Wednesday 5 September 2018

ಏನು ಕತೆಯೋ -Daya Bhat



ಅಂಗಳ ತುಂಬಾ ಅರಳು ಮಲ್ಲಿಗೆಯ ಘಮಲು
ತೊಟ್ಟಿಲ ಕಂದಮ್ಮನ ಕಾಲ್ಗೆಜ್ಜೆಯಲಿ ಅಚ್ಚರಿಯ ಸೆಳಕು.

ಹಗಲು ರಾತ್ರಿಗಳು ಒಂದರ ಅಂಚಿನಲ್ಲಿ ಮತ್ತೊಂದು ಹೆಣೆದುಕೊಂಡು
ಒಂದರಂತೆ ಇನ್ನೊಂದು... ಮತ್ತೊಂದು ... ಕಾಲ ಬಳಿ ಋತುಗಳ ರಾಶಿ.

ಬಿಸಿಲಿಗೆ ಮೈಯೊಡ್ಡಿದ ಬಿದಿರಿನ ಚಾಪೆ ಹೊರಗೆ ಸುಟ್ಟು ಬೂದಿಯಾಗುತ್ತ
ಒಳಗೆ ಕಾಮಾಲೆ ಕಣ್ಣೊರೆಸುತ್ತ... ನಿಂತ ನೀರು ನಿಂತಲ್ಲಿಯೇ .

ಕೈಗಳು ತೂಗುತಿವೆ ಬರಿದಾದ ತೊಟ್ಟಿಲನು. ಕಂದಮ್ಮ ಹೊರಜಾರಿ ಯುಗಗಳೇ ಆದವು.
ಮನಸು ಮರ್ಕಟ ... ಅಂತರಂಗ- ಸಂತೆ ಪೇಟೆಯ ಗೋಜಲು.

ಮನದಾಚೆ ಹೆಜ್ಜೆಗಳು ಮುಂದೆ ಮುಂದೆ. ಇಲ್ಲಿ ಏನೋ ಹಿಂಜರಿತ.
ಹೊಸ್ತಿಲಾಚೆ ಎಲ್ಲವೂ ಶಾಂತ ಸರೋವರ . ಇಲ್ಲಿ ಕಡಲ ಮೊರೆತ .

ಅರ್ಧ ಬೆಳಗುವ ಚಂದ್ರ ... ಅರ್ಧ ಮಿಣುಕುವ ತಾರೆ
ಅರ್ಥವಾಗದ ಅಪೂರ್ಣತೆ.ಅರ್ಥವಿಲ್ಲದ ಹೋರಾಟ .


-Daya Bhat


Photo By:
Submitted by: Daya Bhat
Submitted on: Tue May 02 2017 09:48:53 GMT+0530 (IST)
Category: Original
Language: ಕನ್ನಡ/Kannada


- Read submissions at http://readit.abillionstories.com
- Submit a poem, quote, proverb, story, mantra, folklore, article, painting, cartoon or drawing at http://www.abillionstories.com/submit

No comments:

Post a Comment