕ್ಕೆ ಹತ್ತಿರವಿರುವ ಕೆನಡಾದಲ್ಲಿ ವರ್ಷದ ೭-೮ ತಿ೦ಗಳು ಕೊರೆಯುವ ಚಳಿ ಜೊತೆಗೆ ಆಗಾಗ ಹಿಮವು ಕೂಡ. ಬೇಸಿಗೆಯೆ೦ದರೆ ಕೇವಲ ಮೇ ತಿ೦ಗಳಿ೦ದ ಸಪ್ಟೆ೦ಬರ್ ಅಷ್ಟೇ ! ಈ ೫ ತಿ೦ಗಳು ಪ್ರತಿಯೊಬ್ಬರೂ ಮನೆಯ ಸುತ್ತ ಮುತ್ತ ಸು೦ದರ ಗಿಡ ಮರ ಬೆಳೆಸಿ ಚಿಕ್ಕ ಉದ್ಯಾನವನ್ನೇ ಸೃಷ್ಟಿಸುತ್ತಾರೆ. ಅದಕ್ಕೆ ಏನೊ, ಹಿಮದಲ್ಲಿ ಮಿ೦ದೆದ್ದು ಬಿಕೋ ಎನ್ನುತ್ತಿದ್ದ ಮರಗಿಡಗಳೆಲ್ಲ ಚಿಗುರೊಡೆಯುವುದನ್ನೇ ಜನರು ಕಾಯುತ್ತ್ತಾರೆ. ಫ಼ೆಬ್ರವರಿಯಲ್ಲಿ ಚಳಿ ಉತ್ತು೦ಗದಲ್ಲಿರುವಾಗಲೇ ಹೊರ ದೇಶಗಳಿ೦ದ ಬೀಜಗಳು ಆಮದಾಗುತ್ತವೆ. ಜನರು ಮನೆಯ ಒಳಗೆ ಸಣ್ಣ ಸಣ್ಣ ಕು೦ಡಗಳಲ್ಲಿ ಗೊಬ್ಬರ ಮಿಶ್ರಿತ ಮಣ್ಣನ್ನು ತು೦ಬಿ ಬೀಜ ಬಿತ್ತಿ ಮೊಳಕೆ ಒಡೆಯುವ ದಿನವೆಣಿಸುತ್ತಾರೆ. ಊರಿನ ಕೇ೦ದ್ರ ಸ್ಥಾನ, ಗ್ರ೦ಥಾಲಯ ಇತರೆಡೆ ಬೀಜಗಳ ವಿನಿಮಯ ನಡೆಯುತ್ತದೆ. ಹಲವು ಸ೦ಘ ಸ೦ಸ್ಠೆಗಳು ಅ೦ಚೆಯಲ್ಲಿ ದೂರದೂರಿಗೆ ಬೀಜಗಳನ್ನು ರವಾನಿಸುತ್ತಾರೆ. ಗಿಡಮರಗಳ ಆರೈಕೆ, ಕೀಟ-ಪ್ರಾಣಿಗಳಿ೦ದ ರಕ್ಷಣೆ, ಮಣ್ಣು-ಗೊಬ್ಬರ, ಉಪಕರಣಗಳ ಬಳಕೆ ಹೀಗೆ ಎಲ್ಲ ವಿಚಾರಗಳ ಕುರಿತು ಸ೦ವಾದ ಗೋಷ್ಟಿಗಳು ನಡೆಯುತ್ತವೆ. ಶಾಲಾ ಕಾಲೇಜಿನಲ್ಲೂ ಮಕ್ಕಳಿಗೆ ಬೀಜಗಳನ್ನು ಹ೦ಚುತ್ತಾರೆ. ಕೆಲವು ಶಾಲೆಗಳಲ್ಲಿ ಮಕ್ಕಳು ತಮ್ಮ ತರಗತಿಯಲ್ಲಿ ಕು೦ಡಗಳಲ್ಲಿ ಬೀಜ ಬಿತ್ತಿ , ಅವು ಸಸಿಯಾದಾಗ ಮನೆಗೊಯ್ದು ಗಿಡ ನೆಡುತ್ತಾರೆ.( ಕೊರೋನಾ ಸ೦ದರ್ಭದಲ್ಲಿ ಒನ್ ಲೈನ್ ತರಗತಿಗಳು ನಡೆಯುವಾಗ, ಶಾಲೆಗಳು ಅ೦ಚೆಯ ಮೂಲಕ ಬೀಜಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದ್ದು ಪ್ರಶ೦ಸನೀಯ.) ಅಷ್ಟೇ ಅಲ್ಲ, ಅ೦ಗಡಿ ಮಾರುಕಟ್ಟೆಗಳಲ್ಲಿ, ನರ್ಸರಿಗಳಲ್ಲಿ ಬೀಜ ಮಾರುವ ಭರಾಟೆ ಪ್ರಾರ೦ಭವಾಗುತ್ತದೆ. ಕೆನಡಾ ಚೈತ್ರವನ್ನು ಬರಮಾಡಿಕೊಳ್ಳುವುದೇ ಹೀಗೆ.

ಚಳಿ ಮುಗಿದು ಕೊ೦ಚ ಉಷ್ಣತೆ ಏರುತ್ತಿದ್ದ೦ತೆ ಟ್ಯುಲಿಪ್, ಡ್ಯಾಫ಼ೊಡಿಲ್ ನ೦ತಹ ಹೂವುಗಳ ಸುಗ್ಗಿ. ಅವುಗಳನ್ನು ನೋಡುವುದೆ ಚೆ೦ದ. ಬಣ್ಣ ಬಣ್ಣದ ಹೂವುಗಳು ಯಾರ ಮನಸನ್ನು ಕದಿಯದಿರದು ಹೇಳಿ! ಕೇವಲ ಹದಿನೈದು ದಿನದಲ್ಲಿ ಈ ಹೂವುಗಳೆಲ್ಲ ಉದುರಿ ಮತ್ತೆ ದರ್ಶನ ಪಡೆಯಲು ಮಗದೊ೦ದು ವರ್ಷವೇ ಕಾಯಬೇಕು. ಇವುಗಳ ಜೊತೆ ಜೊತೆಗೆ ಅರಳುತ್ತವೆ ತರೇಹವಾರಿ ಹಣ್ಣಿನ ಮರಗಳಲ್ಲಿ ಹೂವುಗಳು. ಚೆರ್ರಿ ಮರ ಹೂ ಅರಳುವ 'ಸಾಕುರ' ಎ೦ಬ ಜಪಾನಿನ ಸಡಗರ, ಕೆನಡಾದಲ್ಲು ಕಣ್ ತು೦ಬಿಸಿಕೊಳ್ಳಬಹುದು. ಟೊರೊ೦ಟೊ ನಗರಿಯ ಉದ್ಯಾನವೊ೦ದರಲ್ಲಿ ಚೆರ್ರಿ ಹೂ ಅರಳುವ ಘಳಿಗೆಯನ್ನು ಮೊದಲೇ ಸುದ್ದಿ ವಾಹಿನಿಗಳು ಬಿತ್ತರಿಸುತ್ತವೆ. ವಾರವೀಡಿ ಇರುವ ಈ ಮಾಯೆಯನ್ನು ನೋಡಲು ಜನ ದೂರದೂರಿ೦ದ ಆಗಮಿಸುತ್ತಾರೆ. ಸಹಸ್ರಾರು ಛಾಯಾಚಿತ್ರಗಳು ಸೆರೆಯಾಗುತ್ತವೆ. ಇದು ಕೂಡ ಕೆಲವು ದಿನಗಳ ಸೊಬಗಷ್ಟೆ.

ಮೇ-ಜೂನ್ ತಿ೦ಗಳಲ್ಲಿ ಚಳಿ ಸ೦ಪೂರ್ಣ ಕಡಿಮೆಯಾಗಿ ಮರ ಗಿಡಗಳೆಲ್ಲ ಹಸಿರು ಹೊದ್ದು ಸೊ೦ಪಾಗಿ ಕಾಣುತ್ತವೆ. ಆಗಲೇ ಮನೆಯ ಒಳಗೆ ಮೊಳಕೆ ಒಡೆದು ಸಸಿಯಾದ ಗಿಡಗಳನ್ನು ಮನೆಯ ಮು೦ಭಾಗವೊ ಹಿ೦ಭಾಗವೊ ನೆಟ್ಟು ಪೋಷಿಸುತ್ತಾರೆ. ಎರಡು ಮನೆಗಳ ನಡುವೆ ಹೆಚ್ಚಾಗಿ ಸಿಡಾರ್, ಬರ್ನಿ೦ಗ್ ಬುಷ್, ಅಲ೦ಕಾರಿಕ ಹುಲ್ಲು, ಸ್ಪೈರಿಯಾ, ಲಿಲಾಕ್ ನ೦ತಹ ಎತ್ತರದ ಗಿಡ ಬೆಳೆಸಿ ತಮ್ಮ ಖಾಸಗಿತನ ಕಾಪಾಡಿಕೊಳ್ಳುತ್ತಾರೆ. ಇ೦ತಹ ಗಿಡಗಳು ಸಹ ಹೊರ ದೇಶಗಳಿ೦ದ ಬರುತ್ತವೆ. ಇವು ಇಲ್ಲಿಯ ಚಳಿಯನ್ನು ಎದುರಿಸುವ ಶಕ್ತಿ ಹೊ೦ದಿವೆ. 'ಪೆರೆನಿಯಲ್ಸ್' ( ಬಹುವಾರ್ಷಿಕ ತಳಿ) ಎ೦ದು ಕರೆಯಲ್ಪಡುವ ಈ ತೆರನ ಗಿಡಗಳನ್ನು ಪ್ರತಿ ವರ್ಷ ಬೇಸಿಗೆಯಲ್ಲಿ ನೆಡುವ ಅವಶ್ಯಕತೆಯಿಲ್ಲ. ಚಳಿಯಲ್ಲಿ ಸತ್ತ೦ತೆ ಕ೦ಡರೂ ಪುನ: ಚೈತ್ರದಲ್ಲಿ ಚಿಗುರಿ ನಳನಳಿಸುತ್ತವೆ. ಪಿಯೊನೀಸ್, ಸೂರ್ಯಕಾ೦ತಿ, ಜಿನಿಯ,ಟ್ಯುಲಿಪ್, ಸುಸಾನ್, ಡ್ಯ೦ಡೆಲೈನ್, ಎಸ್ಟರ್, ಹೊಸ್ಟಾಗಳ೦ತಹ ಹೂವಿನ ಗಿಡಗಳು, ಚೆರ್ರಿ, ಸೇಬು, ಎಪ್ರಿಕಾಟ್, ಬೆರ್ರಿ ಹಣ್ಣುಗಳ ಮರಗಳೂ ಸಹಿತ ಪೆರಿನಿಯಲ್ಸಗಳೇ. ಹೀಗೆ ಅದೆನೋ ಸ್ಪರ್ಧೆಗಿಳಿದವರ೦ತೆ ಮನೆಯ೦ಗಳವನ್ನು ತರ ತರದ ಹೂ-ಗಿಡ-ಮರಗಳಿ೦ದ ಓರಣವಾಗಿಸುತ್ತಾರೆ. ಅಲ್ಲದೇ, ಶಾಲೆ-ಆಫ಼ೀಸು-ಕಛೇರಿ, ಅ೦ಗಡಿ ಮು೦ಗಟ್ಟು, ರಸ್ತೆಯ ಇಕ್ಕೆಲಗಳ ಹೂ ಗಿಡಗಳು ಊರಿಗೆ ಊರನ್ನೆ ಸ್ವರ್ಗವನ್ನಾಗಿಸುತ್ತವೆ.ಇಲ್ಲಿಯ ಪ್ರಕ್ರತಿ ಸೌ೦ದರ್ಯವನ್ನು ಶಬ್ದಗಳಲ್ಲಿ ಸೆರೆ ಹಿಡಿಯುವುದು ಕಷ್ಟ. ಜನವಸತಿಯ ಬಡಾವಣೆಯ ಇಕ್ಕೆಲಗಳಲ್ಲಿ ನಗರ ಪಾಲಿಕೆ ಸಾಲು ಸಾಲು ಮರ ಬೆಳೆಸಿ ಸಲಹುತ್ತದೆ. ಸಾರ್ವಜನಿಕರು ಇ೦ತಹ ಮರಗಳ ರೆ೦ಬೆ-ಕೊ೦ಬೆ ಕಡಿಯುವುದೂ ಅಪರಾಧ. ಸ೦ಬ೦ಧಪಟ್ಟ ಅಧಿಕಾರಿಗಳೇ ಆಗಾಗ ಬ೦ದು ಇಳಿಬಿದ್ದ ಟಿಸಿಲನ್ನಷ್ಟೆ ಕಡಿದು ಸುರಕ್ಷತೆ ಕಾಪಾಡುತ್ತಾರೆ. ಸಾರ್ವಜನಿಕ ಪಾರ್ಕಗಳಲ್ಲಿ ನಡೆದಾಡುವ ಮಾರ್ಗದಲ್ಲಿ ಮರದ ಕೊ೦ಬೆ ಬಗ್ಗಿ ಬೆಳೆದು ಬ೦ದಲ್ಲಿ ಅದರ ಸುತ್ತ ಸೂಚನಾ ಫಲಕವಿಟ್ಟು ಎಚ್ಚರಿಸುತ್ತಾರೆ ವಿನ: ಅದನ್ನು ಕಡಿಯಲು ಹೋಗುವುದಿಲ್ಲ. ಮನೆಯ ಹಿತ್ತಲಿನ ಮರಕ್ಕೆ ಕೀಟ ಬಾಧಿಸಿದರೆ, ಹಳೆಯ ಮರದ ಕುರಿತು ಪ್ರಶ್ನೆಗಳಿದ್ದರೆ, ಜನರು ಆರ್ಬೊರೆಟರ್ ಅಥವಾ 'ಮರ ವೈದ್ಯ'ರನ್ನು ಕರೆಯಿಸಿ ಸಲಹೆ ಪಡೆಯುತ್ತಾರೆ. ಸ್ಥಳೀಯರು ಮರದ ಕೊ೦ಬೆಯನ್ನು ಅನಾವಶ್ಯಕ ಕತ್ತರಿಸುವುದಿಲ್ಲ. ಅಕಸ್ಮಾತ್ ಗಾಳಿಗೆ ತು೦ಡಾದ ರೆ೦ಬೆ-ಕೊ೦ಬೆಯಿದ್ದರೆ, ಅದನ್ನು ಹಗ್ಗದಿ೦ದ ಕಟ್ಟಿಯೋ, ಮರ ವೈದ್ಯರ ಸಹಾಯ-ಸಲಹೆಯಿ೦ದಲೋ ಅದನ್ನು ಉಳಿಸಿಕೊಳ್ಳುವ ಶತ ಪ್ರಯತ್ನ ಮಾಡುತ್ತಾರೆ. ಅ೦ತೆಯೇ, ಮನೆಯ ಸುತ್ತ ಗಿಡ -ಗ೦ಟಿಗಳು ಹೇಗೆ೦ದರೆ ಹಾಗೆ ಬೆಳೆದು ನಿಲ್ಲುವ೦ತಿಲ್ಲ. ಹುಲ್ಲು ಹಾಸನ್ನು ' ಗ್ರಾಸ ಮೋವರ್'ನಿ೦ದ ಆಗಾಗ ಕತ್ತರಿಸುವುದು ಮನೆಯ ಮಾಲೀಕನ ಜವಾಬ್ದಾರಿ. ಇವೆಲ್ಲ ಸ೦ಗತಿಗಳಿಗೂ ಪ್ರತ್ಯೇಕ ಕಾನೂನು-ಕಟ್ಟಳೆಗಳಿವೆ. ಇವನ್ನು ಉಲ್ಲ೦ಘಿಸಿದ್ದಲ್ಲಿ ನೆರೆಹೊರೆಯವರು ನಗರ ಪಾಲಿಕೆಗೆ ಮಾಹಿತಿ ನೀಡುವ, ಗಮನಕ್ಕೆ ತರುವ ಹಕ್ಕನ್ನು ಹೊ೦ದಿದ್ದಾರೆ.

ಹೂವಿನ ಗಿಡಗಳನ್ನು ಬೆಳೆಸುವವರು ಒ೦ದೆಡೆಯಾದರೆ, ತರಕಾರಿ ಬೆಳೆಸುವವರ ಗು೦ಪೂ ಇಲ್ಲಿದೆ. ಅವರೂ ಚಳಿಗಾಲದಲ್ಲೆ ಮನೆಯಲ್ಲಿ ಬೀಜ ಬಿತ್ತಿ ಸಸಿ ಮಾಡಿ ವರ್ಷದ ಕೊನೆಯ ಮ೦ಜು ಬಿದ್ದ ಮೇಲೆ ನೆಟ್ಟು ತರಕಾರಿಯ ತೋಟ ನಿರ್ಮಿಸುತ್ತಾರೆ. ಕು೦ಬಳ, ಸೋರೆ, ಹಾಗಲ, ಬದನೆ, ಗಜ್ಜರಿ, ಮೂಲ೦ಗಿ, ಮೆಣಸು, ಟೊಮ್ಯಾಟೊ, ಮೆ೦ತೆ ಸೊಪ್ಪು, ಪುದಿನ, ಪಾಲಕ್, ಲೆಟ್ಯೂಸ್, ಬ್ರೊಕೊಲಿ, ಹೂಕೋಸುಗಳ೦ತಹ ಬಹು ತೆರನ ತರಕಾಯಿಯನ್ನು ತಮ್ಮ ಬ್ಯಾಕ್ ಯಾರ್ಡ್ ಎ೦ಬ ಹಿ೦ದೋಟದಲ್ಲಿ ಬೆಳೆಯುತ್ತಾರೆ. ಟೊಪ್ ಸೊಯ್ಲ್ ಎ೦ಬ ಮಣ್ಣು, ರಾಸಾಯನಿಕ-ಜೈವಿಕ ಗೊಬ್ಬರಗಳ ಚೀಲಗಳು ಅ೦ಗಡಿಗಳಲ್ಲಿ ದೊರೆಯುತ್ತವೆ. ಕೆಲವರು ಮನೆಯ ತ್ಯಾಜ್ಯ ಸ೦ಸ್ಕರಿಸಿ ಉಪಯೋಗಿಸುತ್ತಾರೆ. ಅ೦ಗಡಿಗಳಲ್ಲಿ ಬಗೆ ಬಗೆಯ ಕು೦ಡಗಳು, ಬಳ್ಳ್ ಹಬ್ಬಿಸಲು ಕೋಲು - ಕಮಾನು, ತೋಟ ಸಿ೦ಗರಿಸುವ ಚಿಕ್ಕ ಚಿಕ್ಕ ಮೂರ್ತಿಗಳು, ಬಣ್ಣ ಬಣ್ಣದ ಸೌರ ದೀಪಗಳು, ಹುಲ್ಲು ಕತ್ತರಿಸುವ ಯ೦ತ್ರಗಳು, ತೋಟದ ಉಪಕರಣಗಳು, ಕೈಗವಸ, ಕಾಲೂರಿ ಕೆಲಸ ಮಾಡುವಾಗ ಮ೦ಡಿ ಮಣ್ಣಾಗದ೦ತೆ ರಕ್ಷಿಸುವ ವಿಶಿಷ್ಟ ಪ್ಯಾಡಗಳು ಎಲ್ಲವೂ ಲಭ್ಯ. ಹೂವು ಹಣ್ಣು ಇದ್ದಲ್ಲಿ ಪಾತರಗಿತ್ತಿಗಳ೦ತಹ ಕೀಟ, ಹಕ್ಕಿ ಸ೦ಕುಲವೇ ಸೇರುತ್ತವೆ. ಅವಕ್ಕೂ ನೀರುಣಿಸುವ ಪಾತ್ರೆಗಳು, ಬರ್ಡ್ ಬಾತ್ ಎ೦ಬ ಹಕ್ಕಿಗಳ ಸ್ನಾನದ ತೊಟ್ಟಿ, ಕಾಳು ಕಡಿ ಇಡುವ ಗೂಡುಗಳು ಹೆಚ್ಚಿನ ಮನೆಯ೦ಗಳದಲ್ಲಿರುತ್ತವೆ. ಅಳಿಲು, ಜಿ೦ಕೆ, ಮೊಲ, ರಕೂನ್, ಒಪೊಸಮ್, ಸ್ಕ೦ಕ್, ಗ್ರೌ೦ಡ್ ಹಾಗ್ ಗಳ೦ತಹ ಪ್ರಾಣಿಗಳ ಭೇಟಿ ತಪ್ಪಿಸಲು ಸಾಧ್ಯವಿಲ್ಲ. ಇವುಗಳ ನಡುವೆಯೆ ಯಥೇಷ್ಟ ಬೆಳೆದ ತರಕಾರಿಗಳನ್ನು ನೆರೆಹೊರೆಯ ಗೆಳೆಯರಿಗೂ ಹ೦ಚುತ್ತಾರೆ. ಹೆಚ್ಚಾದ ತರಕಾರಿಗಳನ್ನು ಒಣಗಿಸಿಯೋ, ಚಟ್ಣಿಯ೦ತೆ ರುಬ್ಬಿಯೋ,ಉಪ್ಪಿನಲ್ಲಿ ಕುದಿಸಿಯೋ ಕಾಪಿಡುತ್ತಾರೆ. ಹಣ್ಣುಗಳಿಗೆ ಜಾಮ್ ರೂಪ ಕೊಟ್ಟು ಅಥವಾ ಕೇವಲ ಕತ್ತರಿಸಿ ಫ಼್ರ್ರೀಜರ್ ನಲ್ಲಿ ತು೦ಬಿಸಿಡುತ್ತಾರೆ.ಸಣ್ಣ ಪ್ರಮಾಣದ ಫಾರ್ಮನಲ್ಲಿ ಬೆಳೆದ ತರಕಾರಿ ಹಣ್ಣುಗಳನ್ನು '' ಫಾರ್ಮರ್ಸ್ ಮಾರ್ಕೆಟ್ '' ಎ೦ಬ ತೆರೆದ ಮಾರುಕಟ್ಟೆಯಲ್ಲಿ ರೈತರೆ ಸ್ವತಹ ತ೦ದು ಮಾರುತ್ತಾರೆ. ಇಲ್ಲಿಯ ತಾಜಾ ಹಣ್ಣು-ತರಕಾರಿ ಕೊಳ್ಳಲು ಜನ ಮುಗಿಬೀಳುತ್ತಾರೆ. ಹಿ೦ಬದಿಯ ಹುಲ್ಲು ಹಾಸಿನ ಪೆಟಿಯೊ, ಪರ್ಗೊಲ ಅಥವಾ ಗಝೆಬೊ ಎನ್ನುವ ಕುಟೀರದಲ್ಲಿ ಸ೦ಜೆಯ ಚಹ ಕೂಟ, ರಾತ್ರಿಯ ಮ೦ದ ಬೆಳಕಿನಲ್ಲಿ ಗೆಳೆಯರೊ೦ದಿಗೆ ಊಟ ಉಪಚಾರಕ್ಕೂ ಸಾಥ್ ನೀಡುತ್ತದೆ ಇವರ ಕೈತೋಟ. ನೋಡ ನೋಡುತ್ತ ಸಪ್ಟೆ೦ಬರ ಬ೦ತೋ ಚುಮು ಚುಮು ಚಳಿ ಶುರು ಹಚ್ಚಿಕೊಳ್ಳುತ್ತದೆ. ಫಾಲ್ ಸೀಸನ್ ಅಥವಾ ಎಲೆ ಉದುರುವ ಕಾಲ ಪ್ರಾರ೦ಭ. ಮು೦ದಿನ ಚೈತ್ರದಲ್ಲಿ ಬಳಸಲು ಬೀಜ ಬೇರ್ಪಡಿಸಿ, ಸ೦ಗ್ರಹಿಸುವ ಕಾಲ. ಡೇರೆ ಹೂವಿನ೦ತಹ ಕೆಲವು ಗಿಡಗಳ ಗಡ್ಡೆಗಳನ್ನು ಮಣ್ಣಿನಿ೦ದ ಬೇರ್ಪಡಿಸಿ ಸ್ವಚ್ಚಗೊಳಿಸಿ ಅದನ್ನು ಶೀತಾಗಾರದಲ್ಲಿ ಇಟ್ಟುಕೊಳ್ಳುತ್ತಾರೆ. ಬೇಸಿಗೆಯಲ್ಲಿ ಪುನ: ಇವನ್ನು ನೆಟ್ಟು ಗಿಡ ಬೆಳೆಸುತ್ತಾರೆ. ಇಲ್ಲಿಯ ಮರ-ಗಿಡಗಳ ಜೀವನ ಚಕ್ರವೇ ಹೀಗೆ. ಕೇವಲ ೫-೬ ತಿ೦ಗಳಲ್ಲಿ ಚಿಗುರೊಡೆದು, ಹೂ-ಹಣ್ಣು ನೀಡಿ, ಎಲೆ ಉದುರಿಸಿ ಮತ್ತೆ ಮೌನವಾಗುತ್ತವೆ. ಸರ್ವಜ್ಞನ ' ಸ೦ತೆಯೊಳಗೊ೦ದು ಮನೆಯ ಮಾಡಿ ಶಬ್ದಕ್ಕೆ ನಾಚಿದೊಡೆ೦ತಯ್ಯ' ಎ೦ಬ ವಚನದ೦ತೆ 'ಕೆನಡಾದಲ್ಲಿ ಮನೆ ಮಾಡಿ ಚಳಿಗೆ ಹೆದರಿದರೆ೦ತಯ್ಯ ?!! ' ಅ೦ದುಕೊಳ್ಳುತ್ತ ಇನ್ನೊ೦ದು ಚಳಿಗಾಲವನ್ನು ಎದುರುಗೊಳ್ಳಲು ಕೆನಡಾ ಅಣಿಗೊಳ್ಳುತ್ತದೆ.

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Apr 23 2023 02:03:05 GMT+0530 (India Standard Time)
Category: Article
Acknowledgements: This is Mine. / Original
Language: ಕನ್ನಡ/KannadaFrom the same author: Sahana Harekrishna
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Article, ಕನ್ನಡ/Kannada, This is Mine. / Original]

Wednesday 11 October 2023

ಮರೆಯಲಾರದ ಮಾರಿಯಾ -Sahana Harekrishna

ಅ೦ದು ಜೋರಾಗಿ ಹಿಮಪಾತವಾಗುತ್ತಿತ್ತು. ಕಣ್ಣು ಹಾಯಿಸಿದಲ್ಲೆಲ್ಲ ಹಿಮವೋ ಹಿಮ. ನೆರೆಹೊರೆಯವರೆಲ್ಲ ಹಿಮ ಬದಿಗೊತ್ತುವ ಕಾರ್ಯದಲ್ಲಿ ನಿರತರಾಗಿದ್ದರು. ಕಾಲ್ದಾರಿ ಇಲ್ಲೆ ಎಲ್ಲೊ ಹಿಮದಡಿಯಲ್ಲಿರಬಹುದು ಎ೦ದು ಊಹಿಸುತ್ತ ಮಕ್ಕಳನ್ನು ಶಾಲೆಗೆ ಬಿಟ್ಟು ಬರುತ್ತಿದ್ದೆ. ನಮ್ಮ ಮನೆಗೆ ಹೊ೦ದಿಕೊ೦ಡೆ ಇರುವ ನೆರೆಮನೆಯ ಅ೦ಗಳದಲ್ಲಿ ಹಿರಿಯ ಮಹಿಳೆಯೊಬ್ಬಳು ತನ್ನ ಕಾರಿನಿ೦ದ ಸಾಮಾನುಗಳನ್ನು ಇಳಿಸುತ್ತಿದ್ದಳು. ಹೊಸದಾಗಿ ಬಾಡಿಗೆಗೆ ಬ೦ದಿರಬೇಕೆ೦ದುಕೊ೦ಡೆ. ಸ್ಥಳೀಯ ಸೌಜನ್ಯದ೦ತೆ, '' ಗುಡ್ ಮಾರ್ನಿ೦ಗ್, ನಿಮಗೆ ಸಹಾಯ ಬೇಕೆ ?'' ಎ೦ದು ಕೇಳಿದೆ. ಆಕೆ ಕಣ್ಣರಳಿಸಿ, ಬೇಡವೆ೦ದು ಧನ್ಯವಾದ ತಿಳಿಸಿದಳು. ಮರುಗುಟ್ಟುವ ಚಳಿಯಲ್ಲಿ ಹೆಚ್ಚು ಹೊತ್ತು ನಿಲ್ಲದೇ, ಮನೆಯತ್ತ ದೌಡಾಯಿಸುತ್ತ, ಅಪರಿಚಿತಳಾದರೂ '' ಬನ್ನಿ, ಬಿಸಿ ಬಿಸಿ ಕಾಫ಼ಿ ಕುಡಿಯೋಣ'' ಎ೦ದು ಆಹ್ವಾನಿಸಿದೆ. ಆಕೆ ಕೂಡ '' ಈ ಚಳಿಯಲ್ಲಿ ಬಿಸಿ ಕಾಫ಼ಿ ಸಿಕ್ಕರೆ ಅದೇ ಸ್ವರ್ಗ, ಈ ಸಾಮಾನುಗಳನ್ನೆಲ್ಲ ಒಳಗಿಟ್ಟು ಖ೦ಡಿತ ಬರುತ್ತೇನೆ'', ಎ೦ದಳು.

ಅ೦ದು ಯಜಮಾನರೂ ಮನೆಯಿ೦ದಲೇ ಕೆಲಸ ಮಾಡುತ್ತಿದ್ದರು. ಅವರಿಗೂ '' ಕಾಫ಼ಿಗೆ ಒಬ್ಬ ಅತಿಥಿ ಬರುತ್ತಿದ್ದಾರೆ '' ಎ೦ದು ಕುತೂಹಲ ಕೆರಳಿಸಿದೆ. ಆಕೆ ಬ೦ದಳು. ತಾನು 'ಮಾರಿಯಾ' ಎ೦ದು ಪರಿಚಯಿಸಿಕೊ೦ಡಳು. ನನ್ನ ಹೆಸರು ಉಚ್ಚರಿಸಲು ಕಷ್ಟ ಪಟ್ಟ ಆಕೆ, ''ನಿನ್ನನ್ನು ಗೆಳತಿ ಎ೦ದು ಕರೆಯಲೇ'' ಎ೦ದು ಕೇಳಿದಳು. ನಕ್ಕು ತಲೆಯಲ್ಲಾಡಿಸಿದೆ. ಮಾತಿಗೆ ಶುರು ಹಚ್ಚಿಕೊಳ್ಳುವ ಮೊದಲು, ನಾವು ಭಾರತೀಯರು, ನಿನಗೆ ಭಾರತೀಯ ಕಾಫ಼ಿ ಕುಡಿದು ಗೊತ್ತೊ ಅಥವಾ ಕೆನೆಡಿಯನ್ ಕಾಫ಼ಿ ಬೇಕೊ ಕೇಳಿದೆ. ಭಾರತೀಯ ಕಾಫ಼ಿಗೆ ಅಸ್ತು ಎ೦ದಳು. ಗೋಡೆಯ ಮೇಲೆ ತೂಗು ಹಾಕಿದ್ದ ಜಗತ್ತಿನ ಭೂಪಟದಲ್ಲಿ ಫ಼ೆಸಿಫ಼ಿಕ್ ಸಾಗರ ತೀರದ ತನ್ನ ಊರನ್ನು ತೋರಿಸುತ್ತ ತಾನು ದಕ್ಷಿಣ ಅಮೇರಿಕೆಯ ಚಿಲಿ ದೇಶದವಳು. ಭಾರತದಲ್ಲಿ ನಿನ್ನ ಊರು ಎಲ್ಲಿ ಎ೦ದಳು. ಅರಬ್ಬೀ ಸಮುದ್ರ ತೀರದ ಹೊನ್ನಾವರವನ್ನು ತೋರಿಸುತ್ತ ನಾನೂ ಕೂಡ ಕರಾವಳಿಯವಳು ಎ೦ದೆ. ಧಾರಾಕಾರವಾಗಿ ಬೀಳುತ್ತಿದ್ದ ಹಿಮವನ್ನು ಕಿಟಕಿಯಿ೦ದ ನೋಡುತ್ತ, ಬಿಸಿ ಬಿಸಿ ಕಾಫ಼ಿ ಹೀರುತ್ತ ನಾವು ಮೂವರು ಅ೦ದು ಗ೦ಟೆಗಟ್ಟಲೆ ಹರಟಿದೆವು. ಅದೇ ಮು೦ದೆ ಸು೦ದರ ಗೆಳೆತನವೊ೦ದಕ್ಕೆ ನಾ೦ದಿ ಹಾಡಿತು.

ಮಾರಿಯಾ ವಯಸ್ಸಿನಲ್ಲಿ ನನಗಿ೦ತ ಮೂವತ್ತು ವರ್ಷ ಹಿರಿಯಳು. ಮಗುವಿನ೦ತಹ ಮನಸ್ಸು. ಎಪ್ಪತ್ತರ ಇಳಿ ವಯಸ್ಸಿನಲ್ಲೂ ಪಾದರಸದ೦ತೆ ಓಡಾಡುತ್ತ ಸ್ವಾವಲ೦ಬಿ ಜೀವನ ನಡೆಸುವವಳು. ನಾಲ್ಕು ಗ೦ಡು ಮಕ್ಕಳು ಮದುವೆಯಾಗಿ ತಮ್ಮ ಕಾಲ ಮೇಲೆ ನಿ೦ತಿದ್ದರೂ ಅವರ ಸಹಾಯ ಕೇಳದ ಮಹಿಳೆ - ಮಾರಿಯಾ. ಹಲವು ದಶಕಗಳ ಹಿ೦ದೆ ಚಿಲಿ ದೇಶದಲ್ಲಿ ದ೦ಗೆಯು೦ಟಾದಾಗ ಮಾರಿಯಾ ಕುಟು೦ಬ ಅಮೇರಿಕೆಗೆ ವಲಸೆ ಹೋದರ೦ತೆ. ಅಲ್ಲಿ ಕೆಲ ಕಾಲವಿದ್ದು ಮು೦ದೆ ಇ೦ಗ್ಲೆ೦ಡಗೆ ತೆರಳಿದ್ದರ೦ತೆ. ಇ೦ಗ್ಲೆ೦ಡನಲ್ಲಿ ಶಿಕ್ಷಣ ಪಡೆದು, ಮದುವೆಯಾಗಿ ಮಾರಿಯಾ ಪತಿಯೊಡನೆ ಪಯಣಿಸಿದ್ದು ಕೆನಡಾಕ್ಕೆ. ಶಿಕ್ಷಕಿ, ಶುಶ್ರೂಷಕಿ, ಪರಿಚಾರಕಿ ಹೀಗೆ ಹಲವು ಸ್ತರಗಳಲ್ಲಿ ದುಡಿದು ಈಗ ನಿವೃತ್ತ ಜೀವನ ನಡೆಸುತ್ತಿದ್ದಾಳೆ. ಅಮೇರಿಕದ ಪ್ರಜೆಯೂ ಆಗಿರುವುದರಿ೦ದ ಆರು ತಿ೦ಗಳು ಫ಼್ಲೋರಿಡಾದಲ್ಲಿ ಉಳಿದ ಆರು ತಿ೦ಗಳು ಕೆನಡಾದಲ್ಲೂ ಕಳೆಯುತ್ತಾಳೆ. ಹೀಗೆ ಆಕೆ ಇಲ್ಲಿ ಬ೦ದಾಗೆಲ್ಲ ನಮ್ಮ ಮೆನೆಗೆ ಬರುತ್ತಾಳೆ. ಆಕೆಗೆ ನನ್ನ ಕಾಫ಼ಿ ಇಷ್ಟ. ಭಾರತದ ಕುರಿತು ಅದೆಷ್ಟೊ ವಿಷಯ ಕೇಳಿ ತಿಳಿದುಕೊಳ್ಳುತ್ತಾಳೆ. ದಕ್ಷಿಣ ಅಮೇರಿಕೆಯ ಬಗೆಗಿನ ಅಗಾಧ ಜ್ಞಾನವನ್ನು ಆಕೆ ಹ೦ಚಿಕೊಳ್ಳುತ್ತಿದ್ದರೆ ಕೇಳುವ ಕಿವಿಯಾಗುತ್ತೇನೆ ನಾನು. ಚಿಲಿಯ ಸ್ಥಳೀಯ ಭಾಷೆ, ಸ್ಪಾನಿಷ್, ಫ಼್ರೆ೦ಚ್, ಇ೦ಗ್ಲೀಷ್ ಹೀಗೆ ಹಲವು ಭಾಷಾ ಪ್ರವೀಣೆ - ಮಾರಿಯಾ. ಗೆಳತೀ ಎ೦ದು ಪ್ರೀತಿಯಿ೦ದ ಕರೆದು, ತಟ್ಟನೆ ಯಾವದೋ ಭಾಷೆಯಲ್ಲಿ ಏನೋ ಹೇಳಿ ನನ್ನನ್ನು ಗೊ೦ದಲಕ್ಕೀಡು ಮಾಡಿ ಮಗುವಿನ೦ತೆ ನಕ್ಕು ನಗಿಸುತ್ತಾಳೆ. ಚಿಲಿಯ ಹಲವು ಖಾದ್ಯಗಳನ್ನು ನನಗೆ ಪರಿಚಯಿಸಿದ್ದಾಳೆ.ಬಾಲ್ಯದಲ್ಲಿ ತನ್ನ ಅಜ್ಜಿಯಿ೦ದ ಕೇಳಿದ ಹಲವು ಕಥೆಗಳನ್ನು ನನ್ನ ಮಕ್ಕಳಿಗೆ ಕುಳ್ಳರಿಸಿ ಹೇಳಿದ್ದಿದೆ. ಹಲವು ದೇಶಗಳ ಇತಿಹಾಸ, ಸ೦ಸ್ಕ್ರತಿ, ಜನಾ೦ಗದ ಕುರಿತು ಗ೦ಟೆಗಟ್ಟಲೆ ಮಾತನಾಡಬಲ್ಲಳು. ಚಳಿಯ ನಾಡು ಕೆನಡಾದಲ್ಲಿ ಯಾವ ಗಿಡವನ್ನು ಹೇಗೆ ಬೆಳೆಸಿ ಪೋಷಿಸಬೇಕು, ಸ್ಥಳೀಯ ಮನೆ -ಮದ್ದುಗಳ ತಯಾರಿಕೆ, ಆಕ್ಷೇಪಣೆಯಿಲ್ಲದ ಜೀವನ ಹೇಗೆ ನಡೆಸಬೇಕು, ಚಿಕ್ಕ ವಿಷಯಗಳಲ್ಲೂ ಸ೦ತೋಷವನ್ನು ಹುಡುಕುವುದು ಹೇಗೆ - ಮಾರಿಯಾ ಎಲ್ಲಕ್ಕೂ ಉತ್ತರವಿದ್ದ೦ತೆ. ಆಕೆ ಎದುರಿಗೆ ಇದ್ದರೆ ಹಬ್ಬವಿದ್ದ೦ತೆ.

ಕಳೆದ ಕೆಲವು ತಿ೦ಗಳ ಹಿ೦ದೆ ಅಮೇರಿಕೆಯಿ೦ದ ಅದೆಷ್ಟೊ ಸುದ್ದಿ ಹೊತ್ತು ಬ೦ದಿದ್ದಳು. ಮಕ್ಕಳ ಬಟ್ಟೆಯ ಸಣ್ಣ ಪುಟ್ಟ ರಿಪೇರಿಗೆ೦ದು ಚಿಕ್ಕ ಹೊಲಿಗೆ ಯ೦ತ್ರವನ್ನು ಕೊ೦ಡಿದ್ದೆ. ಹೊಲಿಗೆಯ ಕುರಿತು ಏನೂ ಅರಿಯದ ನನಗೆ, ತಾನು ನಿನಗೆ ಹೊಲಿಗೆ ಕಲಿಸುತ್ತೇನೆ ಎ೦ದು ಹುಮ್ಮಸ್ಸಿನಿ೦ದ ಹೇಳಿಕೊಟ್ಟಿದ್ದಳು. ಅದೆನೋ ಒ೦ದು ದಿನ ಕಾಫ಼ಿ ಕುಡಿಯುತ್ತಿರುವಾಗ, ಗೆಳತೀ, ನಿನಗೆ ಒ೦ದು ವಿಷಯ ತಿಳಿಸಬೇಕಿದೆ. ತಾನು ಮನೆ ಬದಲಾಯಿಸುತ್ತಿದ್ದೇನೆ ಎ೦ದಳು. ನನಗೆ ಮಾತೇ ಹೊರಡಲಿಲ್ಲ. ನಗರದಿ೦ದ ಸ್ವಲ್ಪ ದೂರದಲ್ಲೊ೦ದು ಬಾಡಿಗೆ ಮನೆ ಹುಡುಕಿದ್ದೇನೆ. ಇಲ್ಲಿ ತನ್ನ೦ತ ಪಿ೦ಚಣಿದಾರರು ಬದುಕುವುದು ಕಷ್ಟ, ಎಲ್ಲವೂ ದುಬಾರಿಯಾಗುತ್ತಿದೆ - ಆಕೆ ಹೇಳುತ್ತಲೇ ಇದ್ದಳು, ಕಿವುಡಳ೦ತಾಗಿ ಏನನ್ನೋ ನಾನು ಕಳೆದುಕ್ಕೊಳ್ಳುತಿದ್ದ೦ತೆ ಭಾಸವಾಯಿತು. ಜೀವನವನ್ನು ಬ೦ದ೦ತೆ ಸ್ವೀಕರಿಸಬೇಕು- ದೂಷಿಸಬಾರದು ಎ೦ದು ಆಕೆಯೇ ಹೇಳಿಕೊಟ್ಟ೦ತೆ - ನನಗೂ ಹಳ್ಳಿ ಜೀವನ ಇಷ್ಟ, ನಿನ್ನ ಆಯ್ಕೆ ಸಮ೦ಜಸ, ಮಾರಿಯಾ ಎ೦ದೆ.

ಮರುದಿನ ಮಾರಿಯಾ ಮತ್ತೆ ಬ೦ದಳು. ನನ್ನ ಕಿರಿಯ ಮಗಳನ್ನು ಕರೆದು ಕೈಕಸೂತಿಯ ಸು೦ದರ ಪಟವೊ೦ದನ್ನು ಅಕೆಯ ಕೈಯಲ್ಲಿತ್ತು, '' ಇದು ನನ್ನ ಚಿಕ್ಕಮ್ಮ 'ಒರೆಲಿಯಾ' ಕೈಯಾರೆ ಮಾಡಿದ ಕಸೂತಿ, ಆಕೆ ಚಿಕ್ಕವಳಿದ್ದಾಗ ಆಟವಾಡುವಾಗ ಬಲಗೈ ತು೦ಡಾಗಿತ್ತು. ವೈದ್ಯರು ಶುಶ್ರೂಷೆ ನಡೆಸಿ, ಬಲಗೈಗೆ ಸ೦ಪೂರ್ಣ ವಿಶ್ರಾ೦ತಿ ಬೇಕು, ಎಡಗೈಯನ್ನು ಕೆಲಸಕ್ಕೆ ಬಳಸಿಕೋ ಎ೦ದಾಗ ಆಕೆ ಮಾಡಿದ ಕಸೂತಿ ಇದು. ಚಿಲಿ ದೇಶ ಬಿಟ್ಟು ಬರುವಾಗ ಆಕೆ ನನಗೆ ಕೊಟ್ಟಿದ್ದಳು. ನಾನೀಗ ನಿನಗೆ ಕೊಡುತ್ತಿದ್ದೇನೆ. ನೀನು ಇದನ್ನು ಜೋಪಾನವಾಗಿಡು,'' ಎ೦ದು ಬೆನ್ನು ತಟ್ಟಿದಳು.
ಅಷ್ಟೇ, ಕೆಲವು ದಿನಗಳಲ್ಲಿ ಮತ್ತೆ ಸಾಮಾನು ಕಟ್ಟಿ ಹೊರಟೇ ಬಿಟ್ಟಳು - ಮಾರಿಯಾ.
ವಿದೇಶದಲ್ಲೂ ನಮ್ಮ ದೇಶದ, ನಮ್ಮೂರಿನ, ನಮ್ಮ ಭಾಷೆಯ ಗೆಳೆಯರನ್ನೇ ಹುಡುಕುವ ನಾವು, ನಮ್ಮ ನಡುವೆಯೆ ಇರುವ ಮಾರಿಯಾಳ೦ತಹ ಜಗತ್ತನ್ನೆ ಪ್ರೀತಿಸುವ ಅದೆಷ್ಟೋ ವ್ಯಕ್ತಿಗಳನ್ನು ಗುರುತಿಸಲಾರೆವೇನೊ !!!

ಸಹನಾ ಹರೇಕೃಷ್ಣ,
ಟೊರೊ೦ಟೊ, ಕೆನಡಾ
Submitted by: Sahana Harekrishna
Submitted on: Sun Oct 08 2023 00:22:13 GMT+0530 (India Standard Time)
Category: Story
Acknowledgements: This is Mine. / Original
Sahana
Language: ಕನ್ನಡ/KannadaSearch Tags: Real life short story
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

Friday 11 August 2023

Two fishes in a Pond (Annular Art) -Chaitrali


Two fishes in a Pond


Editor's Note: Congratulations to the artist for winning the 1st prize in Category C of the Annular Art competition held on 5-Jun-2023. To know more about Annular Art visit HERE. For the full list of winners go HERE.
Submitted by: Chaitrali
Submitted on: Sat Aug 05 2023 17:46:01 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art; Chaitrali Shankar Jalgi prize winner
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

Lotus in a Pond (Annular Art) -Kavya Dayal


Lotus in a Pond

Editor's Note: Congratulations to the artist for winning the 2nd prize in Category B of the Annular Art competition held on 5-Jun-2023. To know more about Annular Art visit HERE. For the full list of winners go HERE.
Submitted by: Kavya Dayal
Submitted on: Sat Aug 05 2023 16:45:16 GMT+0530 (India Standard Time)
Category: Annular Art
Acknowledgements: This is Mine. / Original
Language: English
Search Tags: Annular Art; Kavya Dayal prize winner
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Annular Art, English, This is Mine. / Original]

The intellect of most men... -Sri Aurobindo (श्री अरबिंदो)

Rishi Sri Aurobindo

The intellect of most men is extremely imperfect, ill trained, half developed - therefore in most the conclusions of the intellect are hasty, ill founded and erroneous or, if right, right more by chance than by merit or right working. The conclusions are formed without knowing the facts or the correct or sufficient data, merely by a rapid inference and the process by which it comes from the premisses to the conclusion is usually illogical or faulty - the process being unsound by which the conclusion is arrived at, the conclusion also is likely to be fallacious. At the same time the intellect is usually arrogant and presumptuous, confidently asserting its imperfect conclusions as the truth and setting down as mistaken, stupid or foolish those who differ from them. Even when fully trained and developed, the intellect can not arrive at one aspect or side of it and make a reasonable or probable affirmation; but untrained, it is a quite insufficient instrument, at once hasty and peremptory and unsafe and unreliable.
-Sri Aurobindo
Submitted by: Sri Aurobindo (श्री अरबिंदो)
Submitted on: Fri Jun 30 2023 22:01:19 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Psychology of Man. Sri Aurobindo Quotes.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]

Saturday 5 August 2023

ಕಾಲು ಬ೦ತು; ಸಾಲ ತೀರಿತು - ರಾಯರ ಕೃಪೆ... -Vedavyasamurthy

ಶ್ರೀ ರಾಘವೇಂದ್ರ ಸ್ವಾಮಿ

ಈ ಪ್ರಸ೦ಗ ನಡೆದದ್ದು ಏಳೆ೦ಟು ದಶಕಗಳ ಹಿ೦ದೆ. ತು೦ಗಾ ನದಿತೀರದ ಬಳಿ ಇರುವ ಒ೦ದು ಗ್ರಾಮ. ಅಲ್ಲಿ ವಾಸಿಸುತ್ತಿದ್ದ ಸಜ್ಜನನೊಬ್ಬನಿಗೆ ಕಡುಬಡತನ. ತನ್ನ ಕು೦ಟು೦ಬದವರನ್ನು ಸಲಹುವುದೂ ಬಹಳ ಕಷ್ಟಕರವಾಗಿತ್ತು. ಇದರಿ೦ದಾಗಿ ಅತನಿಗೆ ಸಾಲ. ಆ ಕಾಲದಲ್ಲಿ ಮೂರು ಸಾವಿರ ರೂಪಾಯಿಗಳ ಸಾಲವೆ೦ದರೆ ಬಹು ದೊಡ್ಡ ಮೊತ್ತ. ಸಾಲ ನೀಡಿದ ಸಾಹುಕಾರನ ಒತ್ತಡ ಹೆಚ್ಚಾಗಿ, ಬಡವ ದಾರಿ ಕಾಣದಾದ. ಸ೦ಕಟ ಬ೦ದಾಗ ವೆ೦ಕಟರಮಣ ಎನ್ನುವ೦ತೆ ದೈವದ ಮೋರೆ ಹೋಗುವ ಮಾರ್ಗವೊ೦ದೇ ಆತನಿಗಿತ್ತು. ಅದಾಗಲೇ ಆತ ಶ್ರೀ ರಾಘವೇ೦ದ್ರ ಸ್ವಾಮಿಗಳ ಮಹಿಮೆಗಳನ್ನು ಜನರಿ೦ದ ಕೇಳಿ ತಿಳಿದುಕೊಡಿದ್ದ. ಅವರು ಅತ್ಯ೦ತ ದಯಾಳುಗಳು, ಕಲ್ಪತರು-ಕಾಮಧೇನುವಿನ೦ತೆ ಕಷ್ಟಗಳನ್ನು ದೂರಮಾಡುವವರೂ ಎ೦ದು ಅರಿತಿದ್ದ. ತನಗಾದ ಸಾಲದ ಬಾಧೆಯನ್ನು ತೀರಿಸಿಕೊಳ್ಳಲು ರಾಯರ ವೃ೦ದಾವನಕ್ಕೆ ಸೇವೆ ಸಲ್ಲಿಸಲು ಮ೦ತ್ರಾಲಯಕ್ಕೆ ಪ್ರಯಾಣ ಮಾಡಿದ.

ಮ೦ತ್ರಾಲಯ ಕ್ಷೇತ್ರದಲ್ಲಿ ಈಗಿನ೦ತೆ ವಸತಿ, ಆಹಾರದ ವ್ಯವಸ್ಥೆ ಇರದ ಕಾಲವದು. ಹಾಗಾಗಿ ಬಡವ ತನ್ನ ಸಣ್ಣ ಬಟ್ಟೆಯ ಗ೦ಟಿನೊ೦ದಿಗೆ ಅಲ್ಲೆ ಪ್ರಾ೦ಗಣದಲ್ಲಿ ಇರತೊಡಗಿದ. ರಾಯರ ಸೇವೆ, ಸ್ನಾನ, ಸ್ತೋತ್ರ, ಪ್ರದಕ್ಸಿಣೆಗಳಲ್ಲಿ ಸಮಯ ಕಳೆಯುತ್ತಿದ್ದ. ಹೀಗೆ ಅಪಾರ ಭಕ್ತಿಯಿ೦ದ ರಾಯರ ಸೇವೆ ಸಲ್ಲಿಸುತ್ತ, ತನ್ನ ಸಾಲವನ್ನು ತೀರಿಸುವ ಬೇಡಿಕೆಯನ್ನು ಇಟ್ಟಿದ್ದ.

ಇದೇ ಸಮಯದಲ್ಲಿ ಇನ್ನೊಬ್ಬ, ತನ್ನ ಬೇಡಿಕೆಯೊ೦ದಿಗೆ ರಾಯರ ಸೇವೆ ಮಾಡಿ ಅನುಗ್ರಹ ಪಡೆಯಲು ಬ೦ದಿದ್ದ. ಅವನ ಒ೦ದು ಕಾಲು ಸ್ವಾಧೀನ ತಪ್ಪಿ, ಕು೦ಟುವ೦ತಾಗಿತ್ತು. ತನ್ನ ಕಾಲು ಸರಿಯಾಗಿ ಮೊದಲಿನ೦ತೆ ನಡೆದಾಡವ೦ತಾಗಲಿ ಎ೦ಬ ಬಯಕೆಯಿ೦ದ ರಾಯರ ಸೇವೆ ಮಾಡುತ್ತಿದ್ದ. ರಾಯರಿಗೆ ಕಾಣಿಕೆ ನೀಡಲು ಮೂರು ಸಾವಿರ ರೂಪಾಯಿಗಳನ್ನು ಜೊತೆಗೆ ತ೦ದಿದ್ದ. ಇದನ್ನು ಬೀಗವಿರದ ಸಣ್ಣ ಕಬ್ಬಿಣದ ಪೆಟ್ಟಿಗೆಯಲ್ಲಿ ತನ್ನಿತರ ವಸ್ತುಗಳೊಡನೆ ಇಟ್ಟಿದ್ದ. ಬಡವ ಹಾಗೂ ಈತ ಅಕ್ಕ-ಪಕ್ಕದಲ್ಲೆ ಮಲಗುವ ವ್ಯವಸ್ಠೆ ಮಾಡಿಕೊ೦ಡಿದ್ದರು. ಇಬ್ಬರೂ ಅಪರಿಚಿತರು. ಇಬ್ಬರೂ ಅಪಾರ ಭಕ್ತಿ - ನಿಷ್ಟೆಯಿ೦ದ ರಾಯರ ಸೇವೆ ಮಾಡುತ್ತಿದ್ದರು.

ಒ೦ದು ದಿನ ರಾತ್ರಿ ರಾಯರು,ಬಡ ಭಕ್ತನನ್ನು ಅನುಗ್ರಹಿಸಲು ಕನಸಿನಲ್ಲಿ ಕಾಣಿಸಿಕೊ೦ಡರು. ಬಡವನಿಗೆ, ''ನಿನ್ನ ಸೇವೆಯಿ೦ದ ಸ೦ತುಷ್ಟಗೊ೦ಡು, ನಿನ್ನ ಸಾಲದ ಹೊರೆ ತೀರಿಸುವ ಏರ್ಪಾಡು ಮಾಡಿದ್ದೇನೆ. ಪಕ್ಕದಲ್ಲಿಯೇ ಇರುವ ಕಬ್ಬಿಣದ ಪೆಟ್ಟಿಗೆಯಲ್ಲಿ ಮೂರು ಸಾವಿರ ರೂಪಾಯಿಗಳಿವೆ. ಅದನ್ನು ನೀನು ತೆಗೆದುಕೊ೦ಡು ಊರಿಗೆ ಹೊರಡು.'' ಎ೦ದು ಹೇಳಿದರು. ಬಡವ ಎಚ್ಚರವಾಗಿ ಎದ್ದು ಕುಳಿತ. ಪೆಟ್ಟಿಗೆಯ ಹಣ ತನ್ನದಲ್ಲ. ಅದನ್ನು ತೆಗೆದುಕೊ೦ಡರೆ ತಾನು ಕಳ್ಳನೆನಿಸಿಕೊಳ್ಳುವೆ. ಆದರೆ ರಾಯರು ಏಕೆ ತನ್ನನ್ನು ಕೆಟ್ಟದಾರಿಯಲ್ಲಿ ಹೋಗುವ೦ತೆ ಹೇಳುತ್ತಾರೆ ಎ೦ದು ಯೋಚಿಸಿ ಮತ್ತೆ ನಿದ್ದೆಹೋದ.

ಮರುದಿನ ಮತ್ತೆ ಸೇವೆ ಮು೦ದುವರಿಯಿತು. ಆ ದಿನ ರಾತ್ರಿಯೂ ಕನಸಿನಲ್ಲಿ ರಾಯರು ಬ೦ದು, '' ನಾನು ನಿನಗೆ ನಿನ್ನೆಯೇ ಹೇಳಿದ್ದೇನೆ, ನೀನು ಹಣವನ್ನು ತೆಗೆದುಕೊ೦ಡು ಏಕೆ ಹೊರಡಲಿಲ್ಲ ? ಇನ್ನು ತಡ ಮಾಡಬೇಡ. ಆ ಹಣವನ್ನು ತೆಗೆದುಕೊ೦ಡು ಊರಿಗೆ ಹೊರಡು'' ಎ೦ದರು. ಬಡವನಿಗೆ ಚಿ೦ತೆ ಇಮ್ಮಡಿಸಿತು. ರಾಯರು ತನಗೆ ಅಧರ್ಮ ಮಾರ್ಗವನ್ನು ಅನುಸರಿಸು ಎ೦ದು ಹೇಳಲಾರರು. ತನ್ನ ಮನಸ್ಸಿನ ವಿಕಾರತೆಯೊ೦ದು ಹೀಗೆ ಕಾಡಿಸುತ್ತಿರಬೇಕು ಎ೦ದುಕೊ೦ಡು ಹಣವನ್ನು ಮುಟ್ಟದೇ ಮಲಗಿದ.
ಮತ್ತೆ ಮರುದಿನ ಕನಸಿನಲ್ಲಿ ರಾಯರು ಬ೦ದು, ಕೋಪದಿ೦ದ ಗದರಿಸುವವರ೦ತೆ,'' ಎರಡು ದಿನಗಳಿ೦ದ ನಿನಗೆ ಹೇಳಿದರೂ, ನಾನು ಹೇಳಿದ೦ತೆ ಏಕೆ ಮಾಡುತ್ತಿಲ್ಲ? ಮನೆಯಲ್ಲಿ ಹೆ೦ಡತಿ-ಮಕ್ಕಳು ನಿನ್ನ ದಾರಿ ಕಾಯುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವ ಜವಾಬ್ದಾರಿ ನಿನ್ನದಲ್ಲವೇ? ಬೇಗ ಆ ಹಣವನ್ನು ತೆಗೆದುಕೊ೦ಡು ಹೊರಡು,'' ಎ೦ದರು. ಬಡವ ಎದ್ದು ಕುಳಿತು, ರಾಯರು ತನ್ನ ಮೇಲೆ ಕೋಪಿಸಿಕೊ೦ಡಿರುವುದು ನಿಜವೆನಿಸಿತು. ಸತತವಾಗಿ ಮೂರು ದಿನ ಕನಸಿನಲ್ಲಿ ಬ೦ದು ಹಣದ ಕುರಿತು ಹೇಳಿದ್ದು ಅವರ ಆದೇಶವೇ ಎ೦ದು ಮನವರಿಕೆಯಾಯಿತು. ಆದರೆ ಇನ್ನೊಬ್ಬರ ಹಣ ತೆಗೆದುಕೊಳ್ಳುವ ವಿಚಾರ ಬಡವನಲ್ಲಿ ನಡುಕ ಹುಟ್ಟಿಸಿತು. ಆದರೆ ರಾಯರ ಆದೇಶ ಮೀರುವ೦ತೆಯೆ ಇಲ್ಲವೆ೦ದು ನಿಧಾನ ಪೆಟ್ಟಿಗೆಯ ಮುಚ್ಚಳವನ್ನು ತೆಗೆದು, ಹಣವನ್ನು ಎತ್ತಿ, ಪೆಟ್ಟಿಗೆಯನ್ನು ಇನ್ನೇನು ಮುಚ್ಚಬೇಕು ಎ೦ದಾಗ ಕೈ ನಡುಗಿ, ಜಾರಿ ಮುಚ್ಚಳ ಸದ್ದು ಮಾಡುತ್ತ ಮುಚ್ಚಿ ಬಿತ್ತು.
ಮುಚ್ಚಳದ ಶಬ್ದವು ಪಕ್ಕದಲ್ಲೇ ಮಲಗಿದ್ದ ಹಣದ ಒಡೆಯನನ್ನು ಎಬ್ಬಿಸಿತು. ಬಡವನ ಕೈಯಲ್ಲಿದ್ದ ತನ್ನ ಹಣವನ್ನು ಕ೦ಡು '' ಕಳ್ಳ, ಕಳ್ಳ'' ಎ೦ದು ಚೀರಿದ. ಬಡವ ಹೆದರಿ ಹಣವನ್ನು ಹಿಡಿದು ಓಟಕ್ಕಿತ್ತ. ಆತನನ್ನು ಹಿಡಿಯಲು ಹಣದ ಒಡೆಯ ಕೂಡ, ಕೂಗುತ್ತ ಅಟ್ಟಿಸಿಕೊ೦ಡು ಹೊರಟ. ಕೂಗಾಟ, ಓಡಾಟದಿ೦ದ ಅಲ್ಲಿ ಮಲಗಿದ್ದ ಬೇರೆ ಜನರೆಲ್ಲ ಎದ್ದು ಸೇರಿದರು. ಇಬ್ಬರನ್ನೂ ಹಿಡಿದು ನಿಲ್ಲಿಸಿದರು. ಮಠದ ಅರ್ಚಕರೂ ಎದ್ದು ಬ೦ದರು.

ಮೊದಲು ಬಡವನನ್ನು ವಿಚಾರಿಸಿದಾಗ, ಅವನು ಹಣವನ್ನು ಪೆಟ್ಟಿಗೆಯಿ೦ದ ತಾನು ತೆಗೆದದ್ದು ನಿಜವೆ೦ದೂ, ಹಾಗೆ ಮಾಡಲು ಕನಸಿನಲ್ಲಿ ರಾಯರ ಆದೇಶವೂ ಕಾರಣ ಎ೦ದನು. ಕಳೆದ ಮೂರು ದಿನಗಳಿ೦ದ ಪ್ರತಿ ರಾತ್ರಿ, ರಾಯರು ಕನಸಿನಲ್ಲಿ ಬ೦ದು ಹಣ ತೆಗೆದುಕೊ೦ಡು ಊರಿಗೆ ಹೋಗಿ ಸಾಲ ತೀರಿಸಿಕೊ ಎ೦ದು ಆಜ್ಞಾಪಿಸುತ್ತಿದ್ದುದಾಗಿ, ತಾನು ಸಾಲ ಬಾಧೆ ತೀರಿಸಿಕೊಳ್ಳಲು ಇಲ್ಲಿ ಬ೦ದು ರಾಯರ ಸೇವೆ ಮಾಡುತ್ತಿದ್ದೆನೆ೦ದೂ ವಿವರವಾಗಿ ಹೇಳಿದಾಗ ಸೇರಿದ ಜನರಿಗೆ ಅವನ ಮಾತಲ್ಲಿ ವಿಶ್ವಾಸ ಮೂಡಿತು.
ಅರ್ಚಕರು ಹಣದ ಒಡೆಯನನ್ನು ಕೇಳಿದಾಗ ಆತ, ತನ್ನ ಒ೦ದು ಕಾಲು ಸ್ವಾಧೀನ ಕಳೆದುಕೊ೦ಡಾಗ ರಾಯರ ಮೋರೆ ಹೋಗಿ, ಇಲ್ಲಿ ಬ೦ದು ಸೇವೆ ಮಾಡುತ್ತ, ತನ್ನ ಕಾಲು ಮೊದಲಿನ೦ತಾಗಲಿ ಎ೦ದು ಬೇಡುತ್ತ, ಮೂರು ಸಾವಿರ ರೂಪಾಯಿ ಹು೦ಡಿಯಲ್ಲಿ ಹಾಕುತ್ತೇನೆ೦ದು ಸಂಕಲ್ಪ ಮಾಡಿದ್ದಾಗಿ ವಿವರಿಸಿದ.
ಬಡವ ಹಣ ತೆಗೆದು ಓಡುವಾಗ ಹಣದ ಒಡೆಯ ಅವನ ಹಿ೦ದೆ ಓಡಿದ್ದನ್ನು ಎಲ್ಲರೂ ಕಣ್ಣಾರೆ ನೋಡಿದ್ದರು. ಈ ವಿಚಾರವಾಗಿ ವಿವರಣೆ ಕೇಳಿದಾಗ ತನ್ನ ಕಾಲು ಸರಿಯಾಗಿ ಮೂರು ದಿನಗಳು ಕಳೆದಿತ್ತು, ಅದರೂ ತಾನು ಹಣವನ್ನು ಹು೦ಡಿಯಲ್ಲಿ ಹಾಕದೇ ತನ್ನ ಬಳಿಯೇ ಇರಿಸಿಕೊ೦ಡಿದ್ದೆ ಎ೦ದು ಮೌನ ಮುರಿದನು.

ಕಾಲು ಸರಿಯಾದ ಮೇಲೆ ಆ ಹಣದ ಮೇಲಿನ ಅಧಿಕಾರವನ್ನು ಆತ ಕಳೆದುಕೊ೦ಡಿದ್ದ. ಆ ಹಣ ರಾಯರಿಗೆ ಸೇರಿದ್ದಾಗಿತ್ತು. ಇದೆಲ್ಲ ವೃತ್ತಾ೦ತವೂ ರಾಯರ ಇಚ್ಚೆಯ ಮೇರೆಗೆ ನಡೆದಿತ್ತು ಎ೦ದು ಎಲ್ಲರಿಗೂ ವಿದಿತವಾಯಿತು.ಭಕ್ತರಿಬ್ಬರಿಗೂ ರಾಯರು ಕರುಣೆಯಿ೦ದ ಅನುಗ್ರಹಿಸಿದ್ದರು. ಕಾಲು ಸರಿಯಾಯಿತು - ಸಾಲ ತೀರಿತು. ಹೀಗೆ ದಯಾಳುವಾಗಿರುವ ರಾಯರು, 'ಕಲ್ಪವೃಕ್ಷ' 'ಕಾಮಧೇನು' ಎ೦ದು ಭಕ್ತರ ಮನದಲ್ಲಿ ನೆಲೆ ನಿ೦ತಿದ್ದಾರೆ.

-ವೇದವ್ಯಾಸಮೂರ್ತಿ, ಬೆ೦ಗಳೂರು.
Submitted by: Vedavyasamurthy
Submitted on: Sat Aug 05 2023 00:00:07 GMT+0530 (India Standard Time)
Category: Story
Acknowledgements: This is Mine. / Original
Language: ಕನ್ನಡ/Kannada
Search Tags: Sri Raghavendra Swamy, Story
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Story, ಕನ್ನಡ/Kannada, This is Mine. / Original]

Saturday 15 July 2023

No three witnessess... -Sri Aurobindo (श्री अरबिंदो)

Rishi Sri Aurobindo

Many things are bad only in the way people look at them. Things which you consider all right, other people call bad; what you think to be bad, others find it quite natural.

As for facts each mind always arranges them in its own way. It is a well-known phenomenon which psychologists constantly emphasize that each mind arranges facts according to its own impressions, predilections, convenience and, while this may be partly done with a conscious twist, conscious omissions and additions, it is quite or as often and more often done without any wilful intentions and by a sort of subconscious selection in the mental hinterland. That is why no three witnesses of an incident can give the same account of it - unless of course they have talked it over together - each tells a different story.
Submitted by: Sri Aurobindo (श्री अरबिंदो)
Submitted on: Fri Jun 30 2023 22:01:19 GMT+0530 (India Standard Time)
Category: Quote
Acknowledgements: Rishi Sri Aurobindo
Language: English
Search Tags: Psychology of Man. Sri Aurobindo Quotes.
- Submit your work at A Billion Stories
- Read your published work at https://readit.abillionstories.com
- For permission to reproduce content from A Billion Stories in any form, write to editor@abillionstories.com

[category Quote, English, Rishi Sri Aurobindo]